• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ವೀಡಿಯೊ ಸಿಟಿಜನ್ ಜರ್ನಲಿಸ್ಟ್

ನೆಲ ಕಚ್ಚುತ್ತಿದೆ ನರೇಗಾ ! ನಾಲಾಯಕ್‌ ಕಾಮಗಾರಿ ಮಾಡಿ ಚಿಕ್ಕಬಳ್ಳಾಪುರದ ಹೊಸಪೇಟೆಯಲ್ಲಿ ಭರ್ಜರಿ ಲೂಟಿ !

Sharadhi by Sharadhi
in ಸಿಟಿಜನ್ ಜರ್ನಲಿಸ್ಟ್
Featured Video Play Icon
0
SHARES
0
VIEWS
Share on FacebookShare on Twitter

ಇದು ನರೇಗಾ ಯೋಜನೆಯಡಿ ಲಕ್ಷಾಂತರ ರೂಪಾಯಿ ಖರ್ಚುಮಾಡಿ ನಿರ್ಮಿಸುತ್ತಿರೋ ಚರಂಡಿ. ಆದ್ರೆ ಈ ಕಾಮಗಾರಿಯ ಗುಣಮಟ್ಟ ನೋಡಿದ್ರೆ, ಮಾಡಿದ ಗುತ್ತಿದಾರ ಹಾಗೂ ಇದರ ಮೇಲ್ವಚಾರಣೆ ಹೊತ್ತಿರುವ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ನಡು ರಸ್ತೆಯಲ್ಲಿ ನಿಲ್ಲಿಸಿ ಸನ್ಮಾನ ಮಾಡಬೇಕು ಅನ್ನಿಸುತ್ತೆ. ಅಷ್ಟೊಂದು ಕಳಪೆ ಗುಣಮಟ್ಟದ ಕಾಮಗಾರಿ ಮಾಡಿದ್ದಾರೆ.

ಚರಂಡಿ ಕಾಮಗಾರಿ ನಡೆದ ಮೂರೇ ದಿನಕ್ಕೆ ಗೋಡೆಗಳೆಲ್ಲಾ ಕುಸಿದು ಬಿದ್ದಿವೆ. ಈ ಕಾಮಗಾರಿಗೆ ಸಿಮೆಂಟ್‌ ಸರಿಯಾಗಿ ಬಳಕೆ ಮಾಡದೇ ಇದ್ದಿದ್ದರಿಂದ ಗೋಡೆ ಎಲ್ಲಾ ಬಿರುಕು ಬಿದ್ದಿದೆ. ಒಂದು ಮಳೆಗೆ ಈ ಚರಂಡಿ ಗೋಡೆ ನೆಲಸಮ ಆಗೋದ್ರಲ್ಲಿ ಅನುಮಾನವೇ ಇಲ್ಲ.

ಇನ್ನು ಇಲ್ಲಿ ನರೇಗಾ ಯೋಜನೆಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಸ್ಥಳೀಯ ಜನರಿಂದಲೇ ಕೆಲಸ ಮಾಡಿಸಬೇಕು. ಆದ್ರೆ ಇಲ್ಲಿ ಜನ ಬಿಡಿ ಎಲ್ಲಾ ಕೆಲಸ ಜೆಸಿಬಿಯಿಂದಲೇ ನಡೆಸಲಾಗುತ್ತಿದೆ.

ಇನ್ನು ಎರಡು ಅಡಿ ಅಗಲ ಇರಬೇಕಾದ ಗೋಡೆಯನ್ನು ಬರೀ ಮುಕ್ಕಾಲು ಅಡಿ ಮಾಡಿ ಭರ್ಜರಿ ಲೂಟಿ ಹೊಡೆದಿದ್ದಾರೆ. ಸಿಮೆಂಟು ಹಾಕಲೇ ಇಲ್ಲ. ಕಣ್ಕಟ್ಟಿಗೆ ಕೆಲಸ ಮಾಡಿ ಮುಲಾಜಿಲ್ಲದೆ ಹಣ ಲೂಟಿ ಮಾಡ್ತಿದ್ದಾರೆ ಭ್ರಷ್ಟ ಅಧಿಕಾರಿಗಳು.

