• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ನೀಡಿದ್ದ ಗಡುವು ವಿಸ್ತರಣೆ : ರಾಜ್ಯದಾದ್ಯಂತ ಶಾಲಾ ವೇಳಾಪಟ್ಟಿಯಲ್ಲೂ ಬದಲಾವಣೆ

Shwetha Mohan by Shwetha Mohan
in ಪ್ರಮುಖ ಸುದ್ದಿ, ರಾಜ್ಯ
ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ನೀಡಿದ್ದ ಗಡುವು ವಿಸ್ತರಣೆ : ರಾಜ್ಯದಾದ್ಯಂತ ಶಾಲಾ ವೇಳಾಪಟ್ಟಿಯಲ್ಲೂ ಬದಲಾವಣೆ
0
SHARES
19
VIEWS
Share on FacebookShare on Twitter
  • ಬೆಂಗಳೂರಲ್ಲಿ ಅ. 24, ಬೇರೆ ಜಿಲ್ಲೆಗಳಲ್ಲಿ 12 ವರೆಗೆ ಸಮೀಕ್ಷೆ ಮುಂದುವರೆಸಲು ಸೂಚನೆ
  • ರಾಜ್ಯಾದ್ಯಂತ ಶಾಲಾ ಅವಧಿಯನ್ನು ಬದಲಾಯಿಸಿದ ಶಿಕ್ಷಣ ಇಲಾಖೆ
  • ಬೆಳಗ್ಗೆ ಪಾಠ ಮಾಡಿ, ಮಧ್ಯಾಹ್ನ ಗಣತಿಗೆ ಹೋಗಲು ಶಿಕ್ಷಕರಿಗೆ ಸೂಚನೆ

Bengaluru: ಕರ್ನಾಟಕದಲ್ಲಿ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಜಾತಿ ಗಣತಿ (Caste Census) ಕಾರ್ಯ ಮುಗಿಯದೇ ಇರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಸಮೀಕ್ಷೆ ಅವಧಿಯನ್ನು ವಿಸ್ತರಿಸಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಶಾಲೆಗಳ ಸಮಯದಲ್ಲೂ ಬದಲಾವಣೆ ತರಲಾಗಿದೆ. (Extension of census survey deadline)

ಸರ್ಕಾರದ ಆದೇಶ ಪ್ರಕಾರ, ರಾಜ್ಯದ ಬಹುತೇಕ ಭಾಗಗಳಲ್ಲಿ ಅಕ್ಟೋಬರ್ (October) 12ರವರೆಗೆ ಸಮೀಕ್ಷೆ ಮುಂದುವರಿಯಲಿದ್ದು, ಬೆಂಗಳೂರಿನಲ್ಲಿ ಮಾತ್ರ ಈ ಅವಧಿ ಅಕ್ಟೋಬರ್ 24ರವರೆಗೆ ವಿಸ್ತರಿಸಲಾಗಿದೆ.

ರಾಜ್ಯದಲ್ಲಿ ಜಾತಿ ಗಣತಿ ಕಾರ್ಯ ಮುಗಿಯದೇ ಇರುವ ಹಿನ್ನೆಲೆಯಲ್ಲಿ  ಸರ್ಕಾರವು ಸಮೀಕ್ಷೆ ಅವಧಿಯನ್ನು ವಿಸ್ತರಿಸಿದೆ.

ಸೆಪ್ಟೆಂಬರ್ (September) 22ರಂದು ರಾಜ್ಯದಾದ್ಯಂತ ಜಾತಿ ಗಣತಿ ಸಮೀಕ್ಷೆ ಪ್ರಾರಂಭವಾಗಿತ್ತು.

ಆರಂಭದಿಂದಲೇ ಶಿಕ್ಷಕರು ಗಣತೀದಾರರಾಗಿ ಭಾಗವಹಿಸುತ್ತಿರುವುದರಿಂದ, ಶಾಲಾ ವೇಳಾಪಟ್ಟಿಯು ಗಣನೀಯವಾಗಿ ಬದಲಾಗಿತ್ತು.

ಮೂಲತಃ ಅಕ್ಟೋಬರ್ 7ರೊಳಗೆ ಗಣತಿ ಪೂರ್ಣಗೊಳ್ಳಬೇಕಿತ್ತು. ಆದರೆ ಹಲವಾರು ಜಿಲ್ಲೆಗಳಲ್ಲಿ ಸಮೀಕ್ಷೆ ಕಾರ್ಯ ಮುಗಿಯದ ಹಿನ್ನೆಲೆ ಸರ್ಕಾರವು ಹೊಸ ಗಡುವು ಘೋಷಿಸಿದೆ.

