ಬೆಂಗಳೂರು ಆ 18 : ರಾಜ್ಯದಲ್ಲಿ ಕೊರೊನಾ ಅಲೆ ಹೆಚ್ಚುತ್ತಿದ್ದರೂ ಕೂಡ ರಾಜ್ಯ ಸರ್ಕಾರ ಈಗಾಗಲೇ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳನ್ನು ತೆರೆಯಲು ಸಜ್ಜಾಗಿದೆ. ಆದರೆ ಇದೀಗ ಮಕ್ಕಳಲ್ಲೂ ಕೂಡ ಕೂರೊನಾ ಕಾಣಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಶಾಲೆಗಳನ್ನು ತೆರೆಯದಂತೆ ರಾಜ್ಯ ಸರ್ಕಾರಕ್ಕೆ ಫನಾ ಸಲಹೆ ನೀಡಿದೆ.
ರಾಜ್ಯದಲ್ಲಿ ಶೇ 2 % ಕ್ಕಿಂತ ಕಡಿಮೆ ಪಾಸಿಟಿವಿಟಿ ಇರುವ ಕಡೆ ಶಾಲೆಗಳನ್ನು ತೆರೆಯಲು ಇಗಾಗಲೇ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ. ಇಗಾಗಲೇ ಮೂರನೆ ಅಲೆ ಕೂಡ ಪ್ರಾರಂಭವಾಗಿದ್ದು ಇದರಿಂದ ಮಕ್ಕಳಿಗೆ ತೊಂದರೆ ಆಗುವ ಸಾಧ್ಯತೆ ಹೆಚ್ಚಿದ್ದು, ಇದು ಕಡಿಮೆಯಾದ ಬಳಿಕ ಶಾಲೆ ತರೆಯುವುದು ಸೂಕ್ತ ಎಂಬುವುದು ಫನಾ ತಿಳಿಸಿದೆ. ಇಗಾಗಲೇ ರಾಜ್ಯದಲ್ಲಿ ಶೇ 14% ರಷ್ಟು ಮಕ್ಕಳಿಗೆ ಕೊರೊನಾ ಹಬ್ಬಿದ್ದು ಕಳೆದ 10 ದಿನಗಳಿಂದ 500ಕ್ಕೂ ಹೆಚ್ಚು ಮಕ್ಕಳಲ್ಲಿ ಕೊರೊನಾ ಕಾಣಿಸಿಕೊಂಡಿದ್ದು ಹಾಗಾಗಿ ಸದ್ಯಕ್ಕೆ ಶಾಲೆ ತೆರೆಯದಿರುವುದು ಸೂಕ್ತಎಂದು ಫನಾ ಅಧ್ಯಕ್ಷ ಡಾ. ಪ್ರಸನ್ನ ತಿಳಿಸಿದ್ದಾರೆ.