• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜ್ಯ

ಎಇಆರ್‌ಬಿ ಅನುಮತಿ ಪಡೆಯದೆ ಖಾಸಗಿ ಆಸ್ಪತ್ರೆಗಳಿಂದ ಡಯಾಗ್ನಸಿಸ್ ಸೆಂಟರ್‌ ಆರಂಭ: ಕ್ರಮಕ್ಕೆ ಆಗ್ರಹ

Rashmitha Anish by Rashmitha Anish
in ರಾಜ್ಯ
ಎಇಆರ್‌ಬಿ ಅನುಮತಿ ಪಡೆಯದೆ ಖಾಸಗಿ ಆಸ್ಪತ್ರೆಗಳಿಂದ ಡಯಾಗ್ನಸಿಸ್ ಸೆಂಟರ್‌ ಆರಂಭ: ಕ್ರಮಕ್ಕೆ ಆಗ್ರಹ
0
SHARES
63
VIEWS
Share on FacebookShare on Twitter

Karnataka: ರಾಜ್ಯದ ಸಾವಿರಾರು ಖಾಸಗಿ ಆಸ್ಪತ್ರೆಗಳು ಹಾಗೂ ಡಯಾಗ್ನಸಿಸ್‌ ಸೆಂಟರ್‌ಗಳು (Diagnosis centre without AERB) ಕೇಂದ್ರ ಸರಕಾರ ಅಧೀನದ ಪರಮಾಣು

ಶಕ್ತಿ ನಿಯಂತ್ರಣ ಮಂಡಳಿ (ಎಇಆರ್‌ಬಿ) (Atomic Energy Regulatory Board) ನಿಯಮಗಳನ್ನು ಗಾಳಿಗೆ ತೂರಿ ಮನಬಂದಂತೆ ಕ್ಷ ಕಿರಣ, ಸಿಟಿ ಸ್ಕ್ಯಾನ್, ಹಾಗೂ ಮ್ಯಾಮೊಗ್ರಾಫಿ

ಯಂತ್ರಗಳನ್ನು ಆರಂಭಿಸುತ್ತಿರುವ ಆರೋಪ (Diagnosis centre without AERB) ಕೇಳಿಬಂದಿದೆ.

Diagnosis centre without AERB

ಅಂದಾಜು 20 ಸಾವಿರ ಖಾಸಗಿ ಆಸ್ಪತ್ರೆಗಳು ಮತ್ತು ಡಯಾಗ್ನಸಿಸ್‌ ಸೆಂಟರ್‌ಗಳು ನಮ್ಮ ರಾಜ್ಯದಲ್ಲಿ ಇದೆ. ಅಲ್ಲದೆ ಇದನ್ನು ಯಾರಾದರೂ ಹೊಸದಾಗಿ ಪ್ರಾರಂಭಿಸುವ ಮುನ್ನ

ಎಇಆರ್‌ಬಿ ಅನುಮತಿ ಪಡೆಯುವುದು ಕಡ್ಡಾಯ. ಅಷ್ಟೇ ಅಲ್ಲದೆ, ಪರವಾನಗಿ ಪಡೆಯಬೇಕು, ಈ ಯಂತ್ರಗಳ ಅಳವಡಿಕೆಗೆ 350 ಚದರ ಅಡಿ ಜಾಗವಿರಬೇಕು, ಪ್ರತಿ ಐದು ವರ್ಷಕ್ಕೊಮ್ಮೆ

ಪರವಾನಗಿ ನವೀಕರಿಸಬೇಕು ಮತ್ತು ಪ್ರತಿ ಎರಡು ವರ್ಷಕ್ಕೊಮ್ಮೆ ಗುಣಮಟ್ಟ ಪರಿಶೀಲಿಸುವುದು ಸೇರಿ ಇತರ ಪ್ರಮಾಣಪತ್ರ ಕೂಡ ಪಡೆಯಬೇಕು. ಇದರೊಂದಿಗೆ ಪ್ರಾಮಾಣಿತ ಕಾರ್ಯಾಚರಣೆ

ವಿಧಾನದಲ್ಲಿ (ಎಸ್‌ಒಪಿ)(SOP) ಕಾರ್ಯನಿರ್ವಹಿಸಬೇಕು. ಆದರೆ ಖಾಸಗಿ ಆಸ್ಪತ್ರೆಗಳು ಮತ್ತು ಡಯಾಗ್ನಸಿಸ್ ಸೆಂಟರ್‌ಗಳು ಇದ್ಯಾವ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಹೇಳಲಾಗಿದೆ.

ಇದನ್ನೂ ಓದಿ : ಡೆಂಘೀ ಪ್ರಕರಣ ಹೆಚ್ಚಳ: ರಕ್ತನಿಧಿ ಕೇಂದ್ರಗಳಲ್ಲಿ ಬಿಳಿ ರಕ್ತಕಣಗಳ ಸಂಗ್ರಹವಿಲ್ಲ!

