- ಆರ್ಸಿಬಿ ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸಲೆ ಅರೆಸ್ಟ್ (Four arrested RCB marketing head)
- ಪೊಲೀಸರ ಅನುಮತಿ ಪಡೆಯದೇ ಪೋಸ್ಟ್ ಹಾಕಿದ್ದ ನಿಖಿಲ್
- ಬೆಂಗಳೂರಲ್ಲಿ ವಿಕ್ಟರಿ ಪರೇಡ್ ಅಂತ ಪೋಸ್ಟ್ ಹಾಕಿದ್ದ ನಿಖಿಲ್
Bengaluru: ಆರ್ಸಿಬಿ ಐಪಿಲ್ ವಿಜಯೋತ್ಸವದ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ (Chinnaswamy Stadium, Bengaluru) ಬಳಿ ಸಂಭವಿಸಿದ ಕಾಲ್ತುಳಿತ (Chinnaswamy stampede) ಸಂಬಂಧ
ಆರ್ಸಿಬಿ ಮಾರ್ಕೆಟಿಂಗ್ ಮುಖಸ್ಥ ನಿಖಿಲ್ ಸೋಸಲೆ (Chief Nikhil Sosale) ಸೇರಿದಂತೆ ನಾಲ್ವರು ಕಾರ್ಯಕ್ರಮ ಆಯೋಜಕರನ್ನು ಸಿಸಿಬಿ ಪೊಲೀಸರು ಹಾಗೂ ಕಬ್ಬನ್ ಪಾರ್ಕ್ ಠಾಣೆ (Cubbon Park Station)
ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತರನ್ನು ತೀವ್ರತರದ ವಿಚಾರಣೆಗೆ ಒಳಪಡಿಸಲಾಗಿದೆ.
ಖುದ್ದು ಸಿಸಿಬಿ ಡಿಸಿಪಿ ಅಕ್ಷಯ್ ಎಂ. ನೇತೃತ್ವದಲ್ಲಿ (CCB DCP Akshay M.) ಇದೀಗ ಕಬ್ಬನ್ ಪಾರ್ಕ್ ಠಾಣೆಯಲ್ಲಿ ನಾಲ್ವರ ವಿಚಾರಣೆ ನಡೆಸಲಿದ್ದಾರೆ.
ಶುಕ್ರವಾರ ಬೆಳಗ್ಗೆ ಕಬ್ಬನ್ ಪಾರ್ಕ್ ಪೊಲೀಸರು ಮತ್ತು ಸಿಸಿಬಿ ಜಂಟಿ (CCB joint) ಕಾರ್ಯಾಚರಣೆಯಲ್ಲಿ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದದಲ್ಲಿ ಆರ್ ಸಿ ಬಿ ಸಿಬ್ಬಂದಿಯನ್ನು(RCB staff)
ಬಂಧನ ಮಾಡಲಾಗಿದೆ. ಇದರಲ್ಲಿ ಮೂವರು ಆಯೋಜಕರು (Three organizers) ಒಳಗೊಂಡಿದ್ದಾರೆ.
ನಿಖಿಲ್ ಸೋಸಲೆ – ಆರ್ ಸಿ ಬಿ (RCB) ಮಾರ್ಕೆಂಟಿಂಗ್ ಮುಖ್ಯಸ್ಥ
ಸುನೀಲ್ ಮ್ಯಾಥ್ಯೂ – ಡಿಎನ್ಎ ಮ್ಯಾನೇಜ್ಮೆಂಟ್ (DNA Management) ಸಿಬ್ಬಂದಿ
ಕಿರಣ್ – ಡಿಎನ್ಎ (Kiran – DNA) ಮ್ಯಾನೇಜ್ಮೆಂಟ್ ಸಿಬ್ಬಂದಿ
ಸುಮಂತ್ – ಡಿಎನ್ಎ (Sumanth – DNA) ಮ್ಯಾನೇಜ್ಮೆಂಟ್ ಸಿಬ್ಬಂದಿ
ಈ ನಾಲ್ವರನ್ನು ವಿಮಾನ ನಿಲ್ದಾಣದಲ್ಲಿ ಬಂಧನ (Arrest at airport) ಮಾಡಲಾಗಿದೆ.

