• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜಕೀಯ

ಪಾಕಿಸ್ತಾನ ಕೊಟ್ಟ ನಂತರವೂ ನಿಮ್ಮನ್ನು ಇಲ್ಲೇ ಉಳಿಸಿಕೊಂಡಿದ್ದು ನಮ್ಮ ಔದಾರ್ಯತೆ : ಸಿ.ಟಿ ರವಿ!

Mohan Shetty by Mohan Shetty
in ರಾಜಕೀಯ, ರಾಜ್ಯ
CT Ravi
0
SHARES
0
VIEWS
Share on FacebookShare on Twitter

ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜನೆ ಮಾಡಿದ ನಂತರವೂ, ಕೋಟ್ಯಾಂತರ ಮುಸ್ಲಿಂಮರನ್ನು ಇಲ್ಲಿಯೇ ಉಳಿಸಿಕೊಳ್ಳಲು ಅವಕಾಶ ನೀಡಿದ್ದು, ಹಿಂದೂಗಳ ಹೃದಯ ಔದಾರ್ಯವನ್ನು ತೋರಿಸುತ್ತದೆ ಎಂದು ಬಿಜೆಪಿ ನಾಯಕ ಸಿಟಿ ರವಿ ಹೇಳಿದರು. ಹಿಜಾಬ್ ತೀರ್ಪು ವಿರೋಧಿಸಿ ಮುಸ್ಲಿಂ ಸಮುದಾಯ ಒಂದು ದಿನದ ಬಂದ್ ಆಚರಿಸಿದಕ್ಕೆ ಪ್ರತಿಕ್ರಿಯೆಯಾಗಿ ಕರಾವಳಿಯ ಅನೇಕ ಹಿಂದೂಗಳ ಧಾರ್ಮಿಕ ಉತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸಿದ ಕ್ರಮವನ್ನು ಸಮರ್ಥಿಸಿಕೊಂಡು ಮಾತನಾಡಿದ ಅವರು, ಹಿಂದೂಗಳ ಮಟನ್ ಸ್ಟಾಲ್ ನಲ್ಲಿ ಮುಸ್ಲಿಂಮರು ಮಾಂಸ ಖರೀದಿಸುತ್ತಾರೆಯೇ ಎಂದು ಪ್ರಶ್ನಿಸಿದರು.

ನಾವು ಹಿಂದೂಗಳು ಜಗತ್ತಿನ ಎಲ್ಲ ಧರ್ಮಗಳಿಗೂ ನೆಲೆ ನೀಡಿದ್ದೇವೆ. ಔದಾರ್ಯತೆ ಎಂಬುದು ನಮ್ಮ ರಕ್ತದಲ್ಲಿದೆ. ಇನ್ನು ಜಾತ್ಯಾತೀತತೆಯನ್ನು ಬೇರೆಯವರಿಗೆ ಬೋಧಿಸುವ ಮುನ್ನ ನೀವು ಜಾತ್ಯಾತೀತರಾಗಿ ಎಂದರು. ಇನ್ನು ಜಾತ್ಯಾತೀತತೆಯ ಬಗ್ಗೆ ಭಾಷಣ ಮಾಡುವವರು, ಆಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾ ದೇಶದಲ್ಲಿದ್ದ ಹಿಂದೂಗಳು ಎಲ್ಲಿ ಹೋದರು? ದೇಶ ವಿಭಜನೆಯಾದಾಗ ಪಾಕಿಸ್ತಾನದಲ್ಲಿದ್ದ 40 ಲಕ್ಷ ಹಿಂದೂಗಳನ್ನು ಹತ್ಯೆ ಮಾಡಿದ್ದು ಯಾರು? ಹಿಂದೂಗಳ ಹತ್ಯೆ ಮಾಡಿ ರೈಲುಗಳಲ್ಲಿ ತುಂಬಿ ಕಳುಹಿಸಿದ್ದು ಯಾರು?

ಬಾಂಗ್ಲಾದೇಶದಲ್ಲಿನ ಇಸ್ಕಾನ್ ಮಂದಿರಕ್ಕೆ ಬೆಂಕಿ ಇಟ್ಟು, ಮಂದಿರವನ್ನು ದೋಚಿದ್ದು ಯಾರು? ಇನ್ನು ಶೇಕಡಾ ೯೦ ರಷ್ಟು ಹಿಂದೂಗಳಿರುವ ಕಡೆ ಶೇಕಡಾ ೧೦ರಷ್ಟು ಇರುವ ಮುಸ್ಲಿಂಮರು ಸುರಕ್ಷಿತವಾಗಿ ಬದುಕಬಹುದು. ಆದರೆ ಶೇಕಡಾ ೫೦ ರಷ್ಟು ಇರುವ ಮುಸ್ಲಿಂಮರ ನಡುವೆ ಶೇಕಡಾ ೫೦ರಷ್ಟು ಇರುವ ಹಿಂದೂಗಳು ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ಹೀಗಾಗಿಯೇ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂಗಳು ನಿರ್ಣಾಮವಾಗಿ ಹೋದರು ಎಂದು ಮಾರ್ಮಿಕವಾಗಿ ನುಡಿದರು.

