- ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಸೇರ್ಪಡೆ
- ಪ್ರಸಕ್ತ ಸಾಲಿನಿಂದಲೇ ಪಠ್ಯ ಕೈಬಿಟ್ಟಿರೋದಾಗಿ ತಿಳಿಸಲಾಗಿದೆ
- ಮೊಘಲರು, ದಿಲ್ಲಿ ಸುಲ್ತಾನರ ಕುರಿತಾದ ಪಾಠಕ್ಕೆ ಕೊಕ್
Bengaluru: ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿಯು (NCERT) 7ನೇ ತರಗತಿಯ ಪಠ್ಯಪುಸ್ತಕದಲ್ಲಿ ಮೊಘಲರು ಮತ್ತು ದೆಹಲಿ (Mughals and Delhi) ಸುಲ್ತಾನರ ಎಲ್ಲ ಉಲ್ಲೇಖಗಳನ್ನು ತೆಗೆದುಹಾಕಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ (NEP) ಮತ್ತು ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (NCFSE) 2023ಕ್ಕೆ ಅನುಗುಣವಾಗಿ ಪಠ್ಯ (Delhi Sultans cut in CBSE syllabus) ಸೇರ್ಪಡೆ ಮಾಡಲಾಗಿದೆ. ಭಾರತೀಯ ಸಂಪ್ರದಾಯ, ತತ್ವ, ಜ್ಞಾನ ವ್ಯವಸ್ಥೆ ಮತ್ತು ಸ್ಥಳೀಯ ಮಹತ್ವದ ಸಂಗತಿಗಳನ್ನು ಶಾಲಾ ಶಿಕ್ಷಣದಲ್ಲಿ (school education) ಅಳವಡಿಸುವುದಕ್ಕೆ ವಿಶೇಷ ಒತ್ತು ನೀಡಲಾಗಿದೆ.
ನಮ್ಮ ದೇಶದಲ್ಲಿ ಈಗಾಗಲೇ ಪದವಿ ಪೂರ್ಣಗೊಳಿಸಿದ (Completed graduation) ಎಲ್ಲರೂ ಕೂಡ ಭಾರತವನ್ನು ಆಳಿದ ಹಾಗೂ ಉದ್ಧಾರ ಮಾಡಿದ ಪರಮೋಚ್ಛ ರಾಜಮನೆತನಗಳು ಎಂದರೆ ಅದು ದೆಹಲಿ ಸುಲ್ತಾನರು (Delhi Sultanates) , ಮೊಘಲರು ಎಂದು ಓದಿಕೊಂಡು ಬಂದಿದ್ದಾರೆ. ಇನ್ನು ಪರೀಕ್ಷೆಗಳಲ್ಲಿ ಕೂಡ ಪುಟುಗಟ್ಟಲೇ ಮೊಘಲರು ಹಾಗೂ ದೆಹಲಿ ಸುಲ್ತಾನರ ಆಡಳಿತ ಮತ್ತು ಇತಿಹಾಸವನ್ನೇ ಬರೆದು ಪಾಸ್ ಆಗಿರುತ್ತಾರೆ.
ಇನ್ಮುಂದೆ ಕೇಂದ್ರ ಸರ್ಕಾರವು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (Central Board of Secondary Education-CBSE) ಪಠ್ಯದಲ್ಲಿ ಭಾರೀ ಪ್ರಮಾಣದ ಬದಲಾವಣೆಯನ್ನು ಮಾಡಿದೆ. ಈವರೆಗೆ ಸಿಬಿಎಸ್ಇ ಪಠ್ಯ (CBSE Text) ಪುಸ್ತಕದಲ್ಲಿ ಇದ್ದ ದೆಹಲಿ ಸುಲ್ತಾನರು ಹಾಗೂ ಮೊಘಲರು ಪಾಠಗಳನ್ನು ತೆಗೆದು ಹಾಕಲಾಗಿದೆ.

