- ಬೆಂಗಳೂರು ವಾಯು ಗುಣಮಟ್ಟ ಕುಸಿತ (DCM action on air pollution)
- ಶಾಸಕ ದಿನೇಶ್ ಗೂಳಿಗೌಡರ ಮನವಿಗೆ ಸ್ಪಂದಿಸಿದ ಡಿಸಿಎಂ; ತಂತ್ರಜ್ಞರ ತಂಡದಿಂದ ರೋಡ್ ಮ್ಯಾಪ್ ಮತ್ತು ತುರ್ತು ಪರಿಹಾರ ಕ್ರಮಗಳ ಶಿಫಾರಸು
- ಉಸಿರಾಟ ಸಮಸ್ಯೆ, ಆಸ್ತಮಾ ಪ್ರಕರಣಗಳ ಏರಿಕೆ; ಸಮಗ್ರ ಸ್ವಚ್ಛ ವಾಯು ಕ್ರಿಯಾ ಯೋಜನೆಗೆ ತಜ್ಞರ ಸಮಿತಿ ನೇಮಕ
Bengaluru: ರಾಜ್ಯದ ರಾಜಧಾನಿಯಾದ ಬೆಂಗಳೂರು ಇಂದು ದೇಶದ (DCM action on air pollution) ಪ್ರಮುಖ ಐಟಿ ಕೇಂದ್ರವಷ್ಟೇ ಅಲ್ಲ, ಲಕ್ಷಾಂತರ ಜನರ ಬದುಕಿನ ಆಧಾರವಾಗಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ವಾಯು ಮಾಲಿನ್ಯವು ಗಂಭೀರ ಮಟ್ಟದಲ್ಲಿ ಏರಿಕೆ ಕಂಡಿದ್ದು, (DCM action on air pollution) ಸಾರ್ವಜನಿಕ ಆರೋಗ್ಯಕ್ಕೆ ದೊಡ್ಡ ಅವಘಡದ ಸೂಚನೆ ನೀಡುತ್ತಿದೆ.
ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಮತ್ತು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ದಿನೇಶ್ ಗೂಳಿಗೌಡರು ನೀಡಿದ ಮನವಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಕ್ಷಣ ಸ್ಪಂದಿಸಿದ್ದಾರೆ.
ಅವರು ಮುಖ್ಯ ಕಾರ್ಯದರ್ಶಿಗೆ ತ್ವರಿತ ಸೂಚನೆ ನೀಡುತ್ತಾ, ನಗರದಲ್ಲಿನ ವಾಯು ಮಾಲಿನ್ಯ ತಡೆಗೆ ತ್ವರಿತ ಕ್ರಮ ಕೈಗೊಳ್ಳಲು ತಜ್ಞರ ಸಮಿತಿ ರಚಿಸುವಂತೆ ಆದೇಶಿಸಿದ್ದಾರೆ.
ದೆಹಲಿಯಂತೆ ಭವಿಷ್ಯದಲ್ಲಿ ಬೆಂಗಳೂರಿಗೂ ತೀವ್ರ ಮಾಲಿನ್ಯದ ಅಪಾಯ ಎದುರಾಗಬಹುದು ಎಂಬ ಆತಂಕವೇ ಈ ಕ್ರಮಕ್ಕೆ ಕಾರಣವಾಗಿದೆ.
ಇನ್ನು ಬೆಂಗಳೂರು ನಗರದ ಜನಸಂಖ್ಯೆ ಮತ್ತು ವಾಹನ ಸಂಚಾರದ ದಟ್ಟಣೆ ಬೆಂಗಳೂರಿನ ವಾಯು ಗುಣಮಟ್ಟಕ್ಕೆ ಪ್ರಮುಖ ಸವಾಲಾಗಿ ಪರಿಣಮಿಸಿದೆ.
ಈಗಾಗಲೇ 1.47 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಮಹಾನಗರದಲ್ಲಿ 1.23 ಕೋಟಿ ಮೋಟಾರ್ ವಾಹನಗಳು ನೋಂದಾಯಿಸಿರುವುದು ಚಿಂತಾಜನಕ ಸಂಗತಿ.
ಇದರಿಂದ ಪ್ರತಿಯೊಬ್ಬ ನಾಗರಿಕನಿಗೂ ಒಂದು ವಾಹನ ಇರುವಂತಾದ ಅನುಪಾತ ನಿರ್ಮಾಣವಾಗಿದೆ.
ಪ್ರತಿದಿನವೂ 2,500ಕ್ಕೂ ಅಧಿಕ ಹೊಸ ವಾಹನಗಳು ರಸ್ತೆ ಮೇಲೆ ಸೇರುತ್ತಿರುವುದು ಪರಿಸರದ ಮೇಲುಸ್ತುವಾರಿಕೆಗೆ ಗಂಭೀರ ಸವಾಲು.
ವಿಶೇಷವಾಗಿ 84 ಲಕ್ಷಕ್ಕೂ ಹೆಚ್ಚಿನ ದ್ವಿಚಕ್ರ ವಾಹನಗಳಿರುವುದರಿಂದ ಹೊರಸೂಸುವಿಕೆಯ ಪ್ರಮಾಣ ಹೆಚ್ಚಾಗಿದೆ.
