ಬೆಂಗಳೂರು ಜ 11 : ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಗೆ ಹೆಚ್.ಡಿ. ರೇವಣ್ಣ ಪ್ರತಿಕ್ರಿಯಿಸಿದ್ದು ಜೆಡಿಎಸ್ ಪಕ್ಷದ ಭಯದಿಂದಲೇ ಕಾಂಗ್ರೆಸ್ ಪಕ್ಷದ ಮುಖಂಡರು ಮೇಕೆದಾಟು ಯೋಜನೆಯ ಪಾದಯಾತ್ರೆಯನ್ನು ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. .
ಸುದ್ದಿಗೋಷ್ಟಿಯಲ್ಲಿ ಹೆಚ್.ಡಿ. ರೇವಣ್ಣ ಮಾತನಾಡಿದ ಅವರು ಜೆಡಿಎಸ್ ಪಕ್ಷವನ್ನು ಕಂಡರೆ ಎರಡು ರಾಷ್ಟೀಯ ಪಕ್ಷಗಳು ಭಯ ಪಡುತ್ತವೆ, ಜೆಡಿಎಸ್ ಪಕ್ಷ ಪ್ರಾಭಲ್ಯದ ಜಿಲ್ಲೆಗಳ ಜನರನ್ನೇ ಕರೆಸಿಕೊಂಡು ಕಾಂಗ್ರೆಸ್ ಪಕ್ಷದ ಮುಖಂಡರು ಪಾದಯಾತ್ರೆ ಮಾಡುತ್ತಿದ್ದಾರೆ.
ರಾಜ್ಯದ ನೀರಾವರಿ ಯೋಜನೆಗಳಿಗೆ ಜೆಡಿಎಸ್ ಪಕ್ಷ ಎಂದೂ ಅಡ್ಡಿ ಮಾಡಿಲ್ಲ. ನೀರಾವರಿ ಯೋಜನೆಗಳು ಅನುಷ್ಠಾನವಾಗಬೇಕು ಎಂಬುದು ಜೆಡಿಎಸ್ ಪಕ್ಷದ ಕನಸು ಆಗಿದೆ. ಹಾಗಂತ ಕಾಂಗ್ರೆಸ್ ಪಕ್ಷದ ಮುಖಂಡರ ಹಿಂದೆ ಹೋಗಬೇಕೇ? ಎಂದು ಪ್ರಶ್ನಿಸಿದರು ದೇವೇಗೌಡರು ಈ ರಾಜ್ಯದಲ್ಲಿ ನೀರಾವರಿ ಯೋಜನೆಗಾಗಿ ಎಷ್ಟು ಹೋರಾಟವನ್ನು ಮಾಡಿದ್ದಾರೆ. ಕಾವೇರಿವಿವಾದದಲ್ಲಿ ಏನೇನು ಮಾಡಿ ರಾಜ್ಯಕ್ಕೆ ಕಾವೇರಿಯಲ್ಲಿ ನ್ಯಾಯವಾದ ಪಾಲುಬರಲು ಹೋರಾಡಿದ್ದಾರೆ ಎಂದು ರಾಜ್ಯದ ಜನರಿಗೆ ಗೊತ್ತಿದೆ ಎಂದು ಟೀಕಿಸಿದ್ದಾರೆ