• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Vijaya Time

ವೈದ್ಯರು ಪಿಎಂ ಜನೌಷಧಿ ಮಳಿಗೆಯ ಮದ್ದುಗಳನ್ನು ಯಾಕೆ ಒಪ್ಪಿಕೊಳ್ಳುತ್ತಿಲ್ಲ? ಬ್ರ್ಯಾಂಡ್‌ ಔಷಧಗಳನ್ನೇ ಬರೆಯೋದೇಕೆ?

Teju Srinivas by Teju Srinivas
in Vijaya Time, ಆರೋಗ್ಯ, ಪ್ರಮುಖ ಸುದ್ದಿ
ವೈದ್ಯರು ಪಿಎಂ ಜನೌಷಧಿ ಮಳಿಗೆಯ ಮದ್ದುಗಳನ್ನು ಯಾಕೆ ಒಪ್ಪಿಕೊಳ್ಳುತ್ತಿಲ್ಲ? ಬ್ರ್ಯಾಂಡ್‌ ಔಷಧಗಳನ್ನೇ ಬರೆಯೋದೇಕೆ?
0
SHARES
8.3k
VIEWS
Share on FacebookShare on Twitter

Bengaluru: ಇತ್ತೀಚಿಗೆ ಕೆಲವು ಜನರು ವೈದ್ಯರ ಬಗ್ಗೆ, ಅವರು ಸೂಚಿಸುವ ಔಷಧಿಗಳ ಬಗ್ಗೆ ಕೆಲವೊಂದು ಆರೋಪಗಳನ್ನು ಮಾಡ್ತಿದ್ದಾರೆ. ಅದೇನೆಂದರೆ ವೈದ್ಯರು ಕಡಿಮೆ ಬೆಲೆಯ ಅಥವಾ ಜೆನೆರಿಕ್ (Generic) ಔಷಧಗಳನ್ನು ಬರೆಯುವುದಿಲ್ಲ. ಬದಲಾಗಿ ಬ್ರ್ಯಾಂಡ್‌ (doctors not accepting Janaushadhi) ಔಷಧಗಳನ್ನೇ ಬರೆಯುತ್ತಾರೆ ಅಂತ ದೂರುತ್ತಾರೆ.

doctors not accepting Janaushadhi

ಅಷ್ಟೇ ಅಲ್ಲ ಈ ವೈದ್ಯರು ದೊಡ್ಡ ದೊಡ್ಡ ಔಷಧ ಕಂಪನಿಗಳಿಂದ, ಮೆಡಿಕಲ್ ರೆಪ್ರೆಸೆಂಟೇಟಿವ್‌ಗಳಿಂದ (Representative) ದುಬಾರಿ ಉಡುಗೊರೆಗಳನ್ನು ಪಡೆದು,

ಕಂಪೆನಿ ಔಷಧಿಗಳನ್ನೇ ರೋಗಿಗಳಿಗೆ ಸೂಚಿಸುತ್ತಾರೆ. ಈಗ ಸರ್ಕಾರವೇ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳಲ್ಲಿ ಕಡಿಮೆ ಬೆಲೆಯ ಜೆನೆರಿಕ್‌ (Generic) ಔಷಧಿಗಳನ್ನು

ಪೂರೈಸುತ್ತಿದೆ ಆದರೂ ಜೆನೆರಿಕ್ ಔಷಧಗಳನ್ನು ಬರೆಯುವುದಿಲ್ಲ ಎಂದು ಆರೋಪಿಸುತ್ತಿದ್ದಾರೆ. ಹಾಗಾದ್ರೆ ಈ ಆರೋಪದ ಹಿಂದೆ ಇರುವ ಸತ್ಯ ಏನು? ತಿಳಿಯೋಣ.

