• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ರಾಜ್ಯ ಶಿಕ್ಷಣ ನೀತಿ ವರದಿ: ಹಿಂದಿಗೆ ‘ಕೊಕ್’, ದ್ವಿಭಾಷಾ ಸೂತ್ರಕ್ಕೆ ಶಿಫಾರಸು

Shameena Mulla by Shameena Mulla
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌, ಶಿಕ್ಷಣ
ರಾಜ್ಯ ಶಿಕ್ಷಣ ನೀತಿ ವರದಿ: ಹಿಂದಿಗೆ ‘ಕೊಕ್’, ದ್ವಿಭಾಷಾ ಸೂತ್ರಕ್ಕೆ ಶಿಫಾರಸು
0
SHARES
19
VIEWS
Share on FacebookShare on Twitter
  • ದ್ವಿಭಾಷಾ ನೀತಿಗೆ ಶಿಫಾರಸು – ಹಿಂದಿಗೆ ಕೊಕ್, ಕನ್ನಡ-ಇಂಗ್ಲಿಷ್‌ಗೆ ಒತ್ತು
  • ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 2,197 ಪುಟಗಳ ವರದಿ ಸಲ್ಲಿಕೆ
  • ಕನ್ನಡ ಅಥವಾ ಮಾತೃಭಾಷೆಯನ್ನೇ ಬೋಧನಾ ಮಾಧ್ಯಮವನ್ನಾಗಿ ಕಡ್ಡಾಯಗೊಳಿಸುವಂತೆ ಶಿಫಾರಸು

Bengaluru: ಕರ್ನಾಟಕ ರಾಜ್ಯ ಶಿಕ್ಷಣ ನೀತಿ (SEP) ಕುರಿತ ಅಂತಿಮ ವರದಿಯನ್ನು (Education Policy Report by karnataka) ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಗೆ ಸಲ್ಲಿಸಲಾಗಿದೆ.

ಗೃಹ ಕಚೇರಿ ಕೃಷ್ಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಆಯೋಗದ ಅಧ್ಯಕ್ಷ ಪ್ರೊ. ಸುಖದೇವ್ ಥೋರಟ್ (Prof. Sukhdev Thorat) , ಉಪಮುಖ್ಯಮಂತ್ರಿ ಡಿ.ಕೆ.

ಶಿವಕುಮಾರ್ (D.K.Shivakumar) , ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ (Dr. M.C. Sudhakar), ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

new Education Policy
ಒಟ್ಟು 2,197 ಪುಟಗಳ ಈ ವರದಿ ಮೂರು ಪ್ರಮುಖ ಭಾಗಗಳನ್ನು ಒಳಗೊಂಡಿದೆ — ಶಾಲಾ ಶಿಕ್ಷಣ (580 ಪುಟ), ಉನ್ನತ ಶಿಕ್ಷಣ (455 ಪುಟ) ಹಾಗೂ ವೃತ್ತಿಪರ ಶಿಕ್ಷಣ (ಸುಮಾರು 450 ಪುಟ).

ಜೊತೆಗೆ 617 ಕೋಷ್ಟಕಗಳು, 47 ಚಿತ್ರಗಳು, 16 ಗ್ರಾಫ್‌ಗಳು ಮತ್ತು 619 ಪುಟಗಳ ಅನುಬಂಧಗಳಿವೆ.

ಇನ್ನು ವರದಿಯಲ್ಲಿ 2+8+4 ಶೈಕ್ಷಣಿಕ ರಚನೆ ಶಿಫಾರಸು ಮಾಡಲಾಗಿದ್ದು, 2 ವರ್ಷ ಪೂರ್ವ-ಪ್ರಾಥಮಿಕ, 8 ವರ್ಷ ಪ್ರಾಥಮಿಕ ಮತ್ತು 4 ವರ್ಷ ಮಾಧ್ಯಮಿಕ ಶಿಕ್ಷಣವನ್ನು ಒಳಗೊಂಡಿದೆ.

ಎಲ್ಲ ಬೋರ್ಡ್‌ಗಳ (Board) ಶಾಲೆಗಳಲ್ಲಿ 5ನೇ ತರಗತಿವರೆಗೆ ಕನ್ನಡ ಅಥವಾ ಮಾತೃಭಾಷೆಯನ್ನು ಬೋಧನಾ ಮಾಧ್ಯಮವನ್ನಾಗಿ ಕಡ್ಡಾಯಗೊಳಿಸುವುದು

ಮತ್ತು ದ್ವಿಭಾಷಾ ನೀತಿಯನ್ನು (ಕನ್ನಡ/ಮಾತೃಭಾಷೆ + ಇಂಗ್ಲಿಷ್) ಜಾರಿಗೆ ತರಲು ಸಲಹೆ ನೀಡಲಾಗಿದೆ.

