- ಏರೋಸ್ಪೇಸ್ ಕ್ಷೇತ್ರದಲ್ಲಿ ಕರ್ನಾಟಕದ ಪ್ರಾಬಲ್ಯ (DK Shivakumar new plan ) ಹೆಚ್ಚಿಸಲು ಹೊಸ ಯೋಜನೆ
- ಇದರಿಂದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿ
- ಬೆಂಗಳೂರು, ಮೈಸೂರು, ಬೆಳಗಾವಿ, ತುಮಕೂರು ಮತ್ತು ಚಾಮರಾಜನಗರದಲ್ಲಿ ಈ ಪಾರ್ಕ್ಗಳ ಸ್ಥಾಪನೆ
Bengaluru: ಕರ್ನಾಟಕ ಸರ್ಕಾರ ತನ್ನ ಕೈಗಾರಿಕಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ (DK Shivakumar new plan) ರಾಜ್ಯದ
ಐದು ಪ್ರಮುಖ ನಗರಗಳಲ್ಲಿ ವಿಶ್ವ ದರ್ಜೆಯ ಏರೋಸ್ಪೇಸ್ ಮತ್ತು ರಕ್ಷಣಾ ಪಾರ್ಕ್ಗಳನ್ನು ನಿರ್ಮಿಸಲು ಮುಂದಾಗಿದೆ.
ಈ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು,
ಮುಂದಿನ ದಶಕದಲ್ಲಿ ಕರ್ನಾಟಕ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಂತ್ರಜ್ಞಾನ, ಅತ್ಯಾಧುನಿಕ ಉತ್ಪಾದನಾ ವಿಧಾನಗಳು, ಜಾಗತಿಕ ಮಟ್ಟದ (DK Shivakumar new plan) ಸಂಶೋಧನೆ, ಹಾಗೂ ಕೌಶಲ್ಯಯುತ
ಮಾನವ ಸಂಪನ್ಮೂಲ ಈ ನಾಲ್ಕು ಅಂಶಗಳನ್ನು ಬಲಪಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಯೋಜನೆಯನ್ನು ರೂಪಿಸಿದೆ.
ಏರೋಸ್ಪೇಸ್ ಹಾಗೂ ರಕ್ಷಣಾ ಉತ್ಪನ್ನಗಳ ಬೇಡಿಕೆ ಜಾಗತಿಕವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ದೇಶದ ಮುಂಚೂಣಿ
ರಾಜ್ಯವಾಗಿರುವ ಕರ್ನಾಟಕ ತನ್ನ ಶಕ್ತಿಯನ್ನು ವಿಸ್ತರಿಸಲು ಇದು ಮಹತ್ವದ ಅವಕಾಶ ಎಂದು ಅವರು ತಿಳಿಸಿದ್ದಾರೆ.
ಈ ಪಾರ್ಕ್ಗಳು ಬರೀ ಕೈಗಾರಿಕಾ ಘಟಕಗಳಲ್ಲ, ಬದಲಾಗಿ ಸಂಶೋಧನೆ–ವಿಕಸನ ಕೇಂದ್ರಗಳು, ತರಬೇತಿ ಹಬ್ಗಳು ಮತ್ತು ಸ್ಟಾರ್ಟಪ್ಗಳಿಗೆ ವೇದಿಕೆಯಾಗಿ ರೂಪುಗೊಳ್ಳಲಿವೆ.
ಮುಂದಿನ ದಿನಗಳಲ್ಲಿ ಬೆಂಗಳೂರು, ಮೈಸೂರು, ಬೆಳಗಾವಿ, ತುಮಕೂರು ಮತ್ತು ಚಾಮರಾಜನಗರದಲ್ಲಿ ಈ ಪಾರ್ಕ್ಗಳನ್ನು ಸ್ಥಾಪನೆ ಮಾಡಲಾಗುತ್ತಿದೆ.
ಭೌಗೋಳಿಕವಾಗಿ ವಿಭಿನ್ನ ಪ್ರದೇಶಗಳನ್ನು ಆಯ್ಕೆ ಮಾಡಿರುವುದು ಪ್ರಾದೇಶಿಕ ಸಮತೋಲನ ಮತ್ತು ಒಟ್ಟಾರೆ ಕೈಗಾರಿಕಾ ಬೆಳವಣಿಗೆಗೆ ಸಹಕಾರಿಯಾಗಲಿದೆ.
