• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಭಾರತದ ಸಾಲದ ಭಾರ: ₹188 ಲಕ್ಷ ಕೋಟಿಗೆ ಏರಿದ ಆರ್ಥಿಕ ಹೊರೆ

Shwetha Mohan by Shwetha Mohan
in ದೇಶ-ವಿದೇಶ, ವಿಜಯ ಟೈಮ್ಸ್‌, ಷೇರುಪೇಟೆ
ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಭಾರತದ ಸಾಲದ ಭಾರ: ₹188 ಲಕ್ಷ ಕೋಟಿಗೆ ಏರಿದ ಆರ್ಥಿಕ ಹೊರೆ
0
SHARES
12
VIEWS
Share on FacebookShare on Twitter
  • ಹೆಚ್ಚುತ್ತಿರುವ ಭಾರತದ ಸಾಲದ ಭಾರ
  • ಕರ್ನಾಟಕದ ಪಾಲು ₹7.6 ಲಕ್ಷ ಕೋಟಿ
  • ₹188 ಲಕ್ಷ ಕೋಟಿಗೆ ಏರಿದ ಭಾರತದ ಸಾಲ ಆರ್ಥಿಕತೆಗೆ ಎಚ್ಚರಿಕೆ ಗಂಟೆ

ಭಾರತದ ಆರ್ಥಿಕತೆಯ(Economy of India) ಪ್ರಸ್ತುತ ಸ್ಥಿತಿ ಬಗ್ಗೆ ಆಳವಾದ ಚಿಂತನೆಯನ್ನು ಕೇಳಿಸುವ ಅಂಕಿಅಂಶಗಳು ಹೊರಬಿದ್ದಿವೆ.

2014ರಲ್ಲಿ ದೇಶದ ಒಟ್ಟು ಸಾಲ ₹55 ಲಕ್ಷ ಕೋಟಿ ಇದ್ದರೆ, 2025ರ ವೇಳೆಗೆ ಇದು ₹188 ಲಕ್ಷ ಕೋಟಿಗೆ ಏರಲಿದೆ. ಅಂದರೆ 10 ವರ್ಷಗಳಲ್ಲಿ ಮೂರುಪಟ್ಟುಗಿಂತ ಹೆಚ್ಚು ಏರಿಕೆಯಾಗಿರುವುದು ಸ್ಪಷ್ಟ.

ಭಾರತ ಜಗತ್ತಿನ 4ನೇ ಅತಿದೊಡ್ಡ ಆರ್ಥಿಕಶಕ್ತಿಯಾಗಿ ಬೆಳೆದರೂ, ಈ ಬೆಳವಣಿಗೆಯ ಬೆನ್ನಿಗೆ ಸಾಗುತ್ತಿರುವ ಸಾಲದ ಭಾರ(Debt burden) ಆತಂಕಕಾರಿಯಾಗಿದೆ.

ಇನ್ನು ದೇಶದ ಸಾಲದಲ್ಲಿ ಅಂತರಿಕ (Internal) ಮತ್ತು ಬಾಹ್ಯ (External) ಸಾಲ ಎರಡೂ ಮುಖ್ಯ ಪಾತ್ರ ವಹಿಸುತ್ತಿವೆ. ಮುಂದಿನ 5-6 ವರ್ಷಗಳಲ್ಲಿ, 2026 ರಿಂದ 2031ರ ನಡುವೆ ಭಾರತದಲ್ಲಿ INTERNAL DEBT ಮತ್ತು EXTERNAL DEBT ಎರಡೂ ₹200 ಲಕ್ಷ ಕೋಟಿಯ ಮಟ್ಟವನ್ನು ತಲುಪಲಿವೆ ಎಂಬ ನಿರೀಕ್ಷೆ ಇದೆ.

ಇದು ಭಾರತೀಯ ಹಣಕಾಸು ವ್ಯವಸ್ಥೆಯ ಮೇಲೆ ಉಂಟುಮಾಡಬಹುದಾದ ಒತ್ತಡಕ್ಕೆ ಸ್ಪಷ್ಟ ಸೂಚನೆಯಾಗಿದೆ.

ಈ ಸಾಲದ ಏರಿಕೆ ನಿಜಕ್ಕೂ ಚಿಂತೆಗೆ ಕಾರಣವಾಗಿದೆ, ದೇಶದ ಹಣಕಾಸು ಸಮತೋಲನದ ಮೇಲೆ ನೇರ ಪರಿಣಾಮ ಬೀರುತ್ತದೆ. ರಾಜ್ಯಮಟ್ಟದಲ್ಲಿಯೂ ಸಾಲದ ಮಟ್ಟ ತೀವ್ರವಾಗಿದೆ.