ಆರೋಗ್ಯ ಸಮಸ್ಯೆಗಳ ಸಂಬಂಧ ಪಟ್ಟಂತೆ ಎಕ್ಸ್ ರೇ ಪರೀಕ್ಷೆ ಮಾಡಿಸುವ ಸಂದರ್ಭದಲ್ಲಿ ಇದರಿಂದಾಗಿ ಈ ಯಂತ್ರಗಳಿಂದ ಹೊರಸೂಸುವ ವಿಕಿರಣಗಳಿಂದ ರೋಗಿಗಳು ಚರ್ಮರೋಗ, ಕ್ಯಾನ್ಸರ್,

ಹೃದಯ,ಶ್ವಾಸಕೋಶ ಸೇರಿ ಇತರ ಅನೇಕ ಗಂಭೀರ ಕಾಯಿಲೆಗಳಿಗೆ ತುತ್ತಾಗುವಂತಾಗಿದೆ. ಅದರಲ್ಲೂ ಇನ್ನು ಕೆಲವರು ನಕಲಿ ಯಂತ್ರಗಳ ಅಳವಡಿಸಿಕೊಂಡು ರೋಗಿಗಳಿಗೆ ಸೇವೆ

ನೀಡುತ್ತಿರುವ ಬಗ್ಗೆಯೂ ಈಗಾಗಲೇ ಅನೇಕ ಆರೋಪಗಳು ಕೇಳಿ ಬಂದಿವೆ.

Diagnosis centre

ಸೇವೆ ಸ್ಥಗಿತಗೊಳಿಸಲು ಅವಕಾಶ:

ಖಾಸಗಿ ಆಸ್ಪತ್ರೆಗಳು ಹಾಗೂ ಡಯಾಗ್ನಸಿಸ್ ಸೆಂಟರ್‌ಗಳು ಕ್ಷ ಕಿರಣ (X Ray), ಸಿಟಿ ಸ್ಕ್ಯಾನ್ (CT Scan), ಹಾಗೂ ಮ್ಯಾಮೊಗ್ರಾಪಿ ಯಂತ್ರಗಳನ್ನು (Mammography Machine) ಅಳವಡಿಸಿ

ರೋಗಿಗಳಿಗೆ ಸೇವೆ ನೀಡುತ್ತಿರುವ ಸಂದರ್ಭಗಳಲ್ಲಿ ಒಂದು ವೇಳೆ ಎಇಆರ್‌ಬಿ ನಿಯಮ ಪಾಲಿಸದಿದ್ದರೆ ಅಂತಹ ಸಂದರ್ಭಗಳಲ್ಲಿ ಮೊದಲು ಮತ್ತು ಎರಡನೇ ಬಾರಿ ಒಟ್ಟು 1,500 ರು. ದಂಡ

ಹಾಕಿ ಸೂಚನೆ ಪತ್ರ ನೀಡಲಾಗುತ್ತದೆ. ಸತತವಾಗಿ 3 ನೇ ಬಾರಿಯೂ ನಿಯಮ ಉಲ್ಲಂಘನೆಯಾದರೆ ಇಂತಹ ಸೆಂಟರ್ ಗಳನ್ನು ಶಾಶ್ವತವಾಗಿ ಮುಚ್ಚಿಸಿ ಕೇವಲ ಐದು ಸಾವಿರ ರು.ದಂಡ

ವಿಧಿಸಲಾಗುತ್ತದೆ. ಆದರೆ, ಈ ಪ್ರಕ್ರಿಯೆ ಎಲ್ಲಿಯೂ ನಡೆಯುತ್ತಿಲ್ಲ ಎಂದು ತಿಳಿದುಬಂದಿದೆ.

ಕಾರ್ಯಾಚರಣೆ ಅತ್ಯಗತ್ಯ

2018ರ ಡಿ.22ರಂದು ಎಇಆರ್‌ಬಿ ಸಂಸ್ಥೆ ಹಾಗೂ ಆರೋಗ್ಯ ಇಲಾಖೆಯ ನಡುವೆ ಆಗಿರುವ ಒಪ್ಪಂದದಂತೆ ಕ್ಷಕಿರಣ ವಿಕಿರಣ ಸುರಕ್ಷತಾ ನಿರ್ದೇಶನಾಲಯವನ್ನು ಸ್ಥಾಪಿಸಲಾ ಗಿದೆ.

ಇದನ್ನು ಆರೋಗ್ಯ ಇಲಾಖೆ ವ್ಯಾಪ್ತಿಗೆ ಈಗಾಗಲೇ ತರಲಾಗಿದೆ. ರಾಜ್ಯದಲ್ಲಿರುವ ಸಿಟಿ ಸ್ಕ್ಯಾನ್, ಕ್ಷ ಕಿರಣ ಕೇಂದ್ರಗಳು, ಮತ್ತು ಮ್ಯಾಮೊಗ್ರಾಪಿ ಕೇಂದ್ರಗಳು ಎಇಆರ್ ಬಿಯಿಂದ ಅನುಮತಿ