ಇದರಿಂದ ನಗರದಲ್ಲಿ ಈಗಾಗಲೇ 50–70 ನಡುವೆ ತಿರುಗಾಡುತ್ತಿರುವ ವಾಯು ಗುಣಮಟ್ಟ ಸೂಚ್ಯಂಕ (AQI) ಮುಂದಿನ ವರ್ಷಗಳಲ್ಲಿ ‘ತೀವ್ರ ಮಾಲಿನ್ಯ’ ವರ್ಗಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಮಾಲಿನ್ಯದ ಈ ಏರಿಕೆ ಸಾಮಾನ್ಯ ಸಮಸ್ಯೆಯಲ್ಲ; ಇದು ನಗರವಾಸಿಗಳ ದೈನಂದಿನ ಆರೋಗ್ಯವನ್ನು ಸವಾಲಿಗೆ ಸಿಲುಕಿಸುತ್ತಿದೆ.
ಮಕ್ಕಳು ಮತ್ತು ಹಿರಿಯರು ವಿಶೇಷವಾಗಿ ಹೆಚ್ಚು ಬಾಧಿತರಾಗುತ್ತಿದ್ದಾರೆ. ಉಸಿರಾಟದ ಸಮಸ್ಯೆಗಳು, ದೀರ್ಘಕಾಲದ ಅಲರ್ಜಿಗಳು, ಆಸ್ತಮಾ, ಹೃದಯ ಸಂಬಂಧಿ ಕಾಯಿಲೆಗಳು ವೇಗವಾಗಿ ಹೆಚ್ಚುತ್ತಿವೆ.
ದೀರ್ಘಾವಧಿಯಲ್ಲಿ ವಾಯು ಮಾಲಿನ್ಯವು ಜೀವಿತಾವಧಿ ಕಡಿಮೆಯಾಗಲು ಕಾರಣವಾಗುತ್ತದೆ ಎಂಬ ವೈದ್ಯಕೀಯ ಅಧ್ಯಯನಗಳಿವೆ.
ಇದನ್ನೆಲ್ಲ ಪರಿಗಣಿಸಿದ ಶಾಸಕರಾದ ದಿನೇಶ್ ಗೂಳಿಗೌಡರು ಪರಿಸರ ತಜ್ಞರು, ಸಾರಿಗೆ ತಜ್ಞರು, ಸಾರ್ವಜನಿಕ ಆರೋಗ್ಯ ಅಧ್ಯಯನಗಾರರು ಹಾಗೂ ಸಂಬಂಧಿಸಿದ ಇಲಾಖೆಗಳಿಂದ ಅಧಿಕಾರಿಗಳನ್ನು ಒಳಗೊಂಡ ಸಮಗ್ರ ತಜ್ಞರ ಸಮಿತಿಯನ್ನು ತಕ್ಷಣ ರಚಿಸಲು ಮನವಿ ಸಲ್ಲಿಸಿದ್ದರು.
ಈ ತಜ್ಞರ ಸಮಿತಿಯ ಮುಖ್ಯ ಜವಾಬ್ದಾರಿ ಮುಂದಿನ ಹತ್ತು ವರ್ಷಗಳಲ್ಲಿ ಬೆಂಗಳೂರಿನ ಮಾಲಿನ್ಯ ಹೇಗೆ ಬೆಳೆಯಬಹುದು ಎಂಬುದನ್ನು ನಿಖರವಾಗಿ ವಿಶ್ಲೇಷಿಸುವುದು.
ತಾತ್ಕಾಲಿಕ ಹಾಗೂ ದೀರ್ಘಾವಧಿಯ ಮಾಲಿನ್ಯ ತಗ್ಗಿಸುವ ಕ್ರಮಗಳನ್ನು ಸರ್ಕಾರಕ್ಕೆ ಶಿಫಾರಸು ಮಾಡುವುದು ಇವರ ಕಾರ್ಯ.
ವಾಹನ ಹೊರಸೂಸುವಿಕೆ ನಿಯಮಗಳ ಅನುಷ್ಠಾನ ಬಲಪಡಿಸುವುದು, ಹೊಸ ವಾಹನಗಳ ನಿಗದಿತ ನಿಯಂತ್ರಣ, ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಿಸುವ ತಂತ್ರಜ್ಞಾನ, ರಸ್ತೆ ಸಂಚಾರ ಸುಧಾರಣೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸಮಿತಿ ಮಾರ್ಗಸೂಚಿಗಳನ್ನು ನೀಡಲಿದೆ.
ಜೊತೆಗೆ, ‘ಬೆಂಗಳೂರಿನ ಸಮಗ್ರ ಸ್ವಚ್ಛ ವಾಯು ಕ್ರಿಯಾ ಯೋಜನೆ’ ರೂಪಿಸುವುದೂ ಇವರ ಪ್ರಮುಖ ಗುರಿಗಳಲ್ಲೊಂದು.
ಇನ್ನು ವಾಯು ಗುಣಮಟ್ಟ ಕುಸಿಯದಂತೆ ತುರ್ತು ಕಾರ್ಯಾಚರಣೆ ಮತ್ತು ಶಕ್ತಿಶಾಲಿ ಯೋಜನೆಗಳ ಅಗತ್ಯ ಇರುವ ಈ ಸಂದರ್ಭದಲ್ಲಿ ಸರ್ಕಾರದ ಚುರುಕಾದ ಕ್ರಮ ನಾಗರಿಕರಲ್ಲಿ ಹೊಸ ನಿರೀಕ್ಷೆಯನ್ನು ಉಂಟುಮಾಡಿದೆ.
ಇದನ್ನು ಓದಿ : ಚಿಕ್ಕಮಗಳೂರು ದತ್ತ ಜಯಂತಿ ಬ್ಯಾನರ್ ತೆರವು ವಿಚಾರ ದಲ್ಲಿ ಮಾರಾಮಾರಿ: ಕಾಂಗ್ರೆಸ್ ಮುಖಂಡನ ಬರ್ಬರ ಹ*