ಬೆಂಗಳೂರಿನಲ್ಲೇ ಈಗಾಗಲೇ ಏರೋಸ್ಪೇಸ್ ಕೈಗಾರಿಕೆಗೆ ಸೂಕ್ತ ಪರಿಸರವಿದೆ .ಮೈಸೂರು ಮತ್ತು ಬೆಳಗಾವಿ ಕೈಗಾರಿಕಾ ಮೂಲಸೌಕರ್ಯದಲ್ಲಿ ವೇಗವಾಗಿ ಬೆಳೆಯುತ್ತಿವೆ.
ತುಮಕೂರು ಮತ್ತು ಚಾಮರಾಜನಗರದ ಆಯ್ಕೆಯು ಮುಂದಿನ ದಶಕದಲ್ಲಿ ಆ ಪ್ರದೇಶಗಳ ಆರ್ಥಿಕ ಪರಿಸ್ಥಿತಿಗೆ ಹೊಂದಿಕೆ ಆಗಲಿದೆ ಸರ್ಕಾರದ ಅಂದಾಜಿನ ಪ್ರಕಾರ, ಈ ಯೋಜನೆಯ ಮೂಲಕ ಸುಮಾರು 60,000 ಕೌಶಲ್ಯಯುತ ಉದ್ಯೋಗಗಳು ಸೃಷ್ಟಿಯಾಗಲಿದ್ದು, ರೂ. 45,000 ಕೋಟಿ ಹೂಡಿಕೆ ಆಕರ್ಷಿಸುವ ಅವಕಾಶವಿದೆ.
ಈ ಪಾರ್ಕ್ಗಳು ಸ್ಥಾಪನೆಯಾದ ಬಳಿಕ ಯುವಕರಿಗೆ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ತರಬೇತಿ ನೀಡುವ ಅವಕಾಶ ಹೆಚ್ಚಾಗಲಿದೆ. ಖಾಸಗಿ ಕಂಪನಿಗಳು, ಸಂಶೋಧನಾ ಸಂಸ್ಥೆಗಳು, ತಂತ್ರಜ್ಞಾನ ಶಿಕ್ಷಣ ಸಂಸ್ಥೆಗಳು ರೂಪಿಸಲಾಗುತ್ತಿದೆ.
ಇದರಿಂದ ಜಾಗತಿಕ ಕಂಪನಿಗಳ ಸಹಕಾರ ದೊರಕುವ ಸಾಧ್ಯತೆ ಹೆಚ್ಚಿದ್ದು, ಕರ್ನಾಟಕವನ್ನು ಭಾರತದ ಏರೋಸ್ಪೇಸ್ ರಾಜಧಾನಿಯನ್ನಾಗಿಸುವ ಗುರಿ ಸರ್ಕಾರ ಹೊಂದಿದೆ ರಾಜ್ಯದ ಪ್ರತಿಭಾವಂತರಿಗೆ ಅಂತರರಾಷ್ಟ್ರೀಯ ಮಟ್ಟದ ವೇದಿಕೆ ಒದಗಿಸುವುದು ನಮ್ಮ ಉದ್ದೇಶ.
ಈ ಪಾರ್ಕ್ಗಳು ಭವಿಷ್ಯದ ರಕ್ಷಣಾ ತಂತ್ರಜ್ಞಾನಕ್ಕೆ ದಿಕ್ಕುನಿರ್ಧಾರ ಮಾಡಲಿವೆ ಎಂದು ಡಿ.ಕೆ. ಶಿವಕುಮಾರ್ ಅವರ ಹೇಳಿದ್ದಾರೆ.
ಇದನ್ನು ಓದಿ : ಕಬ್ಬನ್ ಪಾರ್ಕ್ ಅಭಿವೃದ್ಧಿಗೆ ಡಿಕೆ ಶಿವಕುಮಾರ್ 5 ಕೋಟಿ ರೂ. ಅನುದಾನ ಘೋಷಣೆ: ಹಸಿರು ಉಳಿವಿಗೆ ಬರಲಿದೆ ಹೊಸ ಯೋಜನೆಗಳು