ಪಡೆದು ಕಾರ್ಯಾಚರಣೆ ಮಾಡುತ್ತಿದೆಯೋ ಅಥವಾ ಇಲ್ಲವೋ ಎಂಬುದರ ಬಗ್ಗೆ ಪರಿಶೀಲನೆ, ಇವುಗಳ ನೋಂದಣಿ ಪರಿಶೀಲನೆ,ನಿಯಮಗಳ ಪಾಲಿಸುವಂತೆ ನೋಡಿಕೊಳ್ಳುವುದು,ಎಇಆರ್‌ಬಿ

ಕ್ರಮ ಪಾಲಿಸುವಂತೆ ಕ್ರಮ ಕೈಗೊಳ್ಳುವುದು, ಕ್ಷ ಕಿರಣ ಯಂತ್ರಗಳ ಪರಿವೀಕ್ಷಣೆ, ಈಗಾಗಲೇ ಸೂಚನೆ ಪತ್ರ ನೀಡಿ ಕಾಲಾವಕಾಶ ನೀಡಿದ್ದರೂ ನಿಯಮ ಪಾಲಸದಿರುವ ಕೇಂದ್ರಗಳನ್ನು ಕೂಡಲೇ

ಸ್ಥಗಿತಗೊಳಿಸುವುದು, ಕ್ಷ ಕಿರಣ ಯಂತ್ರಗಳಿಂದ ಹೊರಸೂಸುವ ವಿಕಿರಣಗಳಿಂದ ಅಪಾಯ ತಡೆಯುವುದು ಮುಂತಾದವುಗಳು ನಿರ್ದೇಶನಾಲಯದ ಜವಾಬ್ದಾರಿ ಯಾಗಿದೆ.

ಈ ಕಾರ್ಯವನ್ನು ಆದರೆ, ನಿರ್ದೇಶನಾಲಯ ಸಮರ್ಪಕವಾಗಿ ನಡೆಸುತ್ತಿಲ್ಲ ಎಂಬ ಕೇಳಿಬಂದಿದೆ.

ರಶ್ಮಿತಾ ಅನೀಶ್

Tags: diagnosis centreEX RAYHealthKarnatakaprivate hospital

Related News

ಶಿವಮೊಗ್ಗದ ಹುಲಿಕಲ್ ಘಾಟ್ ದುರಂತ: ಕಾಮಗಾರಿ ವೇಳೆ ಮಣ್ಣು ಕುಸಿದು ಮೂವರು ಕಾರ್ಮಿಕರ ದುರ್ಮರಣ
ರಾಜ್ಯ

ಶಿವಮೊಗ್ಗದ ಹುಲಿಕಲ್ ಘಾಟ್ ದುರಂತ: ಕಾಮಗಾರಿ ವೇಳೆ ಮಣ್ಣು ಕುಸಿದು ಮೂವರು ಕಾರ್ಮಿಕರ ದುರ್ಮರಣ

April 10, 2026
ಹೋಟೆಲ್‌ ಉದ್ಯಮಕ್ಕೆ ಹೊಸ ಚೈತನ್ಯ : ಇನ್ಮುಂದೆ ವಲಸೆ ಕಾರ್ಮಿಕರಿಗೂ 5 ಕೆಜಿ ಎಲ್‌ಪಿಜಿ ಸಿಲಿಂಡರ್ ಲಭ್ಯ
ಮಾಹಿತಿ

ಹೋಟೆಲ್‌ ಉದ್ಯಮಕ್ಕೆ ಹೊಸ ಚೈತನ್ಯ : ಇನ್ಮುಂದೆ ವಲಸೆ ಕಾರ್ಮಿಕರಿಗೂ 5 ಕೆಜಿ ಎಲ್‌ಪಿಜಿ ಸಿಲಿಂಡರ್ ಲಭ್ಯ

April 10, 2026
ದ್ವಿತೀಯ ಪಿಯುಸಿ ಪ್ರಕಟ: ಈ ಬಾರಿ ದಾಖಲೆಯ ಫಲಿತಾಂಶ, ಶೇ. 12 ರಷ್ಟು ಹೆಚ್ಚಳ
ಪ್ರಮುಖ ಸುದ್ದಿ

ದ್ವಿತೀಯ ಪಿಯುಸಿ ಪ್ರಕಟ: ಈ ಬಾರಿ ದಾಖಲೆಯ ಫಲಿತಾಂಶ, ಶೇ. 12 ರಷ್ಟು ಹೆಚ್ಚಳ

April 9, 2026
ಮಾನವ ಕಳ್ಳಸಾಗಣೆ ಪ್ರಕರಣ: ನಾಲ್ವರು ಬಾಂಗ್ಲಾದೇಶಿಗರಿಗೆ ಮೂರು ವರ್ಷ ಜೈಲು ಶಿಕ್ಷೆ
ಪ್ರಮುಖ ಸುದ್ದಿ

ಮಾನವ ಕಳ್ಳಸಾಗಣೆ ಪ್ರಕರಣ: ನಾಲ್ವರು ಬಾಂಗ್ಲಾದೇಶಿಗರಿಗೆ ಮೂರು ವರ್ಷ ಜೈಲು ಶಿಕ್ಷೆ

April 9, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.