ಅಧಿಕಾರ ಸ್ವೀಕರಿಸಿದ ಬಳಿಕ, ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ, ತಾನು ಘೋಷಿಸಿದ ಎಲ್ಲಾ 5 ಗ್ಯಾರಂಟಿಗಳನ್ನು ಈಡೇರಿಸುತ್ತೇನೆ (Gruhajyoti did not implement) ಎಂದು ಜನರ

ಕಿವಿ ಮೇಲೆ ಹೂವು ಇಟ್ಟಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ , ಈಗ ಅಧಿಕಾರಕ್ಕೆ ಬಂದು ತನ್ನ ಬಜೆಟ್ (Budget) ಮಂಡಿಸಿದರೂ ಆ ಬಗ್ಗೆ ಸ್ಪಷ್ಟತೆ ನೀಡುತ್ತಿಲ್ಲ. ಗ್ಯಾರಂಟಿ ಜಾರಿಗೊಳಿಸದೇ, “ನಾಳೆ ಬಾ”
ಎಂದು ಟೈಂ ಪಾಸ್ ಮಾಡುತ್ತಿದೆ. 5 ಗ್ಯಾರಂಟಿಗಳಲ್ಲಿ ಶಕ್ತಿ ಯೋಜನೆ ಜಾರಿಗೊಳಿಸಲು 15 ದಿನ ಬೇಕಾಯಿತು. ಆದರೇ ಈ ಬಜೆಟ್ನಲ್ಲಿ, ರಾಜ್ಯ ಸಾರಿಗೆ ಸಂಸ್ಥೆಗೆ ಶಕ್ತಿ ತುಂಬುವ ಅಂಶಗಳನ್ನು ಪ್ರಸ್ತಾಪಿಸಿಲ್ಲ.
ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ತಾನು ನುಡಿದಂತೆ 10 ಕೆಜಿ ಅಕ್ಕಿ ನೀಡದೇ, 05 ಕೆಜಿ ಅಕ್ಕಿಯ ದರ ನೀಡುತ್ತೇನೆಂದು ಹೇಳಿ,
ಇದನ್ನು ಓದಿ: 2 ತಿಂಗಳಲ್ಲಿ ರಾಜ್ಯದಲ್ಲಿ 42 ರೈತರ ಆತ್ಮಹತ್ಯೆ: ಜೀವ ಹಿಂಡುತ್ತಿದೆ ಸಾಲ ಬಾಧೆ !
ಕೇಂದ್ರ ಸರ್ಕಾರ ನೀಡುವ 05 ಕೆಜಿ ಅಕ್ಕಿಯಲ್ಲಿ, 02 ಕೆಜಿ ಅಕ್ಕಿಗೆ ಕನ್ನ ಹಾಕಿದೆ.
ಇನ್ನೂ ಗೃಹ ಜ್ಯೋತಿ (Gruhajyoti) ಗ್ಯಾರಂಟಿಯನ್ನು ಜಾರಿಗೊಳಿಸದೇ, ವಿದ್ಯುತ್ ದರ ಏರಿಸಿ, ಜನರ ಜೇಬಿಗೆ ಶಾಕ್ ನೀಡಿದೆ. ಈ ತಿಂಗಳ ಬಿಲ್ (Bill) ಪಾವತಿಸಿ, ಮುಂದಿನ ತಿಂಗಳು ಬಿಲ್ ಬರುವುದಿಲ್ಲ

ಎಂದು ಹೇಳುತ್ತಾ ಜನತೆಯನ್ನು ವಂಚಿಸುತ್ತಿದೆ ಎಂದು ರಾಜ್ಯ ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ದ ತೀವ್ರ ಟೀಕಾ (Gruhajyoti did not implement) ಪ್ರಹಾರ ನಡೆಸಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಗೃಹಲಕ್ಷ್ಮಿಗೆ ನೂರಾರು ಷರತ್ತು ವಿಧಿಸಿ , ಕೊನೆಗೆ ಸರ್ವರ್ (Server Hack ) ಹ್ಯಾಕ್ ಎಂಬ ಸುಳ್ಳು ಸುದ್ದಿಯನ್ನು ಸಚಿವರು ಹೇಳಿದ್ದರು,
ಈಗ ಷರತ್ತುಗಳ ಬಗ್ಗೆ ಮಾತನಾಡುತ್ತಿದ್ದಾರೆ. ಇನ್ನು ಯುವನಿಧಿಗೆ ಗ್ರಹಣ ಬಡಿದಿದ್ದು, ಅದು ಕಾಗದದ ಮೇಲಿನ ಯೋಜನೆಯಾಗಿ ಉಳಿಯುವ ಸಾಧ್ಯತೆ ದಟ್ಟವಾಗಿದೆ. ಹೀಗೆ ಮೊದಲ ಕ್ಯಾಬಿನೆಟ್
ನಲ್ಲಿಯೇ ಜಾರಿಯಾಗಬೇಕಿದ್ದ ಗ್ಯಾರಂಟಿಗಳನ್ನು ಈಡೇರಿಸದೇ, ಬಜೆಟ್ ನಲ್ಲಿ ಅನುಷ್ಠಾನದ ಬಗ್ಗೆ ಸ್ಪಷ್ಟನೆ ನೀಡದೇ, ತಾನು ನುಡಿದಂತೆ ನಡೆಯದ ಸರ್ಕಾರ ಎಂಬುದನ್ನು ಸಿದ್ದರಾಮಯ್ಯರವರ ಬಜೆಟ್
ಸಾಬೀತುಪಡಿಸಿದೆ ಎಂದು ಟೀಕಿಸಿದೆ.ಇನ್ನು ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ 5 ಗ್ಯಾರಂಟಿ (Guaranty) ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ಭರವಸೆ ನೀಡಿತ್ತು.
ಆದರೆ ಅನೇ ಕಾರಣಗಳಿಂದ ಕಾಂಗ್ರೆಸ್ ಸರ್ಕಾರ ಇನ್ನೂ ಕೆಲ ಗ್ಯಾರಂಟಿಗಳನ್ನು ಜಾರಿಗೊಳಿಸಲು ಹೆಣಗಾಡುತ್ತಿದೆ.