ಇದರಿಂದ ಹಾಲಿ ಜಾರಿಯಲ್ಲಿರುವ ತ್ರಿಭಾಷಾ ಸೂತ್ರದಲ್ಲಿ ಹಿಂದಿ ಬೋಧನೆ (Education Policy Report by karnataka) ಕೊನೆಯಾಗಬಹುದು.

ಶಾಲಾ ಶಿಕ್ಷಣಕ್ಕೆ ಪ್ರಮುಖ ಶಿಫಾರಸುಗಳು

ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಕೇಂದ್ರ ವಿದ್ಯಾಲಯ ಮಟ್ಟಕ್ಕೆ ಏರಿಕೆ


RTE ವ್ಯಾಪ್ತಿಯನ್ನು ಹಂತ ಹಂತವಾಗಿ 4ರಿಂದ 18 ವಯಸ್ಸಿನವರೆಗೆ ವಿಸ್ತರಣೆ
NCERT ಪಾಠಪುಸ್ತಕಗಳ ಅವಲಂಬನೆ ಕಡಿತ, ಸ್ಥಳೀಯೀಕೃತ ವಿಷಯಗಳು
ಗುತ್ತಿಗೆ/ಅತಿಥಿ ಶಿಕ್ಷಕರ ನೇಮಕಾತಿ ಸ್ಥಗಿತ
ಖಾಸಗಿ ಶಾಲೆಗಳಿಗಾಗಿ ಪ್ರತ್ಯೇಕ ನಿಯಂತ್ರಣ ಸಂಸ್ಥೆ
ಶಿಕ್ಷಣಕ್ಕೆ ರಾಜ್ಯ ವೆಚ್ಚದ ಪಾಲನ್ನು 30%ಕ್ಕೆ ಏರಿಕೆ

ಉನ್ನತ ಶಿಕ್ಷಣ ಶಿಫಾರಸುಗಳು:

  • GSDPಯ 4% ಅನ್ನು ಶಿಕ್ಷಣಕ್ಕೆ ಮೀಸಲು, 2034-35ರ ವೇಳೆಗೆ ಉನ್ನತ ಶಿಕ್ಷಣಕ್ಕೆ 1%
  • 3+2 ಪದವಿ-ಸ್ನಾತಕೋತ್ತರ ಮಾದರಿ, ವೃತ್ತಿಪರ ಕೋರ್ಸ್‌ಗಳಿಗೆ 4+2 ಮಾದರಿ
  • ದ್ವಿಭಾಷಾ ಬೋಧನೆ ಹಾಗೂ ಪಠ್ಯಪುಸ್ತಕಗಳ ದ್ವಿಭಾಷಾ ಆವೃತ್ತಿ
  • SC/ST/OBC ಮೀಸಲಾತಿ ನಿಯಮಗಳನ್ನು ಖಾಸಗಿ ಅನುದಾನರಹಿತ ಸಂಸ್ಥೆಗಳಲ್ಲಿ ಜಾರಿಗೆ ತರುವುದು
  • ಕಡಿಮೆ ಆದಾಯದ ಮುಸ್ಲಿಂ ವಿದ್ಯಾರ್ಥಿಗಳಿಗೆ ಸಂಪೂರ್ಣ ಆರ್ಥಿಕ ನೆರವು
  • ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ, ಬಾಲ್ಯವಿವಾಹ ತಡೆಗೆ ಪ್ರೋತ್ಸಾಹಕ ಯೋಜನೆಗಳು

ವೃತ್ತಿಪರ ಶಿಕ್ಷಣ ಶಿಫಾರಸುಗಳು:

