ಬೆಂಗಳೂರು, ಡಿ. 19: ಸಶಸ್ತ್ರ ಪೊಲೀಸ್ ಕಾನ್ಸ್ ಟೇಬಲ್ (ಸಿಎಆರ್/ಡಿಎಆರ್) (ಪುರುಷ) ಎನ್ ಕೆಕೆ-1005 ಮತ್ತು ಕೆಕೆ-444 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಈಗಾಗಲೇ ಇಟಿ-ಪಿ ಎಸ್ ಟಿ ಪರೀಕ್ಷೆಗಳು ನಿಗಧಿಯಾಗಿರುತ್ತದೆ. ಆದರೆ ಕೆಲವು ಅಭ್ಯರ್ಥಿಗಳು ಕಲ್ಯಾಣ ಕರ್ನಾಟಕ ಮತ್ತು ನಾನ್ ಕಲ್ಯಾಣ ಕರ್ನಾಟಕ ಎರಡೂ ಹುದ್ದೆಗಳಿಗೂ ಸಹ ಇಟಿ, ಪಿ ಎಸ್ ಟಿ ಪರೀಕ್ಷೆಗೆ ಆಯ್ಕೆಯಾಗಿರುತ್ತಾರೆ. ಆದರೆ ಎರಡಕ್ಕೂ ಒಂದೇ ದಿನಾಂಕದಂದು ಇಟಿ, ಪಿ ಎಸ್ ಟಿ ಪರೀಕ್ಷೆ ನಿಗದಿಯಾಗಿದ್ದರಿಂದಾಗಿ ಹಲವು ಅಬ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲು ತೊಂದರೆ ಆಗಿತ್ತು.
ಇದರಿಂದ ಹಲವಾರು ಅಬ್ಯರ್ಥಿಗಳು ಪರೀಕ್ಷೆಯಿಂದ ವಂಚಿತರಾಗುವಂತಾಗಿತ್ತು.ಆದರೀಗ ಇಂತಹ ಅಭ್ಯರ್ಥಿಗಳು, ದಿನಾಂಕ 24-12-2020ರಂದು ಮರು ನಡೆಸುವಂತ ಇಟಿ, ಪಿ ಎಸ್ ಟಿ ಪರೀಕ್ಷೆಗೆ ಹಾಜರಾಗುವಂತೆ ರಾಜ್ಯ ಪೊಲೀಸ್ ಇಲಾಖೆ ತಿಳಿಸಿದೆ.ಅಬ್ಯರ್ಥಿಗಳು ಯಾವ ಜಿಲ್ಲೆಯ ಇಟಿ/ಪಿಎಸ್ ಟಿ ಗೆ ಹಾಜರಾಗಿಲ್ಲವೋ ಆ ಜಿಲ್ಲೆಗೆ ದಿನಾಂಕ 24-12-2020 ರಂದು ಹಾಜರಾಗಬೇಕಾಗಿ ಕೋರಿದೆ. ಪರೀಕ್ಷೆಗೆ ವಂಚಿತರಾದವರಿಗೆ ಮತ್ತೊಮ್ಮೆ ಕಾಲ್ಶೀಟ್ ನೀಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.