ಎಂಥಾ ಅಪಾಯಕಾರಿ ದೃಶ್ಯ ಇದು. ಕೊಂಚ ಮೈಮರೆತ್ರು ಸಾವು ಖಚಿತ. ಇದು ಯಲಹಂಕದಲ್ಲಿ ಬೆಂಗಳೂರು-ದೊಡ್ಡಬಳ್ಳಾಪುರ ನಡುವಿನ ರೈಲು ಹಳಿ ದಾಟಲು ಜನರು ಪಡೋ ಪರದಾಟದ ದೃಶ್ಯ. ಶಾಲೆಗೆ ಹೋಗೋ ಮಕ್ಕಳ ಗೋಳಿಲ್ಲಿ ಕೇಳುವವರೇ ಇಲ್ಲ ಬಿಡಿ. ಇನ್ನು ವೃದ್ಧರ ಪಾಡು ದೇವರಿಗೆ ಪ್ರೀತಿ.
ಇದಕ್ಕಿಂತ ಭಯಾನಕ ಈ ರೈಲ್ವೇ ಹಳಿಯಲ್ಲಿ ಗೂಡ್ಸ್ ಗಾಡಿ ಸೃಷ್ಟಿಸೋ ಸಮಸ್ಯೆ. ಇದೇ ಜಾಗದಲ್ಲಿ ಗೂಡ್ಸ್ ಗಾಡಿಯನ್ನು ನಿಲ್ಲಿಸುತ್ತಾರೆ. ಅದು ಒಂದು ಬಾರಿ ನಿಂತ್ರೆ ಒಂದು ವಾರ ಅಲ್ಲಾಡೋದೇ ಇಲ್ಲ. ಐದಾರು ದಿನಾನೂ ಜನ ಇದೇ ರೀತಿ ಸರ್ಕಸ್ ಮಾಡ್ತಾನೇ ಓಡಾಡಬೇಕು.
ಇದಕ್ಕೆಲ್ಲಾ ಮುಖ್ಯ ಕಾರಣ ಇಲ್ಲಿ ರೈಲ್ವೇ ಅಂಡರ್ ಬ್ರಿಡ್ಜ್ ಇಲ್ಲದ್ದು ಅಂತಾರೆ ಸಾರ್ವಜನಿಕರು. ಜನರ ಸಂಕಷ್ಟ ಅರಿತ ರೈಲ್ಬೇ ಇಲಾಖೆ ಇಲ್ಲಿ ಅಂಡರ್ ಬಿಡ್ಜ್ ಹಾಗೂ ಫ್ಲೈಓವರ್ ಕಟ್ಟಲು ಟೆಂಡರ್ಗೆ ಕರೆದಿತ್ತು. ಪ್ಲೈ ಓವರ್ ಕಾಮಗಾರಿ ಪೂರ್ಣಗೊಂಡಿತು ಆದ್ರೆ, ಜನರ ಓಡಾಟಕ್ಕೆ ಮುಖ್ಯವಾಗಿ ಬೇಕಾಗಿದ್ದ ಅಂಡರ್ ಬ್ರಿಡ್ಜ್ ಕಾಮಗಾರಿ ಪ್ರಾರಂಭವೇ ಆಗಿಲ್ಲ. ಇದರಿಂದ ಜನರ ಸಂಕಷ್ಟ ಇನ್ನಷ್ಟು ಹೆಚ್ಚಿದೆ.
ಈ ಬಗ್ಗೆ ಸಾಕಷ್ಟು ಬಾರಿ ಯಲಹಂಕ ಶಾಸಕರಾದ ವಿಶ್ವನಾಥ್ ಅವರಿಗೆ ದೂರು ನೀಡಲಾಗಿದೆ. ಆದ್ರೆ ಅವರು ಯಾಕೋ ದೂರಿಗೆ ಸ್ಪಂದಿಸಿ, ಜನರ ಸಮಸ್ಯೆ ನಿವಾರಿಸಲು ಮನಸ್ಸೇ ಮಾಡುತ್ತಿಲ್ಲ. ಈಗಲಾದ್ರೂ ಶಾಸಕರು, ಸಂಸದರು ಮನಸ್ಸು ಮಾಡಿ ಇಲ್ಲಿ ಅಂಡರ್ ಬಿಡ್ಜ್ ನಿರ್ಮಾಣ ಮಾಡಿದ್ರೆ ಜನರ ಪ್ರಾಣ ಉಳಿಯುತ್ತೆ.
ಯಲಹಂಕದಿಂದ ಶ್ರೀನಿವಾಸ್, ಸಿಟಿಜನ್ ಜರ್ನಲಿಸ್ಟ್, ವಿಜಯಟೈಮ್ಸ್