ಜೆನೆರಿಕ್ ಔಷಧ ಎಂದರೇನು?
ಜನರಿಗೆ ಸಾಮಾನ್ಯವಾಗಿ ಜೆನೆರಿಕ್ ಔಷಧಗಳ ಕುರಿತು ಮಾಹಿತಿ ಇರುವುದಿಲ್ಲ, ಇಂತಹ ಸಂದರ್ಭಗಳಲ್ಲಿ ವೈದ್ಯರು ಒಂದು ವೇಳೆ ಅವುಗಳನ್ನು ಸೂಚಿಸಿದರೆ ಅದರ ಬಗ್ಗೆ ಅನುಮಾನ ಪಡುವ ಸಾಧ್ಯತೆಗಳಿವೆ.

ಉದಾಹರಣೆಗೆ ಜ್ವರ ಅಥವಾ ನೋವಿಗೆ ಸಾಮಾನ್ಯವಾಗಿ ಜನರು ಬಳಸುವ ಮತ್ತು ತಿಳಿದಿರುವ ಔಷಧಿ ಎಂದರೆ ಕ್ರೋಸಿನ್ (Crocin) ಎಂಬ ಬ್ರ್ಯಾಂಡ್‌.

https://youtu.be/si13NZfZStY

ಕ್ರೋಸಿನ್ ಬಗ್ಗೆ ತಿಳಿದಿರುವ ರೋಗಿಯ ಬಳಿ ವೈದ್ಯರು ಪ್ಯಾರಾಸಿಟಮಲ್ (Paracetamol) ಮಾತ್ರೆ ತೆಗೆದುಕೊಳ್ಳಲು ಸೂಚಿಸಿದರೆ ರೋಗಿಗೆ ನನ್ನ ಕಾಯಿಲೆಯನ್ನು ಈ ಮಾತ್ರೆ ಗುಣಪಡಿಸಬಹುದೇ ಎಂಬ ಅನುಮಾನ ಬರುತ್ತದೆ.

ಯಾಕೆಂದರೆ ಜನರಿಗೆ ಪ್ಯಾರಾಸಿಟಮಲ್ ಎನ್ನುವ ಮಾತ್ರೆಯು ಕ್ರೋಸಿನ್ ಮಾತ್ರೆಯ ಜೆನೆರಿಕ್ ಹೆಸರು ಎಂಬ ಅರಿವಿರುವುದಿಲ್ಲ.

ಆದ್ದರಿಂದ ರೋಗಿಗಳಿಗೆ ಇಂತಹ ಮಾಹಿತಿ ಗೊತ್ತಿಲ್ಲದೇ ಇರುವುದರಿಂದ ವೈದ್ಯರು ಸಾಮಾನ್ಯವಾಗಿ ಬ್ರಾಂಡೆಡ್ ಔಷಧಗಳನ್ನು ಸೂಚಿಸುತ್ತಾರೆ.

doctors not accepting Janaushadhi

ವೈದ್ಯರು ಜೆನೆರಿಕ್ ಔಷಧಗಳನ್ನು ಸೂಚಿಸದಿರಲು ಕಾರಣ ಏನಿರಬಹುದು?

