ಬೆಂಗಳೂರು,ಜೂ.22: ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡರ್ ಎಂಟರ್ಪ್ರೈಸಸ್ (ನೈಸ್) ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರಿಗೆ ದಂಡ ವಿಧಿಸಲಾಗಿದೆ.
2011ರಲ್ಲಿ ಖಾಸಗಿ ಸುದ್ದಿ ಮಾಧ್ಯಮಕ್ಕೆ ನೀಡಿದ್ದ ಸಂದಷ೯ನ ಒಂದರಲ್ಲಿ ದೇವೇಗೌಡರು ನೀಡಿದ್ದ ಹೇಳಿಕೆಗಳನ್ನು ಆಧರಿಸಿ ದೇವೇಗೌಡರ ವಿರುದ್ಧ ನೈಸ್ ಸಂಸ್ಥೆ ಮೊಕದ್ದಮೆ ಹೂಡಿತ್ತು. ”ದೇವೇಗೌಡರ ಹೇಳಿಕೆಯಿಂದ ಸಂಸ್ಥೆಯ ಘನತೆಗೆ ಚ್ಯುತಿಯಾಗಿದ್ದು, ಅದಕ್ಕಾಗಿ ರೂ. 10 ಕೋಟಿ ಪರಿಹಾರ ಕೊಡಿಸಬೇಕು,” ಎಂದು ನೈಸ್ ಸಂಸ್ಥೆ ಕೋರಿತ್ತು.
ಇದೀಗ ಕೋಟ್೯ನಲ್ಲಿ ಸಂಸ್ಥೆ ವಿರುದ್ಧ ಆರೋಪ ಸಾಬಿತುಪಡಿಸುವಲ್ಲಿ ದೇವೇಗೌಡರು ವಿಫಲವಾಗಿದ್ದರೆ. ಇದರಿಂದ ನೈಸ್ ಸಂಸ್ಥೆಗೆ 2 ಕೋಟಿ ರೂ. ನೀಡಬೇಕು ಮತ್ತು ಮುಂದೆ ಯಾವುದೇ ಮಾನಹಾನಿ ಹೇಳಿಕೆ ನೀಡಬಾರದೆಂದು ಸಿಟಿ ಸಿವಿಲ್ ಕೊಟ್೯ನ ನ್ಯಾಯಾಧೀಶ ಮಲ್ಲನಗೌಡ ತಮ್ಮ ಆದೇಶದಲ್ಲಿ ಹೇಳಿದ್ದಾರೆ.