ಬೆಂಗಳೂರು, ಏ. 27: ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರದ ಅನ್ವಯ ಇಂದು ರಾತ್ರಿ 09 ಗಂಟೆಯಿಂದ 14 ದಿನಗಳ ಕಾಲ ಅಂದರೆ ಮೇ. 12ರ ಬೆಳಿಗ್ಗೆ ಕರ್ನಾಟಕ ಸಂಪೂರ್ಣ ಲಾಕ್ಡೌನ್ ಆಗಲಿದೆ ಎಂದು ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ನಿನ್ನೆಯ ಸುದ್ದಿಗೋಷ್ಠಿಯಲ್ಲಿ ಘೊಷಿಸಿದ್ದಾರೆ.
ಈ ಹಿನ್ನಲೆಯಲ್ಲಿ ಇಂದು ರಾತ್ರಿಯಿಂದ ಏನಿರುತ್ತೇ? ಏನಿರಲ್ಲ? ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಏನೇನಿದೆ?
- ತುರ್ತು ಅಗತ್ಯಗಳಾದ ಆಹಾರಧಾನ್ಯ, ಹಣ್ಣು ಹಾಲು, ಮಾಂಸ, ಮೀನು ಮಳಿಗೆಗಳು ಪ್ರತಿದಿನ ಬೆಳೆಗ್ಗೆ 6 ರಿಂದ 10 ಗಂಟೆಯವರೆಗೆ ತೆರೆದಿರುತ್ತವೆ.
- ವಿಮಾನ ಹಾಘೂ ರೈಲ್ವೇ ಸೇವೆ ಇರುತ್ತದೆ. ಇವುಗಳ ಟಿಕೆಟ್ ಇದ್ದರೆ ಟ್ಯಾಕ್ಸಿ, ಕ್ಯಾಬ್, ಆಟೋದಲ್ಲಿ ನಿಲ್ದಾಣಕ್ಕೆ ತೆರಳಬಹುದು.
- ಆನ್ಲೈನ್ ಕ್ಲಾಸ್ ಹಾಗೂ ನಿಗದಿತ ಪರೀಕ್ಷೆಗಳಿಗೆ ಅಡ್ಡಿಯಿಲ್ಲ
- ಹೊಟೆಲ್ ರೆಸ್ಟೊರೆಂಟ್, ಮದ್ಯದಂಗಡಿಗಳಲ್ಲಿ ಪಾರ್ಸೆಲ್ ಮಾತ್ರ ಲಭ್ಯ
- ಸರ್ಕಾರಿ ಕಚೇರಿಗಳಲ್ಲಿ ಜಶೇ. 50ಸಿಬ್ಬಂದಿಗೆ ಅವಕಾಶ
- ಆಸ್ಪತ್ರೆ , ಕ್ಲಿನಿಕ್, ಲ್ಯಾಬ್, ರಕ್ತನಿಧಿ ಮೆಡಿಕಲ್ ಶಾಪ್ ತೆರೆದಿರುತ್ತದೆ.
- ಕೃಷಿ ಕೃಷಿ ಸಂಬಂಧಿತ ವ್ಯಾಪಾರ ನರೇಗಾ ಚಟುವಟಿಕೆಗಳಿಗೆ ಅವಕಾಶ
- ಸರಕು ಸಾಗಣೆಗೆ ಅವಕಾಶ. ಹೋಮ್ ಡೆಲಿವರಿ 24 ಗಂಟೆಯೂ ಲಭ್ಯ
- ಬ್ಯಾಂಕ್, ವಿಮೆ, ಎಟಿಎಂ ತೆರೆದಿರುತ್ತದೆ
- ಗಾರ್ಮೆಂಟ್ಸ್ ಹೊರತುಪಡಿಸಿ ಎಲ್ಲಾ ಕೈಗಾರಿಕಾ ಉತ್ಪಾದನಾ ಘಟಕಗಳಿಗೆ ಅವಕಾಶ
- ಅಸ್ವಸ್ಥರು ಹಾಗೂ ಅವರ ಪೋಷಕರಿಗೆ ಸಂಚರಿಸಲು ಅವಕಾಶ
- ಎಲ್ಲಾ ನಿರ್ಮಾಣ ಕಾಮಗಾರಿ, ದುರಸ್ತಿ ಕಾಮಗಾರಿ ಅವಕಾಶ
ಏನಿರಲ್ಲ?