  1. ಮುಖ್ಯ ಕಾರಣವೆಂದರೆ ಔಷಧಗಳ ಲಭ್ಯತೆ. ಬಹುತೇಕ ಜನೌಷಧಿ ಕೇಂದ್ರಗಳಲ್ಲಿ ಜೆನೆರಿಕ್ ಔಷಧಗಳ ಬಗ್ಗೆ ಅತ್ಯಂತ ಕಡಿಮೆ ಮಾಹಿತಿಯಿರುತ್ತದೆ. ಇಲ್ಲಿ ಜೆನೆರಿಕ್ ಔಷಧಗಳ ಸಂಗ್ರಹ ಇಟ್ಟಿರುವುದಿಲ್ಲ. ಆದ್ದರಿಂದ ರೋಗಿಗಳು ಒಂದೊಂದು ಔಷಧಗಳನ್ನು ಹುಡುಕಿಕೊಂಡು ಬೇರೆ ಬೇರೆ ಔಷಧ ಮಳಿಗೆಗಳಿಗೆ ತೆರಳುತ್ತಾರೆ.ಇದರಿಂದ ಸುಸ್ತಾಗುತ್ತದೆ ಹಾಗಾಗಿ ಇಂತಹ ಸಮಸ್ಯೆಯೇ ಬೇಡವೆಂದು ರೋಗಿಗಳು ಮುಂದಿನ ಬಾರಿ ಔಷಧ ಕೊಡುವಾಗ ಸ್ಥಳೀಯವಾಗಿ ಲಭ್ಯವಿರುವ ಔಷಧಗಳನ್ನು ಕೊಡುವಂತೆ ವೈದ್ಯರ ಬಳಿ ಕೇಳಿಬಿಡುತ್ತಾರೆ.
  2. ಇನ್ನು ಎಲ್ಲಾ ವೈದ್ಯರೂ ಒಂದೇ ರೀತಿಯಾಗಿರುವುದಿಲ್ಲ. ಯಾಕೆಂದರೆ ಕೆಲವೇ ಕೆಲವು ವೈದ್ಯರು ಜೆನೆರಿಕ್ ಔಷಧಗಳನ್ನು ಬರೆದು ಕೊಡುತ್ತಾರೆ.
    3.ಇನ್ನು ಕೆಲವು ವೈದ್ಯರು ಇತರ ಔಷಧ ಕಂಪನಿಗಳೊಡನೆ (Company) ಅಥವಾ ರೆಪ್ರೆಸೆಂಟೇಟಿವ್‌ಗಳಿಂದ (Representative) ಸಹಯೋಗ ಹೊಂದಿರುತ್ತಾರೆ.
    4.ಇನ್ನು ಕೆಲವೊಂದು ಸಂದರ್ಭಗಳಲ್ಲಿ ವೈದ್ಯರ ಸಂಬಂಧಿಗಳೇ ಔಷಧ ಅಂಗಡಿಗಳನ್ನು ನಡೆಸುತ್ತಿರುತ್ತಾರೆ ಅಂತಹ ಸಂದರ್ಭಗಳಲ್ಲಿ ವೈದ್ಯರು ಅಲ್ಲಿಗೆ ಚೀಟಿ ಕೊಡುವುದು ಸಹಜವಾಗಿರುತ್ತದೆ.

ಭಾರತೀಯ ಜನೌಷಧಿ ಯೋಜನೆ ಎಂದರೇನು?
ನವೆಂಬರ್ 2008ರಲ್ಲಿ ರೋಗಿಗಳಿಗೆ ಕಡಿಮೆ ಬೆಲೆಯ, ಪರಿಣಾಮಕಾರಿ ಔಷಧಿಗಳನ್ನು ಒದಗಿಸಬೇಕೆಂಬ ನಿಟ್ಟಿನಲ್ಲಿ ಪ್ರಧಾನ್ ಮಂತ್ರಿ ಭಾರತೀಯ ಜನೌಷಧಿ ಜಾರಿಗೆ ಬಂದಿತು,

ಈ ಯೋಜನೆಯು 1,759 ಔಷಧ ಹಾಗೂ 280 ಸರ್ಜಿಕಲ್ ಉಪಕರಣಗಳನ್ನು ಒಳಗೊಂಡಿದೆ.ಅಕ್ಟೋಬರ್ 2022ರ ವರದಿಗಳ ಪ್ರಕಾರ, ದೇಶಾದ್ಯಂತ ಒಟ್ಟು 8,819 ಜನೌಷಧಿ ಕೇಂದ್ರಗಳು ಈಗ ಕಾರ್ಯಾಚರಿಸುತ್ತಿವೆ.

ಜನೌಷಧಿ ಕೇಂದ್ರಗಳಲ್ಲಿ ಸಿಗುವ ಔಷಧಗಳು ಇತರ ಬ್ರ್ಯಾಂಡ್‌ಗಳ ಔಷಧಗಳಷ್ಟೇ ಉತ್ತಮ ಗುಣಮಟ್ಟ ಹೊಂದಿವೆ ಎಂದು ನಡೆಸಲಾದ ಕೆಲವು ಅಧ್ಯಯನಗಳಲ್ಲಿ ತಿಳಿದು ಬಂದಿದೆ.


