ಪಣಜಿ : ಗೋವಾದಲ್ಲಿ ಕನ್ನಡ ಭವನ ಸ್ಥಾಪಿಸಬೇಕೆಂದು(Goa cm request kannadigas) ಅನೇಕ ದಶಕಗಳಿಂದ ಕನ್ನಡಿಗರು ಆಗ್ರಹಿಸುತ್ತಿದ್ದಾರೆ. ಆದರೆ ನಮ್ಮ ಸರ್ಕಾರದ ಬಳಿ ಭೂಮಿಯ ಕೊರತೆ ಇದೆ.
ಹೀಗಾಗಿ ಕನ್ನಡಿಗರೆಲ್ಲ ಒಂದಾಗಿ, ಗೋವಾದಲ್ಲಿ ಭೂಮಿ ಖರೀದಿಸಿ ಕನ್ನಡ ಭವನ(Goa cm request kannadigas) ನಿರ್ಮಿಸಿಕೊಳ್ಳಬೇಕೆಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕನ್ನಡಿಗರಿಗೆ ಮನವಿ ಮಾಡಿದ್ದಾರೆ.
ಕರಾವಳಿ ರಾಜ್ಯವಾದ ಗೋವಾದಲ್ಲಿ ಕನ್ನಡ ಭವನವನ್ನು ಸ್ಥಾಪಿಸಲು ಸುಮಾರು ಒಂದರಿಂದ ಎರಡು ಎಕರೆ ಭೂಮಿಯನ್ನು ಕೋರಿ ಕರ್ನಾಟಕ ಸರ್ಕಾರವು ಪ್ರಮೋದ್ ಸಾವಂತ್ ಅವರಿಗೆ ಪತ್ರ ಬರೆದಿತ್ತು.

ಈ ವೇಳೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಗೋವಾದಲ್ಲಿ ಕನ್ನಡ ಭವನ ಮತ್ತು ವಸತಿ ಸೌಕರ್ಯಗಳನ್ನು ನಿರ್ಮಿಸಲು ತಮ್ಮ ಸರ್ಕಾರಕ್ಕೆ ಭೂಮಿಗಾಗಿ ಮನವಿ ಮಾಡುವ ಬದಲು ಸ್ವಂತವಾಗಿ ಭೂಮಿ ಖರೀದಿಸುವಂತೆ ಕನ್ನಡಿಗರನ್ನು ಒತ್ತಾಯಿಸಿದ್ದಾರೆ.
ಉತ್ತರ ಗೋವಾದ ಬಿಚೋಲಿಮ್ನಲ್ಲಿ ಭಾನುವಾರ ಅಖಿಲ ಗೋವಾ ಕನ್ನಡ ಸಂಘ ಆಯೋಜಿಸಿದ್ದ 7ನೇ ಸಾಂಸ್ಕೃತಿಕ ಸಮ್ಮೇಳನದಲ್ಲಿ ಮಾತನಾಡಿದ ಪ್ರಮೋದ್ ಸಾವಂತ್ ಅವರು, ನಿಮ್ಮ ಸಿಎಂ ಬಸವರಾಜ ಬೊಮ್ಮಾಯಿ ಅವರು ಗೋವಾದಲ್ಲಿನ ನಿಮ್ಮ (ಕನ್ನಡಿಗರ) ಸಮಸ್ಯೆಗಳ ಬಗ್ಗೆ ನನ್ನೊಂದಿಗೆ ಮಾತನಾಡುತ್ತಾರೆ.
https://vijayatimes.com/modi-in-g20-summit/

ಅವರು ತಮ್ಮ ಬೇಡಿಕೆಯನ್ನು (ಕನ್ನಡ ಭವನ) ಪುನರುಚ್ಚರಿಸುತ್ತಾರೆ, ಆದರೆ ನಮ್ಮ ಸರ್ಕಾರದ ಬಳಿ ಜಮೀನಿನ ಕೊರತೆಯಿದೆ, ಆದರೆ ನಿಮ್ಮಲ್ಲಿರುವ ಭೂಮಿಯಲ್ಲಿ ನೀವು ಭವನವನ್ನು ನಿರ್ಮಿಸಬಹುದು ಎಂದು ಗೋವಾ ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಹೇಳಿದರು.
ಈ ಹಿಂದೆಯೂ ಕರ್ನಾಟಕ ಸರ್ಕಾರವು ಕರಾವಳಿ ರಾಜ್ಯವಾದ ಗೋವಾದಲ್ಲಿ ಕನ್ನಡ ಭವನವನ್ನು ನಿರ್ಮಿಸಲು ಜಮೀನು ನೀಡುವಂತೆ ಕೋರಿ ಪ್ರಮೋದ್ ಸಾವಂತ್ ಅವರಿಗೆ ಪತ್ರ ಬರೆದಿತ್ತು.
ಗೋವಾದಲ್ಲಿ ನೆಲೆಸಿರುವ ಕನ್ನಡಿಗರು ಸುಮಾರು ನಾಲ್ಕು ದಶಕಗಳಿಂದ ಭವನ ಬೇಕೆಂದು ಆಗ್ರಹಿಸುತ್ತಿದ್ದಾರೆ. ಕಳೆದ ರಾಜ್ಯ ಬಜೆಟ್ನಲ್ಲಿ ಕರ್ನಾಟಕ ಮುಖ್ಯಮಂತ್ರಿಗಳು ಗೋವಾದಲ್ಲಿ ಭವನ ಸ್ಥಾಪಿಸಲು 10 ಕೋಟಿ ಮೀಸಲಿಟ್ಟಿದ್ದರು ಎಂಬುದು ಗಮನಾರ್ಹ.
-ಮಹೇಶ್.ಪಿ.ಎಚ್