ಇನ್ನು ಈ ಕುರಿತಾಗಿ ಮಾತನಾಡಿರುವ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತ ಸೂರಲ್ಕರ್ ವಿಕಾಶ್ ಕಿಶೋರ್ ಅವರು “ರಾಜ್ಯದ ಹಲವು ಪ್ರದೇಶಗಳಲ್ಲಿ ಸಮೀಕ್ಷೆ ಇನ್ನೂ ಪೂರ್ಣಗೊಂಡಿಲ್ಲ.

ಶಿಕ್ಷಕರು ಸಮೀಕ್ಷಾ ಕಾರ್ಯದಲ್ಲಿ ತೊಡಗಿರುವುದರಿಂದ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಳಿಕ ರಜೆ ನೀಡಲಾಗಿದೆ,” ಎಂದು ತಿಳಿಸಿದ್ದಾರೆ.

ಅಕ್ಟೋಬರ್ 8ರಿಂದ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಬೆಳಗಿನ ವೇಳೆಯಲ್ಲಿ ಬದಲಾವಣೆ ತರಲಾಗಿದೆ. (Extension of census survey deadline)

ಇದೀಗ ಶಾಲೆಗಳು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಿ ಮಧ್ಯಾಹ್ನ 1 ಗಂಟೆಗೆ ಮುಗಿಯಲಿವೆ. ಮಧ್ಯಾಹ್ನದ ಬಳಿಕ ವಿದ್ಯಾರ್ಥಿಗಳಿಗೆ ರಜೆ ನೀಡಲಾಗುತ್ತದೆ.

ಈ ಅವಧಿಯಲ್ಲಿ ಶಿಕ್ಷಕರು ತಮ್ಮ ಸಮೀಕ್ಷಾ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕಾಗಿದೆ.ಹೀಗಾಗಿ ರಾಜ್ಯದಾದ್ಯಂತ ಅಕ್ಟೋಬರ್ 12ರವರೆಗೆ ಮಧ್ಯಾಹ್ನದ ಬಳಿಕ ತರಗತಿಗಳು ಇರುವುದಿಲ್ಲ.

ಆದರೆ ಬೆಂಗಳೂರಿನಲ್ಲಿ ಈ ಬದಲಾವಣೆ ಅಕ್ಟೋಬರ್ 24ರವರೆಗೆ ಮುಂದುವರಿಯಲಿದೆ. ಗಣತಿಯನ್ನು ರಜಾದಿನಗಳಲ್ಲಿಯೂ ನಡೆಸುವಂತೆ ಸರ್ಕಾರ ಆದೇಶಿಸಿದೆ.

ಈ ಬಾರಿ ಜಾತಿ ಗಣತಿ ಕಾರ್ಯದಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸಿದ್ದಾರೆ.

ಪ್ರತಿ ಶಾಲಾ ಶಿಕ್ಷಕರಿಗೆ ನಿಗದಿತ ಪ್ರದೇಶವನ್ನು ನೀಡಲಾಗಿದ್ದು, ಅವರು ಮನೆಮನೆಗೆ ತೆರಳಿ ಸಮೀಕ್ಷಾ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.

ವಿದ್ಯಾರ್ಥಿಗಳ ಶಿಕ್ಷಣದ ಜೊತೆಗೆ ಈ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ.ಸರ್ಕಾರವು ಶಿಕ್ಷಕರಿಗೆ ವಿಶೇಷ ಮಾರ್ಗಸೂಚಿ ನೀಡಿದ್ದು, ಮಧ್ಯಾಹ್ನದ ಬಳಿಕದ ಸಮಯವನ್ನು ಸಂಪೂರ್ಣವಾಗಿ ಗಣತಿ ಕಾರ್ಯಕ್ಕೆ ಮೀಸಲಿಡಬೇಕೆಂದು ಸೂಚಿಸಿದೆ.

ಶಾಲೆಗಳ ವಾರಾಂತ್ಯ ರಜೆ ದಿನಗಳಲ್ಲಿಯೂ ಗಣತಿ ಮುಂದುವರಿಯಲಿದೆ.

ಇನ್ನು ಇದರಿಂದಾಗಿ ಶಾಲಾ ಸಮಯ ಬದಲಾವಣೆಯಿಂದ ವಿದ್ಯಾರ್ಥಿಗಳು ಬೆಳಿಗ್ಗೆಯೇ ಶಾಲೆಗೆ ತೆರಳಬೇಕಾದ ಪರಿಸ್ಥಿತಿ ಉಂಟಾಗಿದೆ. ಪೋಷಕರು ಮಕ್ಕಳ ವೇಳಾಪಟ್ಟಿಯಲ್ಲಿ ಬದಲಾವಣೆ ತರಬೇಕಾಗಿದೆ.

