- ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ನೀ ಕೊಡೆ ನಾ (dk shivakumar vs siddaramaiah) ಬಿಡೆ ಎನ್ನುವ ಪರಿಸ್ಥಿತಿ ನಿರ್ಮಾಣ
- ಸಿಎಂ ಕುರ್ಚಿ ಚರ್ಚೆ ಉಲ್ಬಣ: ಇನ್ನೂ 2 ಬಜೆಟ್ ನಾನೇ ಮಂಡಿಸುತ್ತೇನೆ ಎಂದು ಸಿದ್ದರಾಮಯ್ಯ ಘೋಷಣೆ
- ಜೈಲಿನಲ್ಲಿರುವ ಶಾಸಕರ ಡಿಕೆಶಿ ಭೇಟಿ; ನಂಬರ್ ಗೇಮ್ ಆರಂಭ ಎನ್ನುವ ಊಹಾಪೋಹಗಳಿಗೆ ಮತ್ತಷ್ಟು ಬಲ
Bengaluru: ರಾಜ್ಯ ಕಾಂಗ್ರೆಸ್ನಲ್ಲಿ ಬಣ ರಾಜಕೀಯ ಈಗ ಮತ್ತಷ್ಟು ಗಾಢವಾಗುತ್ತಿದ್ದು, ಅದು ಈಗ (dk shivakumar vs siddaramaiah) ಸ್ಪಷ್ಟವಾಗಿ ಬಹಿರಂಗಕ್ಕೆ ಬಂದಿದೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಣವು ಮುಖ್ಯಮಂತ್ರಿ ಸ್ಥಾನಕ್ಕಾಗಿ ಒತ್ತಡ ಹೆಚ್ಚಿಸುತ್ತಿರುವುದರ ನಡುವೆ, ಸಿದ್ದರಾಮಯ್ಯ ಬಣವು ಐದು ವರ್ಷವೂ ತಮ್ಮ ನಾಯಕತ್ವ ಮುಂದುವರೆಯಬೇಕು ಎಂಬ ನಿಲುವಿನಲ್ಲಿ ಸಜ್ಜಾಗಿದೆ.
ಶಿವಕುಮಾರ್ ಬಣದ ಶಾಸಕರು ದೆಹಲಿಯಲ್ಲಿ ಕಾಂಗ್ರೆಸ್ ವರಿಷ್ಠರ ಭೇಟಿ ನಡೆಸುತ್ತಿದ್ದು, ಅವರ ನಿವಾಸದಲ್ಲೂ ಶಾಸಕರ ಸರಣಿ ಆಗಮನ ಕಂಡುಬರುತ್ತಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಇಬ್ಬರು ಕಾಂಗ್ರೆಸ್ ಶಾಸಕರನ್ನು ಡಿಕೆಶಿ (dk shivakumar vs siddaramaiah) ಭೇಟಿ ಮಾಡಿರುವುದು ‘ನಂಬರ್ ಗೇಮ್’ ಆರಂಭವಾಯಿತೇ? ಎಂಬ ರಾಜಕೀಯ ಕುತೂಹಲಕ್ಕೆ ಕಾಲಿಟ್ಟಿದೆ.
ಸಿದ್ದರಾಮಯ್ಯ ಬಣವು ದಲಿತ ಸಚಿವರೊಂದಿಗೆ ಡಿನ್ನರ್ ಮೀಟಿಂಗ್ಗಳನ್ನು ಮುಂದುವರಿಸುತ್ತಿದ್ದು, ಹಿರಿಯ ಮಂತ್ರಿಗಳ ನಡುವಿನ ಸಭೆಗಳು ಪ್ರತಿವ್ಯೂಹ ರಚನೆಗೆ ಆಧಾರವಾಗುತ್ತಿವೆ.
ಈ ಬೆಳವಣಿಗೆಗಳ ನಡುವೆ ಕಾಂಗ್ರೆಸ್ ಹೈಕಮಾಂಡ್ ಗೊಂದಲಕ್ಕೆ ಸಿಲುಕಿದ್ದು ಅಧಿಕಾರ ಹಂಚಿಕೆ ಒಪ್ಪಂದ ಪಾಲಿಸಬೇಕು ಎಂಬ ಡಿಕೆಶಿ ಬಣದ ಹೇಳಿಕೆ, ಅಂತಹ ಒಪ್ಪಂದವಿಲ್ಲ, ಅದು ವದಂತಿ’ ಎನ್ನುವ ಸಿದ್ದರಾಮಯ್ಯ ಬಣದ ಪ್ರತಿಕ್ರಿಯೆ ಇವು ಪಕ್ಷದೊಳಗಿನ ಭಿನ್ನತೆ ಎತ್ತಿ ತೋರಿಸುವಂತಿದೆ.
ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ಪ್ರಕಾರ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮತ್ತು ಡಿ.ಕೆ.ಶಿವಕುಮಾರ್ ಏಕೈಕ ಉಪಮುಖ್ಯಮಂತ್ರಿಯಾಗಿ ಇರಬೇಕು ಎಂಬ ಎಐಸಿಸಿ ಲಿಖಿತ ನಿರ್ದೇಶನವಿದೆ ಚರ್ಚೆಗೆ ಮತ್ತೊಂದು ಹೊಸ ಟರ್ನಿಂಗ್ ಮೂಡಿಸಿದೆ.
ಈ ಗೊಂದಲದ ನಡುವೆ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಶಾಸಕರಿಗೆ ಬಹಿರಂಗ ಹೇಳಿಕೆ ನಿಲ್ಲಿಸಿ ಎಂದು ಕಠಿಣ ಎಚ್ಚರಿಕೆ ನೀಡಿರುವುದು ಬಣಗಳ ನಡುವಿನ ಉದ್ವಿಗ್ನತೆಯನ್ನು ಸ್ಪಷ್ಟಪಡಿಸುತ್ತದೆ.
ಇನ್ನು ಸಿಎಂ ಸಿದ್ದರಾಮಯ್ಯ ಅವರ ಇತ್ತೀಚಿನ ಹೇಳಿಕೆಯೇ ರಾಜಕೀಯ ಚರ್ಚೆಗೆ ಇಂಬು ನೀಡಿದ್ದು ನಾನೇ ಇನ್ನೂ ಎರಡು ಬಜೆಟ್ ಮಂಡಿಸುತ್ತೇನೆ, ನಾನೇ ಮುಂದುವರೆಯುವ ಮುಖ್ಯಮಂತ್ರಿ.
ಈ ಮಾತು ನಾಯಕತ್ವ ಹಸ್ತಾಂತರದ ಗಾಳಿಸುದ್ದಿಗಳಿಗೆ ನೇರ ಸವಾಲಾಗಿ ಪರಿಣಮಿಸಿದೆ.
ಈಗಾಗಲೇ ಡಿಕೆಶಿ ಬಣದ ಶಾಸಕರು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿರುವುದು ರಾಜಕೀಯ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಇದು ನಂಬರ್ ಗೇಮ್ಗೆ ಮಿಂಚಿನಂತೆ ಕಾಣುತ್ತಿದೆ. ಡಿಕೆಶಿ ಅವರ ನಿವಾಸಕ್ಕೆ ದಿನವಿಡೀ ಶಾಸಕರ ಆಗಮನ, ‘ಕ್ಷೇತ್ರದ ಕೆಲಸ ಚರ್ಚೆ’ ಎಂದು ಅವರು ನೀಡಿದ ಸ್ಪಷ್ಟನೆಗೆ ವಿರುದ್ಧವಾಗಿ, ಪಕ್ಷದ ಒಳಮಾಹಿತಿಯ ಪ್ರಕಾರ ಇದು ಬಲ ಪ್ರದರ್ಶನದ ಭಾಗವಾಗಿರಬಹುದು ಎಂಬ ಮಾತು ಹರಿದಾಡುತ್ತಿದೆ.
ಸಿದ್ದರಾಮಯ್ಯ ಬಣವು ನಮಗೆ ಹೆಚ್ಚಿನ ಶಾಸಕರ ಬೆಂಬಲ’ ಎಂದು ಹೇಳುವ ಸಂದರ್ಭದಲ್ಲಿ, ಡಿಕೆಶಿ ಬಣವೂ ತನ್ನ ಬಲವನ್ನು ತೋರಿಸಲು ಸಜ್ಜಾಗಿರುವುದು ಸ್ಪಷ್ಟವಾಗುತ್ತಿದೆ.
ಇದನ್ನು ಓದಿ : ದುಬೈ ಏರ್ ಶೋನಲ್ಲಿ Tejas Mk-1A ಯುದ್ಧ ವಿಮಾನ ಪತನ: ಪೈಲಟ್ ವಿಂಗ್ ಕಮಾಂಡರ್ ನಮನ್ ಸಯಾಲ್ ದುರ್ಮರಣ