Chikmagalur : ಬೆಳಗಾವಿಯಲ್ಲಿ (Belgaum) ನಡೆಯುತ್ತಿದ್ದ ವಿಧಾನಸಭೆ ಚಳಿಗಾಲದ ಅಧಿವೇಶನದ (Assembly winter session) ಕೊನೆಯ ದಿನದ ಕಲಾಪದಲ್ಲಿ ಭಾರೀ ಹೈಡ್ರಾಮ (Hydrama) ನಿರ್ಮಾಣವಾಗಿತ್ತು . ಗುರುವಾರ ಪರಿಷತ್ನಲ್ಲಿ ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ನೀಡಿದ್ದ ಹೇಳಿಕೆಯ ಚರ್ಚೆಯ ಸಂದರ್ಭದಲ್ಲಿ ಕಲಹ ಸೃಷ್ಟಿಯಾಗಿತ್ತು . ಈ ಸಂಧರ್ಭದಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ತಮ್ಮ ವಿರುದ್ಧ ಅಸಂವಿಧಾನಿಕ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಈ ಕುರಿತು ಸಿ.ಟಿ ರವಿ (C T Ravi) ಅವರನ್ನ ಪೊಲೀಸ್ ಬಂಧನ ಮಾಡಿದ್ದರು

ಸಿ.ಟಿ ರವಿ (C T Ravi) ಬಂಧನ ವಿರೊಧಿಸಿ ಚಿಕ್ಕಮಗಳೂರು ಬಂದ್ಗೆ (Chikkamagaluru Bandh) ಕರೆ ಕೊಡಲಾಗಿತ್ತು ಮತ್ತು ಬಿಜೆಪಿ ಕಾರ್ಯಕರ್ತರು ಸಿ.ಟಿ ರವಿ (CT Ravi) ಅವರ ಮನೆಯಿಂದ ಪ್ರತಿಭಟನೆ ನಡೆಸಿದ್ದರು . ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು (Police the protesters) ತಡೆದಿದ್ದರು. ಆಗ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿತ್ತು .
ಬಂಧನ ಖಂಡಿಸಿ ಬಿಜೆಪಿ (BJP) ಕಾರ್ಯಕರ್ತರು ಒತ್ತಾಯವಾಗಿ ಅಂಗಡಿಗಳನ್ನ ಮುಚ್ಚಿಸಿದ್ದು (Shops are closed) ,ಹೆದ್ದಾರಿ ತಡೆ, (Highway block) ಬೈಕ್ ಟೈರ್ ಸುಟ್ಟಿದ್ದು, (The bike tire is burnt) ಸಾರ್ವಜನಿಕರ ಶಾಂತಿಗೆ ಧಕ್ಕೆ ತಂದಿರುವುದು ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ ಎಂದು ಪ್ರತಿಭಟನೆ ನಡೆಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಸೇರಿ 100 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ವಿರುದ್ಧ ಪೊಲೀಸರು ಸೊಮೋಟೋ ಕೇಸ್ ನಡಿ FIR ದಾಖಲಿಸಿಕೊಂಡಿದ್ದಾರೆ.