ನರೇಗಾ ಕಾಮಗಾರಿಯಲ್ಲಿ ಭಾರೀ ಮೋಸ, ಕಮಿಷನ್‌ ದಂಧೆ, ಭ್ರಷ್ಟ ಅಧಿಕಾರಿಗಳು ಎಗ್ಗಿಲ್ಲದೆ ಹಗರಣ ನಡೆಸುತ್ತಿದ್ದಾರೆ ಅನ್ನೋ ಆರೋಪ ರಾಜ್ಯಾದ್ಯಂತ ಕೇಳಿ ಬರುತ್ತಿದೆ. ಆದ್ರೆ ಕಳಪೆ ಕಾಮಗಾರಿ ಹಾಗೂ ಅಧಿಕಾರಿಗಳ ಮೋಸದಾಟಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಹೊಸಪೇಟೆ ಗ್ರಾಮಪಂಚಾಯತಿಯ ಹಿರೇಬಲ್ಲ ಗ್ರಾಮದಲ್ಲಿ ಪಕ್ಕಾ ಸಾಕ್ಷಿ ವಿಜಯಟೈಮ್ಸ್‌ಗೆ ಸಿಕ್ಕಿದೆ.

ಆರೋಗ್ಯ ಸಚಿವ ಡಾ.ಸುಧಾಕರ್‌ ಅವರ ಜಿಲ್ಲೆಯಲ್ಲಿ ಅವ್ಯಾಹತವಾಗಿ ನರೇಗ ಹಗರಣ ನಡೀತಿದೆ ಅನ್ನೋ ದೂರು ಇದೆ. ಇದಕ್ಕೆ ಪಕ್ಕಾ ದಾಖಲೆ ಹೊಸಪೇಟೆ ಗ್ರಾಮಪಂಚಾಯತ್‌ನಲ್ಲಿ ಸಿಕ್ಕಿದೆ.

ಅತ್ಯಂತ ಕಳಪೆ ಕಾಮಗಾರಿ, ಗುತ್ತಿಗೆದಾರನ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕರು ಈಗಾಗಲೇ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ದೂರು ಕೊಟ್ರೂ ಅವರು ದೂರುದಾರರನ್ನು ದೂರ ಇಟ್ಟು ಕಾಮಗಾರಿಯ ವೀಕ್ಷಣೆ ಮಾಡಿ ಗುತ್ತಿಗೆದಾರ ಗಂಗಾರೆಡ್ಡಿ ಪರವಾಗಿಯೇ ಸರ್ಟಿಫಿಕೇಟ್‌ ಕೊಡ್ತಿದ್ದಾರೆ. ಇದು ಸಾರ್ವಜನಿಕರಲ್ಲಿ ಭಾರೀ ಅನುಮಾನ ಮೂಡಿಸಿದೆ.

ಈ ಕಾಮಗಾರಿಗೆ ಈ ಹಿಂದಿನ ಪಿಡಿಓ ಮಧು ಅವರು ಅನುಮತಿ ನೀಡಿದ್ರು. ಗುತ್ತಿಗೆದಾರರ ಕಳಪೆ ಕಾಮಗಾರಿ ಬಗ್ಗೆ ಈಗಿನ ಪಿಡಿಓ ಹರೀಶ್‌ ಕುಮಾರ್‌ ಅಸಮಧಾನ ವ್ಯಕ್ತಪಡಿಸಿದ್ರೂ ಈಓ ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ.  ಹಾಗಾಗಿ ಇಲ್ಲಿ ಭರ್ಜರಿ ಕಮಿಷನ್ ದಂಧೆ ನಡೆದಿದೆಯಾ ಅನ್ನೋ ಶಂಕೆ ಸಾರ್ವಜನಿಕರದ್ದು.