ಉದ್ಯೋಗ ಆಧಾರಿತ ವೃತ್ತಿಪರ ಕೋರ್ಸ್‌ಗಳ ವಿಸ್ತರಣೆ

  • ಗ್ರಾಮೀಣ ಮತ್ತು ಕೃಷಿ ಕ್ಷೇತ್ರದಲ್ಲಿ ಅಲ್ಪಾವಧಿ ಡಿಪ್ಲೊಮಾ (Diploma) /ಪ್ರಮಾಣಪತ್ರ ಕೋರ್ಸ್‌ಗಳ ಪ್ರೋತ್ಸಾಹ
  • ಇಂಟರ್ನ್‌ಶಿಪ್ ವ್ಯವಸ್ಥೆ, ಉದ್ಯಮ-ಶೈಕ್ಷಣಿಕ ಸಹಯೋಗ
  • AI, ML, ಕ್ವಾಂಟಮ್ ಕಂಪ್ಯೂಟಿಂಗ್ (Quantum Computing) , ನ್ಯಾನೋ ಸೈನ್ಸ್ (Nanoscience) ಮುಂತಾದ ತಂತ್ರಜ್ಞಾನಗಳ ಕುರಿತು ಹೆಚ್ಚಿನ ಮಾಹಿತಿ
  • ಕೃಷಿ ಶಿಕ್ಷಣಕ್ಕೆ ಕನ್ನಡ ಪಠ್ಯಪುಸ್ತಕಗಳ ಅಭಿವೃದ್ಧಿ
  • ಈ ಶಿಫಾರಸುಗಳು ಜಾರಿಗೆ ಬಂದರೆ, ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸುವ ಸಾಧ್ಯತೆ ಇದೆ. ಹಿಂದಿ ಬೋಧನೆ ಕಡ್ಡಾಯವಲ್ಲದ ದ್ವಿಭಾಷಾ ಮಾದರಿ, ಪ್ರಾದೇಶಿಕ ಭಾಷೆಗೆ ಹೆಚ್ಚಿನ ಪ್ರೋತ್ಸಾಹ ಹಾಗೂ ಗ್ರಾಮೀಣ-ಕಡಿಮೆ ಆದಾಯದ ವಿದ್ಯಾರ್ಥಿಗಳಿಗೆ ಬಲವಾದ ಬೆಂಬಲ ನೀಡುವುದು ಈ ನೀತಿಯ ಪ್ರಮುಖ ಅಂಶಗಳಾಗಿವೆ.

ಇದನ್ನು ಓದಿ: ಸ್ಮಾರ್ಟ್ ಮೀಟರ್ ಟೆಂಡರ್ ಅಕ್ರಮ : ಕೆಜೆ ಜಾರ್ಜ್​ ವಿರುದ್ಧ ಪಿಸಿಆರ್ ದಾಖಲಿಸುವಂತೆ ಜನಪ್ರತಿನಿಧಿಗಳ ಕೋರ್ಟ್ ಆದೇಶ

Tags: EducationEducation ministerKarnatakaMadhu BangarapapoliticsSiddaramaiahstate education policy

Related News

ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕಳ್ಳರ ಕೈಚಳಕ:ಫ್ಲಿಪ್‌ಕಾರ್ಟ್ ಕಂಪನಿಗೆ ಸೇರಿದ 24 ಲಕ್ಷದ ಮೊಬೈಲ್ ಸೇರಿ, ಇತರೆ ಗೂಡ್ಸ್‌ ಕಳವು
ಪ್ರಮುಖ ಸುದ್ದಿ

ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕಳ್ಳರ ಕೈಚಳಕ:ಫ್ಲಿಪ್‌ಕಾರ್ಟ್ ಕಂಪನಿಗೆ ಸೇರಿದ 24 ಲಕ್ಷದ ಮೊಬೈಲ್ ಸೇರಿ, ಇತರೆ ಗೂಡ್ಸ್‌ ಕಳವು

February 7, 2026
ತಿರುಮಲ ಲಡ್ಡು ವಿವಾದ: ಬಾತ್‌ರೂಮ್ ಕ್ಲೀನಿಂಗ್ ಕೆಮಿಕಲ್ ಆರೋಪದಿಂದ ರಾಜ್ಯ ರಾಜಕಾರಣದಲ್ಲಿ ಭಾರಿ ಗದ್ದಲ
ದೇಶ-ವಿದೇಶ

ತಿರುಮಲ ಲಡ್ಡು ವಿವಾದ: ಬಾತ್‌ರೂಮ್ ಕ್ಲೀನಿಂಗ್ ಕೆಮಿಕಲ್ ಆರೋಪದಿಂದ ರಾಜ್ಯ ರಾಜಕಾರಣದಲ್ಲಿ ಭಾರಿ ಗದ್ದಲ

February 7, 2026
ಇಂದು ದೇಶಾದ್ಯಂತ ಓಲಾ, ಉಬರ್, ರ‍್ಯಾಪಿಡೋ ಮುಷ್ಕರ
ದೇಶ-ವಿದೇಶ

ಇಂದು ದೇಶಾದ್ಯಂತ ಓಲಾ, ಉಬರ್, ರ‍್ಯಾಪಿಡೋ ಮುಷ್ಕರ

February 7, 2026
ಚೆನ್ನೈನಲ್ಲಿ ನೂರಾರು ಕಾಗೆಗಳ ಸಾವು: H5N1 ಹಕ್ಕಿಜ್ವರ ಸೋಂಕು ಹರಡುವಿಕೆ ತಡೆಯಲು ಮುಂದಾದ ಆರೋಗ್ಯ ಇಲಾಖೆ
ದೇಶ-ವಿದೇಶ

ಚೆನ್ನೈನಲ್ಲಿ ನೂರಾರು ಕಾಗೆಗಳ ಸಾವು: H5N1 ಹಕ್ಕಿಜ್ವರ ಸೋಂಕು ಹರಡುವಿಕೆ ತಡೆಯಲು ಮುಂದಾದ ಆರೋಗ್ಯ ಇಲಾಖೆ

February 6, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.