ಬೆಂಗಳೂರು ಜ 3 : ಅಂಬೆಡ್ಕರ್ ಪ್ರತಿಮೆ ಉದ್ಘಾಟನೆ ವೇಳೆ ಸಂಸದ ಡಿ.ಕೆ ಸುರೇಶ್ ಅವರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಡಿ.ಕೆ. ಸುರೇಶ್ ಬೆಂಬಲಿಗರು ವೇದಿಕೆಯ ಮುಂದೆ ಹೈಡ್ರಾಮ ನಡೆಸಿದರು. ಇಂದು ಸಿಎಂ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಅಶ್ವತ್ಥ ನಾರಾಯಣ್, ರಾಮನಗರ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಅವರಿಂದ ಕ್ರೇನ್ ಮೂಲಕ ಅಂಬೇಡ್ಕರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ್ದರು. ಈ ವೇಳೆ ಕಾರ್ಯಕ್ರಮ ಆಯೋಜಕರು ಸಂಸದ ಡಿ.ಕೆ ಸುರೇಶ್ ಹೆಸರು ಹೇಳುವುದನ್ನು ಮರೆತಿದ್ದಾರೆ ಎನ್ನಲಾಗಿದೆ. ಹೀಗಾಗಿ ತೀವ್ರವಾಗಿ ಕೋಪಗೊಂಡ ಬೆಂಬಲಿಗರು ಪ್ರತಿಮೆ ಅನಾವರಣ ವೇಳೆ ಡಿ.ಕೆ ಶಿವಕುಮಾರ್ ಹಾಗೂ ಡಿ.ಕೆ ಸುರೇಶ್ ಗೆ ಜೈಕಾರ ಕೂಗಿದ್ದಾರೆ. ವೇದಿಕೆ ಮುಂಭಾಗದಲ್ಲಿ ಕುಳಿತ ಬೆಂಬಲಿಗರಿಂದ ಡಿ.ಕೆ ಶಿವಕುಮಾರ್ ಹಾಗೂ ಡಿ.ಕೆ ಸುರೇಶ್ ಪರ ಘೋಷಣೆ ಕೇಳಿ ಬಂದಿದೆ. ಇದು ಸರ್ಕಾರಿ ಕಾರ್ಯಕ್ರಮವಾಗಿದ್ದರೂ ಡಿಕೆ ಶಿವಕುಮಾರ್ ಹಾಗೂ ಡಿ.ಕೆ ಸುರೇಶ್ ಪರ ಜೈಕಾರ ಕೂಗಲಾಗಿದೆ. ಈ ವೇಳೆ ಎಚ್ಚೆತ್ತ ಸಚಿವ ಅಶ್ವತ್ ನಾರಾಯಣ್, ಕೆಂಪೇಗೌಡ ಗೌಡ ಪ್ರತಿಮೆ ಅನಾವರಣ ವೇಳೆ ತಮ್ಮ ಬದಲಾಗಿ ಡಿ.ಕೆ ಸುರೇಶ್, ಸಿಎಂ ಬೊಮ್ಮಾಯಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಮೂಲಕ ಪುಷ್ಪ ನಮನ ಸಲ್ಲಿಸಿದ್ದಾರೆ.
ವೇದಿಕೆಯಲ್ಲಿ ಮಾತು ಆರಂಭಿಸಿದ ಸಚಿವ ಅಶ್ವತ್ಥ ನಾರಾಯಣ್, ‘ಅಭಿವೃದ್ಧಿ ಯಾರೂ ಮಾಡಿಲ್ಲ. ನಮ್ಮ ಬಿಜೆಪಿ ಪಕ್ಷ ಮಾತ್ರ ಮಾಡಿರುವುದು. ನಾವು ಯಾರ ಜಮೀನಿಗೂ ಕೈ ಹಾಕಿಲ್ಲ. ಯಾಕೆ ಕೂಗಾಡ್ತೀರಾ? ಯಾವಾನೋ ಅವನು ಗಂಡಸ್ಸು? ನಮಗೆ ಅಧಿಕಾರ ಬೇಕಿಲ್ಲ. ಜಿಲ್ಲೆಗೆ ವಂಚನೆ ಮಾಡೋರು ನಾವಲ್ಲ. ನಾವು ಬೇರೆಯವರ ಆಸ್ತಿಗೆ ಕೈ ಹಾಕಿಲ್ಲ’ ಎನ್ನುತ್ತಿದ್ದಂತೆಯೇ ಗರಂ ಆದ ಸಂಸದ ಡಿ.ಕೆ.ಸುರೇಶ್, ‘ಏನ್ ಅಭಿವೃದ್ಧಿ ಮಾಡಿದ್ದೀಯಾ?’ ಅಂತ ಜೋರಾಗಿಯೇ ಗದರಿದರು. ಡಿ.ಕೆ.ಸುರೇಶ್ಗೆ ಮಾತಿಗೆ ಸಾಥ್ ಕೊಟ್ಟ ಎಂಎಲ್ಸಿ ರವಿ, ಮೈಕ್ ಅನ್ನು ಎಸೆದರು. ವೇದಿಕೆಯಲ್ಲೇ ಧರಣಿಗೆ ಕುಳಿತ ಸಂಸದ ಸುರೇಶ್ ಮತ್ತು ರವಿ, ‘ಏ ಗಂಡಸ್ತತನ ತೋರಿಸಲಿ ಅವನು ಎಂದು ಕೂಗಾಡಿದ್ದರಿಂದ ಕಾರ್ಯಕ್ರಮ ಕೆಲ ಹೊತ್ತು ಗಳಭೆ ಘರ್ಷಣೆಗಳಿಗೆ ಸಾಕ್ಷಿಯಾಯಿತು.