ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ (Narendra Modi) ಯವರ ವಿರುದ್ಧ ಹತ್ತು-ಹಲವು ಆಧಾರ ರಹಿತ ಅಪಪ್ರಚಾರಗಳ (Election Result – Vijayendra Tweet) ನಡುವೆ
ಹಾಗೂ ಕರ್ನಾಟಕದಲ್ಲಿ ಮತ ಬ್ಯಾಂಕ್ ಆಧಾರಿತ ಯೋಜನೆಗಳ ಹೆಸರಿನಲ್ಲಿ ಮತದಾರರನ್ನು ದಿಕ್ಕು ತಪ್ಪಿಸುವ ಕುತಂತ್ರದ ನಡುವೆಯೂ ಸಾಧಿಸಿದ ಈ ಗೆಲುವನ್ನು ರಾಜಕಾರಣದ ನೈಜ ಧರ್ಮವನ್ನು .
ಎತ್ತಿಹಿಡಿದು ಘನತೆ ಮೆರೆದ ಮತದಾರರಿಗೇ ಸಮರ್ಪಿಸುತ್ತಿದ್ದೇವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ (B Y Vijayendra) ಹೇಳಿದ್ದಾರೆ.

ಲೋಕಸಭಾ ಚುಣಾವಣೆಯ #Loksabha Election ಫಲಿತಾಂಶದ ನಂತರ ಈ ಕುರಿತು ಟ್ವೀಟ್ ಮಾಡಿರುವ ಅವರು. ಕರುನಾಡಿನ ಹೆಮ್ಮೆಯ ಮತದಾರ ಬಂಧುಗಳಿಗೆ ಕೃತಜ್ಞತಾ ಪೂರ್ವಕ ಆತ್ಮೀಯ
ಅಭಿನಂದನೆಗಳು. ಸ್ವಾತಂತ್ರ್ಯಾ ನಂತರ ಭಾರತವನ್ನು ವಿಶ್ವದ ಮುಂಚೂಣಿಗೆ ತಂದು ನಿಲ್ಲಿಸಿ ಆರ್ಥಿಕ ಹಾಗೂ ಉತ್ಪನ್ನ ಕ್ಷೇತ್ರದಲ್ಲಿ ಹೆಗ್ಗಳಿಕೆಯ ಸಾಧನೆ ಮಾಡುವ ಮೂಲಕ ರಾಷ್ಟ್ರ ಸುರಕ್ಷತೆಗಾಗಿ
ಹತ್ತು-ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡು ಭಾರತೀಯರಲ್ಲಿ ಆತ್ಮವಿಶ್ವಾಸ ಹಾಗೂ ರಾಷ್ಟ್ರೀಯತೆಯ ಸ್ವಾಭಿಮಾನ ರೂಪಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಗಳನ್ನಿಟ್ಟ ಪ್ರಧಾನಿ ಶ್ರೀ ಮೋದಿಜೀ
ಅವರನ್ನು (Election Result – Vijayendra Tweet) ಮತ್ತೊಮ್ಮೆ ಪ್ರಧಾನಿಯನ್ನಾಗಿಸುವುದು
ಭಾರತೀಯ ಜನತಾ ಪಾರ್ಟಿಯ ಹಾಗೂ ಎನ್.ಡಿ.ಎ ಮೈತ್ರಿಕೂಟದ (NDA Alliance) ಮಹಾ ಸಂಕಲ್ಪವಾಗಿತ್ತು, ಅಂತೆಯೇ ಶತಕೋಟಿ ಭಾರತೀಯರ ಮನದಾಳದ ಅಪೇಕ್ಷೆಯಾಗಿತ್ತು, ಈ ನಿಟ್ಟಿನಲ್ಲಿ
ಕರ್ನಾಟಕದ ಮತದಾರರು ನಿರೀಕ್ಷೆ ಮೀರಿ ಸ್ಪಂದಿಸಿ 19 ಸ್ಥಾನಗಳಲ್ಲಿ ಎನ್.ಡಿ.ಎ ಅಭ್ಯರ್ಥಿಗಳನ್ನು ಗೆಲ್ಲಿಸಿ ಕೊಟ್ಟಿದ್ದೀರಿ ಇದಕ್ಕಾಗಿ ಅತ್ಯಂತ ಗೌರವಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.