ಇನ್ನು ಹಲಾಲ್ ಮೂಲಕವೂ ಮತಾಂಧತೆಯನ್ನು ಹೇರವಾಗುತ್ತಿದೆ. ಹಲಾಲ್ ಎಂದರೆ ಏನು ಎಂಬುದನ್ನು ಕಾಂಗ್ರೆಸ್ ನಾಯಕರೇ ಉತ್ತರಿಸಬೇಕು. ಕಾಂಗ್ರೆಸ್ ಪಕ್ಷದ ರೀತಿ ಸೋಗಲಾಡಿತನದ ರಾಜಕೀಯವನ್ನು ನಾವು ಮಾಡುವುದಿಲ್ಲ. ಇರುವ ಸತ್ಯವನ್ನು ಒಪ್ಪಿಕೊಂಡು ನೇರವಾಗಿ ಹೇಳುತ್ತೇವೆ. ರಾಜಕೀಯಕ್ಕಾಗಿ ಸೋಗಲಾಡಿತನ ಪ್ರದರ್ಶಿಸುವ ಜಾಯಮಾನ ನಮ್ಮದಲ್ಲ. ನಮ್ಮ ತಾಳ್ಮೆಗೂ ಒಂದು ಮೀತಿ ಇರುತ್ತದೆ. ಅದನ್ನು ಮುಸ್ಲಿಂಮರು ಅರ್ಥ ಮಾಡಿಕೊಳ್ಳಬೇಕು.

ct ravi

ಹಿಂದೂಗಳ ಧಾರ್ಮಿಕ ಕಟ್ಟಡಗಳಲ್ಲಿ ಮುಸ್ಲಿಂಮರಿಗೆ ವ್ಯಾಪಾರ ಮಾಡಲು ನಿರ್ಬಂಧ ವಿಧಿಸಿರುವುದಕ್ಕೆ ವಿರೋಧಿಸುವವರು, ಅಜ್ಮೀರ್ ದರ್ಗಾದ ಸುತ್ತಮುತ್ತ ಎಷ್ಟು ಜನ ಹಿಂದೂಗಳ ವ್ಯಾಪಾರಕ್ಕೆ ಅನುಮತಿ ನೀಡಿದ್ದಾರೆ ಎಂದು ತಿಳಿಸಲಿ ಎಂದು ವಾಗ್ದಾಳಿ ನಡೆಸಿದರು.

Tags: ctraviKarnatakapoliticalpoliticsstate

Related News

ಉರಿಗೌಡ – ನಂಜೇಗೌಡ ವಿವಾದ : ಬಿಜೆಪಿ ನಾಯಕರಿಗೆ ಖಡಕ್‌ಸೂಚನೆ !
ರಾಜಕೀಯ

ಉರಿಗೌಡ – ನಂಜೇಗೌಡ ವಿವಾದ : ಬಿಜೆಪಿ ನಾಯಕರಿಗೆ ಖಡಕ್‌ಸೂಚನೆ !

March 20, 2023
ಬದಲಾದ ಲೆಕ್ಕಾಚಾರ ; ವಿಧಾನ ಪರಿಷತ್‌ನತ್ತ ಸಿದ್ದರಾಮಯ್ಯ ಒಲವು..?!
ರಾಜಕೀಯ

ಬದಲಾದ ಲೆಕ್ಕಾಚಾರ ; ವಿಧಾನ ಪರಿಷತ್‌ನತ್ತ ಸಿದ್ದರಾಮಯ್ಯ ಒಲವು..?!

March 20, 2023
ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರ  ಅತಿದೊಡ್ಡ TRP : ಮಮತಾ ಬ್ಯಾನರ್ಜಿ
ದೇಶ-ವಿದೇಶ

ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರ  ಅತಿದೊಡ್ಡ TRP : ಮಮತಾ ಬ್ಯಾನರ್ಜಿ

March 20, 2023
ಆಜಾನ್ ವಿರುದ್ಧ ಕೆ.ಎಸ್ ಈಶ್ವರಪ್ಪ ಹೇಳಿಕೆಗೆ ಆಕ್ರೋಶ ; ಡಿ.ಸಿ ಕಛೇರಿ ಎದುರು ಆಜಾನ್ ಪಠನೆ
ರಾಜಕೀಯ

ಆಜಾನ್ ವಿರುದ್ಧ ಕೆ.ಎಸ್ ಈಶ್ವರಪ್ಪ ಹೇಳಿಕೆಗೆ ಆಕ್ರೋಶ ; ಡಿ.ಸಿ ಕಛೇರಿ ಎದುರು ಆಜಾನ್ ಪಠನೆ

March 20, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.