- ಸಾರ್ವಜನಿಕ – ಕಾಸಗಿ ಪ್ರಯಾಣಿಕ ವಾನಗಳಿಲ್ಲ
- ಟ್ಯಾಕ್ಸಿ, ಕ್ಯಾಬ್, ಆಟೋ ಸೇವೆ ಇರುವುದಿಲ್ಲ (ತುರ್ತು ಮತ್ತು ಅನುಮತಿಸಿದ ಸೇವೆಗೆ ಲಭ್ಯವಿರುತ್ತದೆ)
- ಬೆಂಗಳೂರು ನಗರದಲ್ಲಿ ಮೆಟ್ರೋ ರೈಲು, ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ ಇರುವುದಿಲ್ಲ.
- ಶಾಲೆ, ಕಾಲೇಜು ಕೋಚಿಂಗ್ ಕ್ಲಾಸ್ ಇರುವುದಿಲ್ಲ
- ಸಿನೆಮಾ ಥಿಯೇಟರ್, ಶಾಪಿಂಗ್ ಮಾಲ್, ಜಿಮ್, ಕ್ರೀಡಾ ಮೈದಾನ, ಈಜುಕೊಳ, ಕ್ಲಬ್ ರಂಗಮಂದಿರ, ಸಭಾಂಗಣ ಬಂದ್
- ಅಂತರಾಜ್ಯ ಹಾಗೂ ಅಂತರ್ ಜಿಲ್ಲಾ ಪ್ರಯಾಣಿಕ ವಾಹನ ಸಂಚಾರ ಇಲ್ಲ
- ಸಾಮಾಜಿಕ, ರಾಜಕೀಯ, ಮನರಂಜನಾ, ಧಾರ್ಮಿಕ, ಸಾಂಸ್ಖೃತಿಕ ಸಮಾರಮಭ ರದ್ದು
- ಧಾರ್ಮಿಕ ಕೇಂದ್ರಗಳ್ಲಲಿ ಭಕ್ತರಿಗೆ ಅವಕಾಶವಿರುವುದಿಲ್ಲ. ನಿತ್ಯ ಪೂಜೆಗೆ ಮಾತ್ರ ಅವಕಾಶ.
- ಜ್ಯುವೆಲ್ಲರ್ಸ್, ಬಟ್ಟೆ ಅಂಗಡಿ, ಎಲೆಕ್ಟ್ರಿಕಲ್ಸ್, ಗೃಹೋಪಯೋಗಿ, ವಸ್ತುಗಳ ಮಳಿಗೆ
- ಮದುವೆಗೆ 50ಮಂದಿಗೆ, ಅಂತ್ಯಕ್ರಿಯೆಗೆ 5 ಮಂದಿಗೆ ಮಾತ್ರ ಅವಕಾಶ
- ಮಾನ್ಯತೆ ಪಡೆದ ಗುರುತಿನ ಚೀಟಿ ಇfಲಲದಿದ್ದರೆ ಸಂಚಾರಕ್ಕೆ ಅವಕಾಶ ಇಲ್ಲ
- ತುರ್ತು ಅಗತ್ಯವಿಲ್ಲದ ಐಟಿ ಸಿಬ್ಬಂದಿಗೆ ಕಚೇರಿಯಲ್ಲಿ ಕೆಲಸಕ್ಕೆ ಅವಕಾಶವಿಲ್ಲ