ಜನೌಷಧಿ ಕೇಂದ್ರಗಳಲ್ಲಿ ಔಷಧಗಳು ಯಾಕೆ ಕಡಿಮೆ ಬೆಲೆ ಹೊಂದಿವೆ?
ಜನೌಷಧಿ ಕೇಂದ್ರದಲ್ಲಿ ಔಷಧಗಳನ್ನು ಬ್ರ್ಯಾಂಡ್ (Brand) ಹೆಸರಿಲ್ಲದೆ ಮಾರಾಟ ಮಾಡಲಾಗುತ್ತದೆ. ಆದ್ದರಿಂದ ಜನೌಷಧಿ ಕೇಂದ್ರದ ಔಷಧಗಳು ಸದ್ಯದ ಮಾರುಕಟ್ಟೆಯ

ಇತರ ಬ್ರ್ಯಾಂಡ್‌ಗಳ ಔಷಧಗಳಿಂದ ಕನಿಷ್ಠ 50% ಕಡಿಮೆ ಬೆಲೆಯನ್ನು ಹೊಂದಿರುತ್ತವೆ. ಇನ್ನು ಕೆಲವು ಔಷಧಗಳಂತೂ 80% – 90% ಕಡಿಮೆ ಬೆಲೆ ಹೊಂದಿರುತ್ತವೆ.

ಇನ್ನು ಔಷಧಿಯ ಮಾರಾಟ ಬೆಲೆಯ 20%ದಷ್ಟು ಲಾಭಾಂಶವು ಜನೌಷಧಿ ಕೇಂದ್ರಗಳ ಮಾಲಕರಿಗೆಸಿಗುತ್ತದೆ

ರಶ್ಮಿತಾ ಅನೀಶ್

Tags: bengalurujanaushadhimedicinePM Narendra Modi

Related News

ಮನುವಾದಿಗಳ ಹಿಜಾಬು ಬ್ಯಾನ್ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಉರುಳಿಸಿತ್ತು : ನಟ ಕಿಶೋರ್
Vijaya Time

ಮನುವಾದಿಗಳ ಹಿಜಾಬು ಬ್ಯಾನ್ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಉರುಳಿಸಿತ್ತು : ನಟ ಕಿಶೋರ್

May 29, 2023
ಕಾಂಗ್ರೇಸ್ ಸರ್ಕಾರದ ಗ್ಯಾರಂಟಿ ಯೋಜನೆ ಬಗ್ಗೆ ಜೂ.1ಕ್ಕೆ ಸಂಪುಟ ಸಭೆ: ಡಿ.ಕೆ.ಶಿವಕುಮಾರ್‌
Vijaya Time

ಕಾಂಗ್ರೇಸ್ ಸರ್ಕಾರದ ಗ್ಯಾರಂಟಿ ಯೋಜನೆ ಬಗ್ಗೆ ಜೂ.1ಕ್ಕೆ ಸಂಪುಟ ಸಭೆ: ಡಿ.ಕೆ.ಶಿವಕುಮಾರ್‌

May 29, 2023
ಇಂದು ಐಪಿಎಲ್ 2023 ರ ಚೆನ್ನೈ Vsಗುಜರಾತ್ ಫೈನಲ್ ಪಂದ್ಯ : ಯಾರಿಗೆ ಒಲಿಯಲಿದೆ ಕಪ್‌?
Sports

ಇಂದು ಐಪಿಎಲ್ 2023 ರ ಚೆನ್ನೈ Vsಗುಜರಾತ್ ಫೈನಲ್ ಪಂದ್ಯ : ಯಾರಿಗೆ ಒಲಿಯಲಿದೆ ಕಪ್‌?

May 29, 2023
ಸರ್ಕಾರಿ ಶಾಲೆಗಳಿಗೆ ಹೊಸ ಮಾರ್ಗಸೂಚಿ ಜಾರಿ: ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಏನೆಲ್ಲಾ ಕ್ರಮ ಜಾರಿ?
Vijaya Time

ಸರ್ಕಾರಿ ಶಾಲೆಗಳಿಗೆ ಹೊಸ ಮಾರ್ಗಸೂಚಿ ಜಾರಿ: ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಏನೆಲ್ಲಾ ಕ್ರಮ ಜಾರಿ?

May 29, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.