ಇನ್ನುಳಿದ ಕ್ಷೇತ್ರಗಳಲ್ಲಿ ಗೆಲುವಿನ ದಡದ ಹತ್ತಿರದವರೆಗೂ ಕರೆತಂದು ಗಣನೀಯ ಪ್ರಮಾಣದಲ್ಲಿ ನಮ್ಮ ಎನ್.ಡಿ.ಎ ಅಭ್ಯರ್ಥಿಗಳನ್ನು ಬೆಂಬಲಿಸಿದ ಮತದಾರರಿಗೂ ಸಹ ಕೃತಜ್ಞತೆ ಸಲ್ಲಿಸುತ್ತೇನೆ.
ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಹತ್ತು-ಹಲವು ಆಧಾರ ರಹಿತ ಅಪಪ್ರಚಾರಗಳ ನಡುವೆ ಹಾಗೂ ಕರ್ನಾಟಕ (Karnataka) ದಲ್ಲಿ ಮತ ಬ್ಯಾಂಕ್ ಆಧಾರಿತ
ಯೋಜನೆಗಳ ಹೆಸರಿನಲ್ಲಿ ಮತದಾರರನ್ನು ದಿಕ್ಕು ತಪ್ಪಿಸುವ ಕುತಂತ್ರದ ನಡುವೆಯೂ ಸಾಧಿಸಿದ ಈ ಗೆಲುವನ್ನು ರಾಜಕಾರಣದ ನೈಜ ಧರ್ಮವನ್ನು ಎತ್ತಿಹಿಡಿದು ಘನತೆ ಮೆರೆದ ಮತದಾರರಿಗೇ ಸಮರ್ಪಿಸುತ್ತಿದ್ದೇವೆ.
ಈ ಫಲಿತಾಂಶ ವಿಕಸಿತ ಭಾರತವನ್ನು ಕಟ್ಟುವ ಸಂಕಲ್ಪದ ವಿನಮ್ರ ಮನವಿಯನ್ನು ಮತದಾರರು ಪುರಸ್ಕರಿಸಿದ ಗೆಲುವಾಗಿದೆ. ಬಿಜೆಪಿ-ಜೆಡಿಎಸ್ (BJP-JDS) ಕಾರ್ಯಕರ್ತರ ಹಾಗೂ ಮುಖಂಡರ
ಅಹರ್ನಿಶಿ ಹೋರಾಟ ಹಾಗೂ ಪರಿಶ್ರಮ ಫಲ ನೀಡಿದೆ, ಈ ನಿಟ್ಟಿನಲ್ಲಿ ಕಾರ್ಯಕರ್ತ ಬಂಧುಗಳು ಹಾಗೂ ಪ್ರಮುಖರನ್ನು ಹೃದಯ ತುಂಬಿ ಅಭಿನಂದಿಸುವೆ. ಭವಿಷ್ಯತ್ತಿನಲ್ಲಿ ನಾಡು ಹಾಗೂ ದೇಶವನ್ನು
ಕಟ್ಟುವ ನಿಟ್ಟಿನಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ಅವರ ನೇತೃತ್ವದ ಎನ್.ಡಿ.ಎ ಸರ್ಕಾರದ ಕಾರ್ಯಕ್ರಮಗಳನ್ನು ಪ್ರತಿಯೊಬ್ಬ ಪ್ರಜೆಗೂ ತಲುಪಿಸುವ ಕಾರ್ಯದಲ್ಲಿ ನಾವು ನೀವೆಲ್ಲರೂ ಜೊತೆಯಾಗಿ
ಕಾರ್ಯನಿರ್ವಹಿಸೋಣ ಎಂದು ಹೇಳಿದ್ದಾರೆ.
ಇದನ್ನು ಓದಿ: ಉತ್ತರಾಖಂಡದಲ್ಲಿ ಟ್ರೆಕ್ಕಿಂಗ್ಗೆ ತೆರಳಿದ್ದ ಕರ್ನಾಟಕದ 18 ಮಂದಿ ನಾಪತ್ತೆ!