ನರೇಗಾ ಒಂದು ಉತ್ತಮ ಯೋಜನೆ. ಅದೂ ಕೊರೋನಾ ಸಂಕಷ್ಟ ಕಾಲದಲ್ಲಿ ಅನೇಕರಿಗೆ ಅನ್ನ ನೀಡಬಹುದಾಗಿದ್ದಾ ಯೋಜನೆ. ಆದ್ರೆ ಕಮಿಷನ್ ಬಾಕ ಅಧಿಕಾರಿಗಳು ಹಾಗೂ ಭ್ರಷ್ಟ ಗುತ್ತಿಗೆದಾರರಿಂದ ನರೇಗಾ ನೆಲ ಕಚ್ಚುತ್ತಿದೆ. ಬಡವರ ಹೆಸರಲ್ಲಿ ಬಿಂದಾಸಾಗಿ ಲೂಟಿ ನಡೀತಿದೆ. ಆದ್ರೆ ಮೇಲಾಧಿಕಾರಿಗಳ ಈ ಬಗ್ಗೆ ತಲೆಕೆಡಿಸಿಕೊಳ್ಳದೆ ಭ್ರಷ್ಟರಿಗೆ ಬೆಂಬಲಕೊಡುತ್ತಿರೋದು ನಿಜವಾಗ್ಲೂ ನಾಚಿಕೆಯ ವಿಚಾರ.

ಹೊಸಪೇಟೆಯಿಂದ ವಸಂತ್‌ ಸಿಟಿಜನ್‌ ಜರ್ನಲಿಸ್ಟ್‌, ವಿಜಯಟೈಮ್ಸ್‌

Related News

basket story
ಸಿಟಿಜನ್ ಜರ್ನಲಿಸ್ಟ್

ಬುಟ್ಟಿ ಬದುಕು ಕಷ್ಟ..ಕಷ್ಟ ; ಇವರ ಜೊತೆ ಚೌಕಾಸಿ ಮಾಡೋ ಮುನ್ನ ಒಮ್ಮೆ ಯೋಚಿಸಿ!

March 23, 2022
krushi ilakhe
ಸಿಟಿಜನ್ ಜರ್ನಲಿಸ್ಟ್

ಕೃಷಿ ಇಲಾಖೆಯಲ್ಲಿ ಮಹಾ ಮೋಸ !

January 20, 2022
Featured Video Play Icon
ಸಿಟಿಜನ್ ಜರ್ನಲಿಸ್ಟ್

ಹದ್ದು ಮೀರಿ ವರ್ತಿಸುತ್ತಿರುವ ಸರ್ಕಾರಿ ಅಧಿಕಾರಿ

October 10, 2022
ರಸ್ತೆ ಇಲ್ಲದೆ ಸುಸ್ತು ! ಸರ್ಕಾರ ಆಶ್ರಯ ಮನೆ ಕಟ್ಟಿದೆ, ಆದ್ರೆ ರಸ್ತೆಯೇ ಮಾಡ್ಲಿಲ್ಲ. ರಸ್ತೆ ಇಲ್ಲದೆ 17 ವರ್ಷಗಳಿಂದ ಒದ್ದಾಡುತ್ತಿರುವ ಬಡ ಜನತೆ. ಇದು ಚೆನ್ನಪಟ್ಟಣದ ಲಾಳಘಟ್ಟದ ತಮಿಳು ಕಾಲೋನಿಯ ದುರಂತದ ಕಥೆ ಇದು
ಸಿಟಿಜನ್ ಜರ್ನಲಿಸ್ಟ್

ರಸ್ತೆ ಇಲ್ಲದೆ ಸುಸ್ತು ! ಸರ್ಕಾರ ಆಶ್ರಯ ಮನೆ ಕಟ್ಟಿದೆ, ಆದ್ರೆ ರಸ್ತೆಯೇ ಮಾಡ್ಲಿಲ್ಲ. ರಸ್ತೆ ಇಲ್ಲದೆ 17 ವರ್ಷಗಳಿಂದ ಒದ್ದಾಡುತ್ತಿರುವ ಬಡ ಜನತೆ. ಇದು ಚೆನ್ನಪಟ್ಟಣದ ಲಾಳಘಟ್ಟದ ತಮಿಳು ಕಾಲೋನಿಯ ದುರಂತದ ಕಥೆ ಇದು

January 4, 2022

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.