ಬೆಂಗಳೂರು ಸೆ 21 : ರಾಜ್ಯದಲ್ಲಿ ಸಾಕಷ್ಟು ಜನ ಪ್ರಗತಿಪರ ರೈತರಿದ್ದು, ಇದಾರಲ್ಲಿ ವಿಶೇಷವಾಗಿ ಸಾಧನೆ ಮಾಡಿದ ರೈತರಿಗೆ ಮುಂದಿನ ವರ್ಷದಿಂದ ಗೌರವ ಡಾಕ್ಟರೇಟ್ ನೀಡಲು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹೊಸ ಚಿಂತನೆಯೊಂದನ್ನು ಮಾಡಿದೆ.
ಈ ಬಗ್ಗೆ ವಿವಿ ಕುಲಪತಿ ಡಾ. ಎಸ್. ರಾಜೇಂದ್ರ ಪ್ರಸಾದ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಈ ವರ್ಷದಿಂದಲೇ ಕೃಷಿಯಲ್ಲಿ ಸಾಧನೆ ಮಾಡಿದ ರೈತರಿಗೆ ಗೌರವ ಡಾಕ್ಟರೇಟ್ ನೀಡುವ ಬಗ್ಗೆ ಚರ್ಚೆ ನಡೆದಿತ್ತು. ಆದರೆ, ಕೊರೋನಾ ಹಿನ್ನೆಲೆಯಲ್ಲಿ ಈ ಕಾರ್ಯ ಈ ವರ್ಷದಿಂದ ಜಾರಿಗೊಳಿಸುವುದು ಅಸಾಧ್ಯವಾಯಿತು. ಮುಂದಿನ ವರ್ಷದಿಂದ ಈ ಕ್ರಮವನ್ನು ಅನುಸರಿಸಲಾಗುತ್ತದೆ ಎಂದು ಅವರು ಹೇಳಿದರು.
ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ನಡೆಸಿ, ಮಾದರಿಯಾದ ಸಾಧಕ ರೈತರನ್ನು ಗೌರವಿಸುವುದು ಇದರ ಉದ್ದೇಶವಾಗಿದ್ದು. ಇಂತಹ ನಿರ್ಧಾರವನ್ನು ಇಲ್ಲಿಯವರೆಗೆ ಯಾವ ವಿಶ್ವವಿದ್ಯಾಲಯ ಕೂಡ ಕೈಗೊಂಡಿಲ್ಲ ಎಂದು ಅವರು ತಿಳಿಸಿದರು.