ಇದರ ಬದಲಾಗಿ ಹಿಂದೂ ಧರ್ಮದ (Hinduism) ಅತಿದೊಡ್ಡ ಹಾಗೂ ಪವಿತ್ರ ಆಚರಣೆಗಳಲ್ಲಿ ಒಂದಾಗಿರುವ ಕೋಟಿ, ಕೋಟಿ ಜನರು ಒಟ್ಟಿಗೆ ಸೇರಿ ಆರಣೆ ಮಾಡುವಂತಹ ಮಹಾಕುಂಭ ಮೇಳ, ಕೇಂದ್ರ ಸರ್ಕಾರದ ಭಾರತದ (Central Government of India) ಉತ್ಪಾದನಾ ಸ್ವಾವಲಂಬಿ ಯೋಜನೆಯಾದ ಮೇಕ್ ಇನ್ ಇಂಡಿಯಾ ಹಾಗೂ ದೇಶದಲ್ಲಿ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ (Encouraging girls) ನೀಡುವ ನಿಟ್ಟಿನಲ್ಲಿ ಆರಂಭಿಸಲಾದ ಬೇಟಿ ಬಜಾವೋ- ಬೇಟಿ ಪಾಢಾವೊ ಆಂದೋಲನ ವಿಷಯಗಳನ್ನು ದೆಹಲಿ ಸುಲ್ತಾನದ ಪಠ್ಯದ ಬದಲಿಗೆ ಸೇರ್ಪಡೆ ಮಾಡಲಾಗಿದೆ.
ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಪಠ್ಯ ಸೇರ್ಪಡೆ ಮಾಡಲಾಗಿದೆ. ಪ್ರಾಥಮಿಕ (Primary) ಹಾಗೂ ಪ್ರೌಢ ಶಾಲಾ ಶಿಕ್ಷಣದಲ್ಲಿ ಭಾರತೀಯ (Indian in high school education) ಸಂಪ್ರದಾಯ, ಭಾರತೀಯ ಸಿದ್ಧಾಂತ, ಜ್ಞಾನ ವ್ಯವಸ್ಥೆ ಹಾಗೂ ಸ್ಥಳೀಯ ವಿಚಾರಗಳನ್ನು ಪಠ್ಯದಲ್ಲಿ ಸೇರ್ಪಡೆ ಮಾಡುವುದಕ್ಕೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (National Council of Educational Research and Training-NCERT) ನಿರ್ಧಾರ ಕೈಗೊಂಡಿದೆ.
ಇದನ್ನು ಓದಿ : http://ಸಿಂಧೂ ನೀರು ಬಂದ್, ವಾಘಾ ಗೇಟ್ ಕ್ಲೋಸ್:ಯುದ್ಧಕ್ಕೆ ಪರೋಕ್ಷ ಆಹ್ವಾನ ನೀಡಿದಂತೆ ಎಂದ ಪಾಕ್
ಇನ್ನು 7ನೇ ತರಗತಿಯಲ್ಲಿ ಭಾರತ ಸಾಮ್ರಾಜ್ಯಗಳು ಹಾಗೂ ಪವಿತ್ರ ಭೂಗೋಳ ಶಾಸ್ತ್ರ (Geography) ಅಧ್ಯಯನದಲ್ಲಿ ಬದಲಾವಣೆ ಅಗಾಧ ಪ್ರಮಾಣದ ಬದಲಾವಣೆಗಳನ್ನು ಮಾಡಲಾಗಿದೆ. (Delhi Sultans cut in CBSE syllabus) ಈ 7ನೇ ತರಗತಿ ಪಠ್ಯಪುಸ್ತಕದಲ್ಲಿ ಮೊಘಲರ ಪಾಠಗಳನ್ನು ಸಂಪೂರ್ಣ ಕೈಬಿಡಲಾಗಿದೆ. ಪ್ರಸಕ್ತ ಸಾಲಿನಿಂದಲೇ ಪಠ್ಯ ಕೈಬಿಟ್ಟಿರುವುದಾಗಿ ಎನ್ಸಿಇಆರ್ಟಿ (NCERT) ಆದೇಶವನ್ನು ಹೊರಡಿಸಿದೆ.