ಮಹಾರಾಷ್ಟ್ರ (₹8.33 ಲಕ್ಷ ಕೋಟಿ), ಉತ್ತರ ಪ್ರದೇಶ (₹8.16 ಲಕ್ಷ ಕೋಟಿ), ತಮಿಳುನಾಡು (₹7.83 ಲಕ್ಷ ಕೋಟಿ), ಆಂಧ್ರಪ್ರದೇಶ (₹7.64 ಲಕ್ಷ ಕೋಟಿ) ಮೊದಲಾದ ರಾಜ್ಯಗಳು ಭಾರಿ ಸಾಲದಲ್ಲಿವೆ.

Economic burden has increased
India’s debt burden
ಕರ್ನಾಟಕವೂ ಈ ಪಟ್ಟಿಯಲ್ಲಿ ಇದ್ದು, ಇದರ ಒಟ್ಟು ಸಾಲ ₹7.64 ಲಕ್ಷ ಕೋಟಿ. ರಾಜ್ಯಗಳು ವಲಯ ಯೋಜನೆಗಳು, ಉಚಿತ ಸೌಲಭ್ಯಗಳು ಹಾಗೂ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲು ಹೊಸ ಸಾಲಗಳನ್ನು ಮಾಡುತ್ತಿವೆ.

ಇದು ತಾತ್ಕಾಲಿಕ ಉಪಯೋಗ ನೀಡಿದರೂ, ದೀರ್ಘಾವಧಿಯಲ್ಲಿ ಬಡ್ಡಿ ಪಾವತಿಗೆ ರಾಜ್ಯದ ಬಜೆಟ್‌ನ ಬಹುಪಾಲು ಬಳಸಲ್ಪಡುವ ಸಾಧ್ಯತೆ ಇದೆ. ಇನ್ನು 2024ರ ಹಣಕಾಸು ವರ್ಷದ ಕರ್ನಾಟಕ ಮುಕ್ತ ಸಾಲ ಭಾರ ₹2.52 ಲಕ್ಷ ಕೋಟಿ.

ಈ ಪೈಕಿ:
ಬಡ್ಡಿ ಪಾವತಿ: ₹33,880 ಕೋಟಿ
ಉದ್ಯೋಗ ವೇತನ ಮತ್ತು ನಿವೃತ್ತಿ: ₹60,007 ಕೋಟಿ
ಉಚಿತ ಯೋಜನೆಗಳಿಗೆ ವೆಚ್ಚ: ₹50,776 ಕೋಟಿ


ಈ ಅಂಕಿಅಂಶಗಳು ಸ್ಪಷ್ಟವಾಗಿ ಏನು ಹೇಳುತ್ತವೆ ಎಂದರೆ, ರಾಜ್ಯ ಸರ್ಕಾರದ(State Govt) ಬಹುಪಾಲು ವೆಚ್ಚಗಳು ಬಡ್ಡಿ, ವೇತನ ಮತ್ತು ಉಚಿತ ಸೌಲಭ್ಯಗಳಲ್ಲಿ ಖರ್ಚು ಹೆಚ್ಚಾಗುತ್ತಿದೆ.

ಶೈಕ್ಷಣಿಕ ಮತ್ತು ಆರೋಗ್ಯ ವಿಭಾಗಗಳಿಗೆ ಕಡಿಮೆ ಆದ್ಯತೆ ಸಿಗುತ್ತಿದೆ ಎಂಬುದನ್ನು ಸಾಬೀತು ಪಡಿಸುತ್ತದೆ.

ಇಂತಹ ಭಾರೀ ಸಾಲದ ಪರಿಣಾಮವಾಗಿ ಸರ್ಕಾರಗಳು ಸಾಮಾಜಿಕ ಹಾಗೂ ಮೂಲಭೂತ ಯೋಜನೆಗಳಿಗೆ ನಿಜವಾದ ಅರ್ಥದ ಸಂಪತ್ತನ್ನು ಹಂಚಲಾಗದ ಸ್ಥಿತಿಗೆ ಹೋಗುತ್ತವೆ.

ಶಿಕ್ಷಣ, ಆರೋಗ್ಯ, ಕೃಷಿ, ನಿರುದ್ಯೋಗ ಶಮನ ಕಾರ್ಯಕ್ರಮಗಳಿಗೆ ನೀಡಬೇಕಾದ ಅನುದಾನ ಕಡಿಮೆಯಾಗುತ್ತಿದೆ. ಜೊತೆಗೆ ಹೂಡಿಕೆದಾರರಲ್ಲಿ ಭದ್ರತೆಯ ಕೊರತೆ ಕಾಣಿಸುತ್ತಿದ್ದು,

ಬಂಡವಾಳ ಮಾರುಕಟ್ಟೆಯ ಮೇಲೆ ಕೂಡ ಪರಿಣಾಮ ಬೀರುತ್ತದೆ. ಮುಂದಿನ ಪೀಳಿಗೆ ಈ ಸಾಲ ತೀರಿಸಬೇಕಾದ ಹೊರೆ ಹೊರುತ್ತದೆ ಎಂಬುದು ಅತ್ಯಂತ ಗಂಭೀರವಾದ ಅಂಶವಾಗಿದೆ.

