- ಸರ್ಕಾರದ ನಿಲುವನ್ನು ಸ್ವಾಗತಿಸಿದ ಪಾರ್ಶ್ವನಾಥ್ ಜೈನ್
- ಸತ್ಯ ಹೊರಬರಲಿ ನಂಬಿಕೆ ಉಳಿಯಲಿ (Dharmasthala spokesperson Parshwanath Jain welcomes SIT investigation)
- ಸತ್ಯಾಂಶವನ್ನು ಅತಿ ಶೀಘ್ರವಾಗಿ ಪ್ರಾಮಾಣಿಕ ತನಿಖೆ ನಡೆಸಿ ಸಾರ್ವಜನಿಕರ ಮುಂದೆ ಬಹಿರಂಗಪಡಿಸಿ
Manglore: ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಭಾರೀ ಚರ್ಚೆಯಲ್ಲಿದ್ದ ಧ**ಸ್ಥಳಕ್ಕೆ ಸೇರಿರುವ ಅರಣ್ಯ ಪ್ರದೇಶದಲ್ಲಿ ನೂರಾರು ಶವಗಳನ್ನು ಹೂತು ಹಾಕಿರುವ (Dh*rmasthala Mass Burials) ಪ್ರಕರಣವನ್ನು ಇದೀಗ ಸರ್ಕಾರ ಎಸ್ಐಟಿ (SIT) ತನಿಖೆಗೆ ಹಸ್ತಾಂತರಿಸಿದೆ.
ಈ ನಿರ್ಣಯವನ್ನು ಸ್ವಾಗತಿಸಿರುವ ಶ್ರೀ ಕ್ಷೇತ್ರ ಧrಸ್ಥಳದ ಹಿರಿಯ ವಕ್ತಾರ ಕೆ ಪಾರ್ಶ್ವನಾಥ್ ಜೈನ್ (Parshwanath Jain) ಸರ್ಕಾರದ ನಿಲುವನ್ನು ಶ್ಲಾಘಿಸಿದ್ದಾರೆ.
ಇನ್ನು ಈ ಕುರಿತಾಗಿ ಪ್ರಕಟಣೆ ಹೊರಡಿಸಿರುವ ಅವರು ಧರ್ಮ** ಗ್ರಾಮದ ಪೊಲೀಸ್ ಠಾಣೆಯಲ್ಲಿ ಈಗಾಗಲೇ ದಾಖಲಿಸಿರುವ ಹಾಗೂ ಎಲ್ಲೆಡೆ ಪ್ರಚಲಿತದಲ್ಲಿರುವ ಹಲವಾರು ಶವಗಳನ್ನು ಹೂತಿದ್ದೆ ಅದರಲ್ಲೂ ಅತಿ ಹೆಚ್ಚಿನ ಹೆಣ್ಣು ಮಕ್ಕಳ ಶವಗಳನ್ನು ಹೂತಿ ಹಾಕಿದ್ದೇನೆ
ಎಂಬ ದೂರಿನ ಪ್ರಕರಣವು ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ತರ್ಕವಾತರ್ಕಗಳು ಹಾಗೂ ಊಹಾಪೋಹಗಳು ಅಷ್ಟೇ ಅಲ್ಲ ಶ್ರೀ ಕ್ಷೇತ್ರದ ಬಗ್ಗೆ ಗೊಂದಲಗಳನ್ನು ಹುಟ್ಟುಹಾಕಿದೆ.
ಹಾಗಾಗಿ ಈ ಘಟನೆಗೆ ಸಂಬಂಧಿಸಿದಂತೆ ಸರ್ಕಾರದ ಅಧಿಕಾರಿಗಳು ಪ್ರಾಮಾಣಿಕವಾಗಿ ತನಿಖೆ ನಡೆಸಿ ನಮ್ಮ ಹಾಗೂ ಸಾರ್ವಜನಿಕರ ನಿರೀಕ್ಷೆಯನ್ನು ಉಳಿಸಬೇಕಿದೆ.

ಅಷ್ಟಕ್ಕೂ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ರಾಜ್ಯ ಸರ್ಕಾರ ಹಸ್ತಾಂತರಿಸಿದೆ ಎಂಬುದು ತಿಳಿದು ಸಂತೋಷ ತಂದಿದೆ.
ಸರ್ಕಾರದ ಈ ನಿಲುವು ಉತ್ತಮವಾಗಿದೆ ಇಲ್ಲಿ ಸತ್ಯ ಉಳಿಯಬೇಕು ನಂಬಿಕೆ ಹೆಚ್ಚಬೇಕು ಎಂದು ವಕ್ತಾರರಾದ ಕೆ. ಪಾರ್ಶ್ವನಾಥ್ ಜೈನ್ ತಿಳಿಸಿದ್ದಾರೆ.
ಇನ್ನು ಹಲವು ದಿನಗಳಿಂದ ಈ ಘಟನೆ ಬಗ್ಗೆ ತನಿಖೆಯಾಗಬೇಕು ಎಂದು ಹಲವಾರು ಸಂಘಟನೆಗಳು ಮತ್ತು ಹೋರಾಟಗಾರರು ಪೊಲೀಸರ ಮೇಲೆ ಒತ್ತಡ ಹೇರಲು ಆರಂಭಿಸಿದ್ದರು.
