- ಕೇಂದ್ರ ಗೃಹಸಚಿವರಿಗೆ ಸಂಪೂರ್ಣ ಮಾಹಿತಿ ನೀಡಿದ್ದಾಗಿ ಬಿವೈವಿ ಹೇಳಿಕೆ
- ರಾಜ್ಯದಲ್ಲಿ ಹಿಂದೂ ವಿರೋಧಿ ಮನೋಭಾವನೆ ಹೊಂದಿದ ಸರ್ಕಾರವೆಂದು ಕಿಡಿ
- ಹೈ ಕಮಾಂಡ್ ಸೂಚನೆಯಂತೆ ನಡೆಯಲು ಬಿಜೆಪಿ ಪಡೆ ತಯಾರಿ (Dharmasthala issue has reached the BJP high command)
ಕರ್ನಾಟಕ ರಾಜಕೀಯದಲ್ಲಿ ಕಳೆದ ಕೆಲವು ವಾರಗಳಿಂದ ಚರ್ಚೆಯಾಗುತ್ತಿರುವ ಧರ್ಮ** ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದಿದೆ.
ಬುರುಡೆ ಗ್ಯಾಂಗ್(Burude gang) ವಿರುದ್ಧ ನಡೆಯುತ್ತಿರುವ ತನಿಖೆ, ಯೂಟ್ಯೂಬ್(YouTube) ಮೂಲಕ ಹರಡಿದ ಪ್ರಚಾರ, ಮತ್ತು ಇದರ ಹಿಂದೆ ಇರುವ ಶಕ್ತಿಗಳ ಬಗ್ಗೆ ವಿಚಾರಣೆ ಒಂದೊಂದಾಗಿ ಹೊರಬರುತ್ತಿದೆ.
ಇದೇ ವೇಳೆ, ಪ್ರಕರಣ ರಾಜ್ಯ ಸೀಮೆ ಮೀರಿ ನೇರವಾಗಿ ದೆಹಲಿಯ ರಾಜಕೀಯ ಅಂಗಳ ತಲುಪಿದ್ದು, ಬಿಜೆಪಿ ಹೈಕಮಾಂಡ್ಗೂ(BJP High Command) ವರದಿ ಸಲ್ಲಿಕೆಯಾಗಿದೆ.
ಈಗಾಗಲೇ ಧರ್ಮ** ಶ್ರೀಕ್ಷೇತ್ರದ ವಿರುದ್ಧ ನಡೆದಿರುವ ಷಡ್ಯಂತ್ರವನ್ನು ಬಹಿರಂಗಪಡಿಸಲು ಎಸ್ಐಟಿ(SIT) ತೀವ್ರ ವಿಚಾರಣೆಯನ್ನು ಮುಂದುವರಿಸಿದೆ.
ಮುಖ್ಯ ಆರೋಪಿ ಚಿನ್ನಯ್ಯ ಹಾಗೂ ಅವನ ಬಳಗದವರು ಸಾಮಾಜಿಕ ಜಾಲತಾಣ ಮತ್ತು ಯೂಟ್ಯೂಬ್ ಚಾನೆಲ್ಗಳ ಮೂಲಕ ಧರ್ಮ**ದ ಬಗ್ಗೆ ಅಪಪ್ರಚಾರ ಹರಡಿರುವುದು ತನಿಖೆಯಿಂದ ಸ್ಪಷ್ಟವಾಗಿದೆ.

ಕಠಿಣ ವಿಚಾರಣೆಯಲ್ಲಿ ಒಂದೊಂದೇ ಸತ್ಯ ಬೆಳಕಿಗೆ ಬರುತ್ತಿದ್ದು, ಈ ಪ್ರಚಾರದ ಹಿಂದೆ ಕೇವಲ ವೈಯಕ್ತಿಕ ದ್ವೇಷವಲ್ಲ, ಬೃಹತ್ ಯೋಜನೆ ಅಡಕವಾಗಿದೆ ಎಂಬ ಶಂಕೆ ಮೂಡಿದೆ.