ಸಾಲಗಳು ಹೆಚ್ಚಿದಂತೆ ಭಾರಿ ಸಾಲವನ್ನು ನಿಭಾಯಿಸಲು ಸರ್ಕಾರಕ್ಕೆ ಆದಾಯದ ಹೊಸ ಮೂಲಗಳು ಬೇಕಾಗುತ್ತದೆ. ಏನೇ ಆದರೂ ಈ ಸಾಲದ ವೃದ್ಧಿಯು ಭವಿಷ್ಯದ ಪೀಳಿಗೆಗಳ ಮೇಲೆ ಹೊರೆ ಬೀರುವ ಸಾಧ್ಯತೆ ಉಂಟುಮಾಡುತ್ತದೆ.

ಸಾಲದಿಂದ ಅಭಿವೃದ್ಧಿಯ ಪಥದಲ್ಲಿ ಸಾಗುವುದು ತಪ್ಪಲ್ಲದಾದರೂ, ಇದು ದೀರ್ಘಕಾಲಿಕ ಆರ್ಥಿಕ ಸ್ಥಿರತೆಗೆ ಧಕ್ಕೆಯಾಗದಂತೆ ಸಮತೋಲನ ಸಾಧಿಸುವುದು ಸರ್ಕಾರದ ಹೊಣೆಯಾಗಿರುತ್ತದೆ.

ಸಾಲ ಮಾಡುವುದರಲ್ಲಿ ತಪ್ಪಿಲ್ಲ. ಯಾವುದೇ ದೇಶ ತನ್ನ ಅಭಿವೃದ್ಧಿಗೆ ಸಾಲವನ್ನು ಉಪಯೋಗಿಸುತ್ತದೆ.

ಆದರೆ, ಅವಿಭಜಿತವಾಗಿ ಹಾಗೂ ಉದ್ದೇಶವಿಲ್ಲದ ಸಾಲ ನಿರ್ವಹಣೆ ದೀರ್ಘಾವಧಿಯಲ್ಲಿ ಆರ್ಥಿಕ ಸಂಕಷ್ಟವನ್ನು ಉಂಟುಮಾಡಬಹುದು.

ಬಡ್ಡಿ ಪಾವತಿಗೆ ಮಾತ್ರವೇ ಬಹುಪಾಲು ಬಜೆಟ್‌ ಮೀಸಲಾದರೆ, ಸಾಮಾಜಿಕ ಅಭಿವೃದ್ಧಿಗೆ ಹಾನಿಯಾಗುತ್ತದೆ. ಸರ್ಕಾರಗಳು ನೀತಿಯ ಸ್ವಚ್ಚತೆ,

ಇದನ್ನು ಓದಿ :  ಸ್ಮಾರ್ಟ್ ಮೀಟರ್ ಟೆಂಡರ್ ಅಕ್ರಮ : ಕೆಜೆ ಜಾರ್ಜ್​ ವಿರುದ್ಧ ಪಿಸಿಆರ್ ದಾಖಲಿಸುವಂತೆ ಜನಪ್ರತಿನಿಧಿಗಳ ಕೋರ್ಟ್ ಆದೇಶ

ಶಿಸ್ತುಬದ್ಧ ಆರ್ಥಿಕ ನಿರ್ವಹಣೆ ಮತ್ತು ಖರ್ಚಿನ ಉಳಿತಾಯದ ಬಗ್ಗೆ ಗಂಭೀರವಾಗಿರಬೇಕಾಗಿದೆ.

Tags: DebtBurdenfinancialcrisisIndiaDebtCrisisIndianEconomyIndianFinanceloanvijaya times

Related News

ಸ್ಕ್ವಾಷ್ ವಿಶ್ವಕಪ್; ಹಾಂಗ್‌ಕಾಂಗ್‌ ವಿರುದ್ಧ ಗೆದ್ದು ಬೀಗಿದ ಭಾರತ
Sports

ಸ್ಕ್ವಾಷ್ ವಿಶ್ವಕಪ್; ಹಾಂಗ್‌ಕಾಂಗ್‌ ವಿರುದ್ಧ ಗೆದ್ದು ಬೀಗಿದ ಭಾರತ

December 15, 2025
ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ
ಪ್ರಮುಖ ಸುದ್ದಿ

ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್‌ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ

December 15, 2025
ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ
ದೇಶ-ವಿದೇಶ

ಕೋಲ್ಕತ್ತಾ ಸ್ಟೇಡಿಯಂನಲ್ಲಿ ಮೆಸ್ಸಿ ಫ್ಯಾನ್ಸ್ ದಾಂಧಲೆ:ಮೆಸ್ಸಿ ಮೇನಿಯಾ ಅವ್ಯವಸ್ಥೆಯಿಂದ ಅಂತ್ಯ

December 13, 2025
ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ
ಪ್ರಮುಖ ಸುದ್ದಿ

ಪ್ರತಿ ತಿಂಗಳು ಹೂಡಿಕೆ ಮಾಡುವ SIP ನ ಅಸಲಿ ಸತ್ಯ

December 13, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.