ಸದ್ಯ ಇವರನ್ನು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಕರೆತರಲಾಗಿದೆ. ದೊಡ್ಡ ಪ್ರಮಾಣದಲ್ಲಿ (Large scale) ಜನರು ಸೇರಲು ಕಾರಣವಾಗಿರುವ ಸೋಷಿಯಲ್ ಮಿಡಿಯಾ (Social Media) ಪೋಸ್ಟ್ ಬಗ್ಗೆ ವಿಚಾರಣೆ ನಡೆಸಲಿದ್ದಾರೆ.
ಆರ್ ಸಿ ಬಿ ತಂಡ ಗೆದ್ದ (RCB team won) ಹಿನ್ನೆಲೆಯಲ್ಲಿ ವಿಜಯೋತ್ಸವ ಆಚರಿಸುವ ಕುರಿತಾಗಿ ಆರ್ ಸಿ ಬಿ ಅಧಿಕೃತ ಪೇಜ್ (Official page) ನಲ್ಲಿ ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣದ ವರೆಗೂ ವಿಕ್ಟರಿ ಪರೇಡ್ (Victory Parade) ಎಂದು ಪೋಸ್ಟ್ ಮಾಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ವಿಧಾನಸೌಧ ಮತ್ತು ಚಿನ್ನಸ್ವಾಮಿ (Vidhana Soudha and Chinnaswamy) ಸ್ಟೇಡಿಯಂನಲ್ಲಿ ಜಮಾಯಿಸಿದ್ದರು.
ಅಷ್ಟೇ ಅಲ್ಲದೆ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಜಯೋತ್ಸವಕ್ಕೆ (Victory) ಉಚಿತವಾಗಿ ಟಿಕೆಟ್ ನೀಡಲಾಗುವುದು ಎಂದು ಘೋಷಿಸಿದ್ದರು.
ಇವೆಲ್ಲವೂ ಹೆಚ್ಚಿನ ಸಂಖ್ಯೆಯಲ್ಲಿ ಜನರು (People in numbers) ಸೇರಲು ಕಾರಣವಾಗಿದೆ ಎಂಬ ಆರೋಪ ಇದೆ.
ಇನ್ನು ಕಬ್ಬನ್ ಪಾರ್ಕ್ ಪೊಲೀಸರು (Cubbon Park Police) ಕೆ ಎಸ್ ಸಿ ಎ ಅಧಿಕಾರಿಗಳ ಮನೆಗೂ ದಾಳಿ ನಡೆಸಿದ್ದಾರೆ.
ಗುರುವಾರ ರಾತ್ರಿಯೇ ಕೆಎಸ್ಸಿಎ ಕಾರ್ಯದರ್ಶಿ( KSCA Secretary) ಶಂಕರ್ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಅಲ್ಲದೆ, ಸಂಸ್ಥೆಯ ಖಜಾಂಜಿ ಜಯರಾಮ್ (Treasurer Jayaram) ಮನೆಯ ಮೇಲೂ ದಾಳಿ ನಡೆಸಿ ಪರಿಶೀಲನೆ ಕೈಗೊಳ್ಳಲಾಗಿದೆ.
ಇದನ್ನು ಓದಿ : ಪುತ್ತೂರಿನ ಬಿಜೆಪಿ ಮುಖಂಡ ಅರುಣ್ ಪುತ್ತಿಲಗೆ ಗಡಿಪಾರು ನೋಟಿಸ್ ಜಾರಿ
ಇನ್ನು ಘಟನೆಗೆ ಸಂಬಂಧಿಸಿದಂತೆ ಬಿಎನ್ಎಸ್ ಸೆಕ್ಷನ್ (BNS Section) 115, 118, 121 ಹಾಗೂ 190 ಅಡಿಯಲ್ಲಿ (Four arrested RCB marketing head) ಪ್ರಕರಣ ದಾಖಲು ಮಾಡಲಾಗಿದೆ. ಪ್ರಕರಣದಲ್ಲಿ ಆರ್ ಸಿ ಬಿ (RCB) ಮತ್ತು ಇತರರು ಎಂದು ಉಲ್ಲೇಖ ಮಾಡಲಾಗಿದೆ.