ಶವಗಳ ಕುರಿತು ಹೇಳಿಕೆ ನೀಡಿದ ವ್ಯಕ್ತಿಯ ಮಂಪರು ಪರೀಕ್ಷೆ ಹಾಗೂ ಸುಳ್ಳುಪತ್ತೆ ಪರೀಕ್ಷೆ ಬೆರಳಚ್ಚು ಸಂಗ್ರಹಕ್ಕೆ ಅನುಮತಿ ಕೋರಿ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಇವೆಲ್ಲವುಗಳ ನಡುವೆ 2003ರಲ್ಲಿ ಧ**ಸ್ಥಳದಿಂದ ನಾಪತ್ತೆಯಾಗಿದ್ದ ತನ್ನ ಪುತ್ರಿ ಅನನ್ಯಾ ಭಟ್ ಬಗ್ಗೆ ಮಾಹಿತಿ ನೀಡಬೇಕು
ಎಂದು ಅವರ ತಾಯಿ ಸುಜಾತ ಭಟ್ ಎನ್ನುವ ಹೆಸರಿನ ಮಹಿಳೆಯೊಬ್ಬರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿ ಮಗಳ ಪತ್ತೆ ಮಾಡಿ ಕೊಡಿ ಇಲ್ಲವೇ ಅವಳ ಕುರಿತಾಗಿ ತಿಳಿಸಿ ಎಂದು ಮನವಿ ಮಾಡಿದ್ದರು.
ಹಾಗಾಗಿ ರಾಜ್ಯ ಮಹಿಳಾ ಆಯೋಗವು ವಿಶೇಷ ತನಿಖಾ ತಂಡ ರಚಿಸುವಂತೆ ಸರ್ಕಾರವನ್ನು ಕೋರಿದರೆ,
ವಿಮೆನ್ ಇಂಡಿಯಾ ಮೂವ್ಮೆಂಟ್, ಡಿವೈಎಫ್ಐ, ಎಸ್ಡಿಪಿಐ ಮುಂತಾದ ಸಂಘಟನೆಗಳು ಕೂಡ SIT ತನಿಖೆಗೆ ಒತ್ತಾಯಿಸಿ ಅರ್ಜಿ ಸಲ್ಲಿಸಿದ್ದವು ಇವೆಲ್ಲವುಗಳ ಪರಾಮರ್ಶಿಸಿ ಸರ್ಕಾರ ವಿಶೇಷ ತನಿಖಾ ತಂಡದ ರಚನೆ ಮಾಡಿದೆ.
ಇನ್ನು ಸಮಾಜದ ನೈತಿಕತೆಗೆ ಮತ್ತು ಶ್ರದ್ಧೆಗೆ ನಿಲುಕುವ ಬಲವಾದ ಆಧಾರವೆಂದರೆ ಅದು ಸತ್ಯ. ಅದನ್ನು ಪರಾರ್ಶಿಸಿ ನಿಜವಾದದ್ದನ್ನು ಜನರಿಗೆ ತಲುಪಿಸಬೇಕು.
ಶ್ರೀ ಕ್ಷೇತ್ರದ ಕುರಿತು ಬೆಟ್ಟು ಮಾಡುವುದು ನಿಲ್ಲಬೇಕು.
ಇಲ್ಲ ಸಲ್ಲದ ಆರೋಪಗಳನ್ನು ಮಾಡುವುದು ನಿಲ್ಲಬೇಕು ಆದ್ದರಿಂದ ಈ ಪ್ರಕರಣದಲ್ಲಿ ತನಿಖಾ ತಂಡ ಸತ್ಯಾಂಶವನ್ನು ಬಯಲಿಗೆಳೆದು
ನಿಜ ಆರೋಪಿಗಳ ಮುಖವಾಡ ಕಳಚಿ ಹಾಕಬೇಕು ಆಗಲೇ ಜನರಿಗೆ ನಂಬಿಕೆ ಉಂಟಾಗುತ್ತದೆ.
ಇದನ್ನು ಓದಿ : ರಾಜ್ಯದಲ್ಲಿ ಮುಂದಿನ 3 ದಿನ ಭಾರೀ ಮಳೆ ಮನ್ಸೂಚನೆ: 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
ವ್ಯರ್ಥಾಲಪ ನಿಲ್ಲುತ್ತದೆ.ಅತಿ ಶೀಘ್ರವಾಗಿ ಪ್ರಾಮಾಣಿಕ ತನಿಖೆ ನಡೆಸಿ ಸಾರ್ವಜನಿಕರ ಮುಂದೆ ಬಹಿರಂಗಪಡಿಸಿ ಎಂಬುದಷ್ಟೇ ನಮ್ಮ ಆಶಯ ಎಂದು ತಿಳಿಸಿದ್ದಾರೆ. (Dharmasthala spokesperson Parshwanath Jain welcomes SIT investigation)