ಮಧ್ಯಾಹ್ನದ ಬಳಿಕ ವಿದ್ಯಾರ್ಥಿಗಳಿಗೆ ವಿಶ್ರಾಂತಿ ಸಮಯ ದೊರೆಯುತ್ತಿದ್ದರೂ, ಶಿಕ್ಷಕರಿಗೆ ದಿನದ ದ್ವಿತೀಯಾರ್ಧದಲ್ಲಿ ಹೆಚ್ಚುವರಿ ಕೆಲಸದ ಒತ್ತಡ ಹೆಚ್ಚಾಗಿದೆ.

Tags: bengaluruCasteCENSUSKarnatakaSurvey

Related News

ದೆಹಲಿಯಲ್ಲಿ ಭುಗಿಲೆದ್ದ ನೀಟ್ ಪ್ರತಿಭಟನೆ: ಲಾಠಿ ಚಾರ್ಜ್‌, ಅಶ್ರುವಾಯು ಪ್ರಯೋಗ, ಮೆಟ್ರೋ ಮತ್ತು ಇಂಟರ್‌ನೆಟ್ ಸೇವೆ ಸ್ಥಗಿತ
ದೇಶ-ವಿದೇಶ

ದೆಹಲಿಯಲ್ಲಿ ಭುಗಿಲೆದ್ದ ನೀಟ್ ಪ್ರತಿಭಟನೆ: ಲಾಠಿ ಚಾರ್ಜ್‌, ಅಶ್ರುವಾಯು ಪ್ರಯೋಗ, ಮೆಟ್ರೋ ಮತ್ತು ಇಂಟರ್‌ನೆಟ್ ಸೇವೆ ಸ್ಥಗಿತ

July 20, 2026
18 ಸಾವಿರ ಪೌರ ಕಾರ್ಮಿಕರಿಗೆ ಅಧ್ಯಯನ ಪ್ರವಾಸ: ಸ್ವಚ್ಛತಾ ನಿರ್ವಹಣೆಯ ಹೊಸ ಮಾದರಿಗಳ ಅರಿವಿಗೆ ಬಿಬಿಎಂಪಿ ಮಹತ್ವದ ಹೆಜ್ಜೆ
ಪ್ರಮುಖ ಸುದ್ದಿ

18 ಸಾವಿರ ಪೌರ ಕಾರ್ಮಿಕರಿಗೆ ಅಧ್ಯಯನ ಪ್ರವಾಸ: ಸ್ವಚ್ಛತಾ ನಿರ್ವಹಣೆಯ ಹೊಸ ಮಾದರಿಗಳ ಅರಿವಿಗೆ ಬಿಬಿಎಂಪಿ ಮಹತ್ವದ ಹೆಜ್ಜೆ

July 20, 2026
ಆಂಧ್ರಪ್ರದೇಶದಲ್ಲಿ ಓಮಿಕ್ರಾನ್ RF.5 ರೂಪಾಂತರ ಪತ್ತೆ: ಆತಂಕ ಬೇಡ, ಎಚ್ಚರಿಕೆ ಮಾತ್ರ ಅಗತ್ಯ ಎಂದ ಆರೋಗ್ಯ ಇಲಾಖೆ
ದೇಶ-ವಿದೇಶ

ಆಂಧ್ರಪ್ರದೇಶದಲ್ಲಿ ಓಮಿಕ್ರಾನ್ RF.5 ರೂಪಾಂತರ ಪತ್ತೆ: ಆತಂಕ ಬೇಡ, ಎಚ್ಚರಿಕೆ ಮಾತ್ರ ಅಗತ್ಯ ಎಂದ ಆರೋಗ್ಯ ಇಲಾಖೆ

July 20, 2026
ಫಿಫಾ ವಿಶ್ವಕಪ್ 2026: ₹6,322 ಕೋಟಿ ಬಹುಮಾನ ಹಂಚಿಕೆ, ಸ್ಪೇನ್‌ಗೆ ವಿಶ್ವಕಪ್ ಕಿರೀಟ
Sports

ಫಿಫಾ ವಿಶ್ವಕಪ್ 2026: ₹6,322 ಕೋಟಿ ಬಹುಮಾನ ಹಂಚಿಕೆ, ಸ್ಪೇನ್‌ಗೆ ವಿಶ್ವಕಪ್ ಕಿರೀಟ

July 20, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.