- ಜಿಎಸ್ಟಿ ಇಳಿಕೆಯಿಂದ (GST cut worsens Bengaluru traffic) ಬೈಕ್ ಮತ್ತು ಕಾರು ಖರೀದಿ ಏರಿಕೆ
- ಅಕ್ಟೋಬರ್ ತಿಂಗಳಲ್ಲೇ 89 ಸಾವಿರಕ್ಕೂ ಹೆಚ್ಚು ಹೊಸ ವಾಹನ ನೋಂದಣಿ
- ಪ್ರತಿದಿನ 1000ಕ್ಕೂ ಹೆಚ್ಚು ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ
Bengaluru: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಗಸ್ಟ್ 15ರಂದು ವಾಹನಗಳ ಮೇಲಿನ ಜಿಎಸ್ಟಿ (GST cut worsens Bengaluru traffic) ದರವನ್ನು ಕಡಿಮೆ ಮಾಡುವ ಘೋಷಣೆ ಮಾಡಿದ ನಂತರ, ದೇಶದಾದ್ಯಂತ ವಾಹನ ಖರೀದಿ ಏರುಗತಿಯಲ್ಲಿ ಸಾಗುತ್ತಿದೆ.
ಸೆಪ್ಟೆಂಬರ್ 22ರಿಂದ ನೂತನ ಜಿಎಸ್ಟಿ ದರ ಜಾರಿಯಾದ ಬಳಿಕ ವಿಶೇಷವಾಗಿ ಕರ್ನಾಟಕದಲ್ಲಿ ವಾಹನ ಮಾರಾಟದಲ್ಲಿ ದಾಖಲೆಮಟ್ಟದ ಏರಿಕೆ ಕಂಡುಬಂದಿದೆ. 350 ಸಿಸಿ ವರೆಗಿನ ದ್ವಿಚಕ್ರ ವಾಹನಗಳ ಮೇಲಿನ ಜಿಎಸ್ಟಿ ದರವನ್ನು ಶೇ. 28ರಿಂದ 18ಕ್ಕೆ ಇಳಿಸಲಾಗಿದೆ.

ಪೆಟ್ರೋಲ್ 1200 ಸಿಸಿ ವರೆಗೆ ಮತ್ತು ಡೀಸೆಲ್ 1500 ಸಿಸಿ ವರೆಗೆ ಇರುವ ಕಾರುಗಳ ಮೇಲೂ ಜಿಎಸ್ಟಿ (GST cut worsens Bengaluru traffic) ಕಡಿತ ಜಾರಿಯಾಗಿದೆ. ಇದರ ಪರಿಣಾಮವಾಗಿ, ಮಧ್ಯಮ ವರ್ಗದ ಜನರು ಹೊಸ ವಾಹನ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ.
ಇನ್ನು ಜಿಎಸ್ಟಿ ಪರಿಷ್ಕರಣೆಯ ನಂತರ ಅಕ್ಟೋಬರ್ ತಿಂಗಳಲ್ಲಿ ಕರ್ನಾಟಕದಲ್ಲಿ ವಾಹನ ನೋಂದಣಿ ದುಪ್ಪಟ್ಟಾಗಿದೆ.
ಆಗಸ್ಟ್ ತಿಂಗಳಲ್ಲಿ 1,61,214 ಹೊಸ ವಾಹನಗಳು ನೋಂದಣಿಯಾಗಿದ್ದರೆ, ಅಕ್ಟೋಬರ್ನಲ್ಲಿ ಈ ಸಂಖ್ಯೆ 2,52,420ಕ್ಕೆ ಏರಿಕೆಯಾಗಿದೆ.
ಅಂದರೆ ಪ್ರತಿದಿನ ಸರಾಸರಿ 10,517 ವಾಹನಗಳು ರಸ್ತೆಗಿಳಿಯುತ್ತಿವೆ. ಬೆಂಗಳೂರು ನಗರದಲ್ಲೇ ಆಗಸ್ಟ್ನಲ್ಲಿ 68,446 ವಾಹನಗಳು ನೋಂದಣಿಯಾಗಿದ್ದರೆ, ಅಕ್ಟೋಬರ್ನಲ್ಲಿ ಅದು 89,014ಕ್ಕೆ ಏರಿದೆ. ಅಂದರೆ ದಿನಕ್ಕೆ ಸುಮಾರು 3,748 ಹೊಸ ವಾಹನಗಳು ನಗರದ ರಸ್ತೆಗಿಳಿಯುತ್ತಿವೆ.