ಇನ್ನು ಪ್ರಕರಣದ ಗಂಭೀರತೆಯನ್ನು ಮನಗಂಡ ರಾಜ್ಯ ಬಿಜೆಪಿ, ನಿನ್ನೆ ದೆಹಲಿಗೆ ತೆರಳಿ ಹೈಕಮಾಂಡ್ ಮುಂದೆ ವರದಿ ಸಲ್ಲಿಸಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ(B.Y. Vijayendra) ನೇತೃತ್ವದ ನಿಯೋಗ,
ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಅವರನ್ನು ಭೇಟಿಯಾಗಿ ಸಂಪೂರ್ಣ ಮಾಹಿತಿಯನ್ನು ಹಂಚಿಕೊಂಡಿದೆ.ವಿಜಯೇಂದ್ರ ಅವರು ದೆಹಲಿಯಲ್ಲಿ ಮಾತನಾಡುತ್ತಾ,
“ರಾಜ್ಯದಲ್ಲಿ ಹಿಂದೂ ವಿರೋಧಿ ಮನೋಭಾವನೆ ಹೊಂದಿದ ಸರ್ಕಾರವಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಧರ್ಮ**ದಂತಹ ಪವಿತ್ರ ಕ್ಷೇತ್ರವನ್ನು ಗುರಿಯಾಗಿಸಿ ಅಪಪ್ರಚಾರ ನಡೆಸಲಾಗಿದೆ.
ಇದರ ಬಗ್ಗೆ ನಾವು ಕೇಂದ್ರ ನಾಯಕರಿಗೆ ವಿವರಿಸಿದ್ದೇವೆ,” ಎಂದು ಹೇಳಿದ್ದಾರೆ.
ಧರ್ಮ**ದ ವಿರುದ್ಧ ನಡೆದಿರುವ ಪ್ರಚಾರವನ್ನು ಬಿಜೆಪಿ ಗಂಭೀರವಾಗಿ ತೆಗೆದುಕೊಂಡಿದ್ದು, ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದಿವೆ. “ಧರ್ಮ** ಚಲೋ” ಘೋಷಣೆ ನೀಡಿ ಕಾರ್ಯಕರ್ತರು ರಸ್ತೆಗಿಳಿದಿದ್ದಾರೆ.
ಬುರುಡೆ ಗ್ಯಾಂಗ್ ವಿರುದ್ಧದ ತನಿಖೆಯನ್ನು ವೇಗಗೊಳಿಸುವಂತೆ ಆಗ್ರಹಿಸುತ್ತಾ, ಬಿಜೆಪಿ ಸರ್ಕಾರದ ವಿರುದ್ಧವೂ ಕಿಡಿಕಾರುತ್ತಿದೆ.ಬಿಜೆಪಿಯ ಅಭಿಪ್ರಾಯದಲ್ಲಿ,
ರಾಜ್ಯ ಸರ್ಕಾರವು(State Govt) ಪ್ರಕರಣವನ್ನು ತಣ್ಣಗಾಗಿಸಲು ಯತ್ನಿಸುತ್ತಿದೆ. ಇದನ್ನು ವಿರೋಧ ಪಕ್ಷವಾಗಿ ಬಿಜೆಪಿ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡು, ಜನಮನ ಸೆಳೆಯಲು ಮುಂದಾಗಿದೆ.
ಈ ಪ್ರಕರಣ ಕೇವಲ ರಾಜ್ಯ ಮಟ್ಟದಲ್ಲೇ ಸೀಮಿತವಾಗದೆ, ಈಗ ರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಿದೆ. ಹೈಕಮಾಂಡ್ಗೆ ಸಲ್ಲಿಸಿದ ವರದಿಯಲ್ಲಿ,
ಧರ್ಮ**ದ ವಿರುದ್ಧ ನಡೆದಿರುವ ಪ್ರಚಾರವು ಸಂಘಟಿತ ಷಡ್ಯಂತ್ರದ ಭಾಗವಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ. ಅಮಿತ್ ಶಾ ಸೇರಿದಂತೆ ಕೇಂದ್ರ ನಾಯಕರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು,
ಇದನ್ನು ಓದಿ : ಧರ್ಮ**ದ ಬುರುಡೆ ಪ್ರಕರಣ ಆರೋಪಿ ಚಿನ್ನಯ್ಯಗೆ ನ್ಯಾಯಾಂಗ ಬಂಧನ – ಶಿವಮೊಗ್ಗ ಜೈಲಿಗೆ ಶಿಫ್ಟ್
ಮುಂದಿನ ಕ್ರಮಕ್ಕೆ ಸೂಕ್ತ ಮಾರ್ಗದರ್ಶನ ನೀಡುವ ನಿರೀಕ್ಷೆಯಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಹೇಳಿದ್ದಾರೆ. (Dharmasthala issue has reached the BJP high command)