ಬೆಂಗಳೂರು, ಆ. 07: ಬೊಮ್ಮಾಯಿ ನೇತೃತ್ವದ ನೂತನ ಸಚಿವ ಸಂಪುಟ ರಚನೆಯಾಗಿದ್ದು ನೂತನ ಸಚಿವರಿಗೆ ನೀಡಿರರುವ ಖಾತೆಗಳ ಬಗ್ಗೆ ಹಲವು ಸಚಿವರುಗಳು ಬಹಿರಂಗವಾಗಿಯೇ ತಮ್ಮ ಅಸಮಧಾನ ಹೊರಹಾಕಿದ್ದಾರೆ.
ಇದರಲ್ಲಿ ಪ್ರಮುಖವಾಗಿ ಪ್ರಸ್ತುತ ಪ್ರವಾಸೋದ್ಯಮ ಸಚಿವರಾಗಿರುವ ಆನಂದ್ ಸಿಂಗ್ ತಮ್ಮ ಖಾತೆಯ ಬಗ್ಗೆ ಆಸಮಧಾನ ಹೊರಹಾಕಿದ್ದಾರೆ. ಖಾತೆ ಹಂಚಿಕೆ ಸಂಬಂಧ ಮುಖ್ಯ ಮಂತ್ರಿ ಅವರಿಗೆ ಮನವಿ ಮಾಡಿದ್ದೆ ನನಗೆ ನಾನು ಬಯಸಿದ ಖಾತೆ ಸಿಗದೆ ಇದ್ದಲ್ಲಿ ನಾನು ಶಾಸಕನಾಗಿಯೇ ಮುಂದುವರಿಯುತ್ತೇನೆ ಎಂದು ತಮ್ಮ ಅಸಮಧಾನ ಹೊರಕಾಕಿದ್ದಾರೆ. ಆನಂದ್ ಸಿಂಗ್ ಮಾತ್ರವಲ್ಲದೆ ಇವರ ಜೊತೆಗೆ ನೂತನ ಪೌರಡಳಿತ ಸಚಿವರಾಗಿರುವ ಎಂ.ಟಿ.ಬಿ ನಾಗರಾಜ್ ಕೂಡ ತಮ್ಮ ಖಾತೆಯ ಬಗ್ಗೆ ಅಸಮಧಾನ ಹೊಂದಿದ್ದು, ಈ ಸಂಬಂಧ ಮಾತನಾಡಿದ ಅವರು ನಾನೇನು ಭ್ರಷ್ಟಾಚಾರ ಮಾಡಿದ್ದೀನಾ, ನಾನೇನು ಅಸಮರ್ಥನಾ ಅಥವಾ ನನಗೆ ಅರ್ಹತೆ ಇಲ್ವಾ ? ಈ ಬಗ್ಗೆ ನಾನು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತೇನೆ ನಂತರ ಇನ್ನೊಂದೆರಡು ದಿನಗಳಲ್ಲಿ ನನ್ನ ನಿಲುವನ್ನು ಪ್ರಕಟಿಸುವದಾಗಿ ತಿಳಿಸಿದ್ದಾರೆ.