ಸಾರಿಗೆ ಇಲಾಖೆಯ ಅಧಿಕಾರಿಗಳ ಪ್ರಕಾರ, ಇದು ಇತ್ತೀಚಿನ ವರ್ಷಗಳಲ್ಲಿ ದಾಖಲೆಮಟ್ಟದ ಹೆಚ್ಚಳವಾಗಿದೆ.
ಈ ಹೆಚ್ಚಳದಿಂದಾಗಿ ಬೆಂಗಳೂರಿನ ಟ್ರಾಫಿಕ್ (Traffic) ಸಮಸ್ಯೆ ಮತ್ತಷ್ಟು ಗಂಭೀರವಾಗುವ ಭೀತಿ ವ್ಯಕ್ತವಾಗಿದೆ.
ಈಗಾಗಲೇ ಟ್ರಾಫಿಕ್ ಜಾಮ್ನಿಂದ ನರಳುತ್ತಿರುವ ನಗರದಲ್ಲಿ ಹೊಸ ವಾಹನಗಳ ಪ್ರವೇಶದಿಂದ ಟ್ರಾಫಿಕ್ ಒತ್ತಡ ಹೆಚ್ಚಾಗುವುದು ಅನಿವಾರ್ಯ.
ವಾಹನ ಸವಾರರು ಜಿಎಸ್ಟಿ (GST) ಕಡಿತದಿಂದ ವಾಹನ ಖರೀದಿ ಸುಲಭವಾಯಿತಾದರೂ, ರಸ್ತೆಯ ಮೇಲೆ ಓಡಾಡುವ ವಾಹನಗಳ ಸಂಖ್ಯೆಯು ಅನೇಕ ಪಟ್ಟು ಹೆಚ್ಚಾಗಿದ್ದು, ಟ್ರಾಫಿಕ್ನಿಂದ ಗಂಟೆಗಟ್ಟಲೆ ಸಿಲುಕುವ ಪರಿಸ್ಥಿತಿ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ತಜ್ಞರು ಸರ್ಕಾರವು ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡದಿದ್ದರೆ, ಮುಂದಿನ ತಿಂಗಳುಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಕ್ಕಟ್ಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.
ಒಟ್ಟಿನಲ್ಲಿ, ಜಿಎಸ್ಟಿ ಇಳಿಕೆಯಿಂದ ವಾಹನ ಉದ್ಯಮಕ್ಕೆ ಉತ್ಸಾಹದ ವಾತಾವರಣ ನಿರ್ಮಾಣವಾದರೂ, ನಗರ ಮೂಲಸೌಕರ್ಯ ಮತ್ತು ಟ್ರಾಫಿಕ್ ವ್ಯವಸ್ಥೆಯ ಮೇಲೆ ಭಾರೀ ಒತ್ತಡ ಸೃಷ್ಟಿಯಾಗಿದೆ.
ಸಿಲಿಕಾನ್ ಸಿಟಿಯಾದ ಬೆಂಗಳೂರಿನಲ್ಲಿ ಹೊಸ ವಾಹನಗಳ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ವಾಯುಮಾಲಿನ್ಯ ಮತ್ತು ರಸ್ತೆ ದಟ್ಟಣೆ ಸಮಸ್ಯೆಗಳು ಗಂಭೀರವಾಗುವ ಭೀತಿ ಉಂಟಾಗಿದೆ.
ತಜ್ಞರು ವಾಹನ ಖರೀದಿಗೆ ಪಾರ್ಶ್ವವಾಗಿ ಸಾರ್ವಜನಿಕ ಸಾರಿಗೆ, ಮೆಟ್ರೋ ಮತ್ತು ಕಾರ್ಪೂಲಿಂಗ್ ವ್ಯವಸ್ಥೆಗಳನ್ನು ಉತ್ತೇಜಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಇದನ್ನು ಓದಿ : ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆ 1 ಮತ್ತು 2ರ ಅಂತಿಮ ವೇಳಾಪಟ್ಟಿ ಪ್ರಕಟಿಸಿದ ಪರೀಕ್ಷಾ ಮಂಡಳಿ