Bengaluru : ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಡೆಂಗ್ಯೂ (Dengue) ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಬಿಹಾರ, ಮದ್ಯಪ್ರದೇಶ, ಉತ್ತರಪ್ರದೇಶ ಮತ್ತು ದೆಹಲಿಯಲ್ಲಿ ದಿನೇ ದಿನೇ ಡೆಂಗ್ಯೂ ಪ್ರಮಾಣ ಹೆಚ್ಚಾಗುತ್ತಿದೆ.

ಇನ್ನು ಉತ್ತರ ಪ್ರದೇಶದಲ್ಲಿ (Health Precautions For Dengue Virus) 3200ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ 380ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಅದೇ ರೀತಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ ಕೂಡಾ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದ್ದು,
ದೆಹಲಿ ಸರ್ಕಾರ (Delhi Government) ಮುಂಜಾಗ್ರತಾ ಕ್ರಮವಾಗಿ ದೆಹಲಿಯ ಎಲ್ಲ ಆಸ್ಪತ್ರೆಗಳಲ್ಲಿ ಶೇಕಡಾ 15ರಷ್ಟು ಹಾಸಿಗೆಗಳನ್ನು ಡೆಂಗ್ಯೂ ರೋಗಿಗಳಿಗೆ ಮೀಸಲಿಡುವಂತೆ ಸೂಚನೆ ನೀಡಿದೆ.
ವರದಿಗಳ ಪ್ರಕಾರ, ಅಕ್ಟೋಬರ್ 1 ರಿಂದ ಅಕ್ಟೋಬರ್ 5ರ ನಡುವೆ ರಾಜಧಾನಿ (Health Precautions For Dengue Virus) ದೆಹಲಿಯಲ್ಲಿ 300ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ : https://vijayatimes.com/congress-is-not-only-a-party/
ಸದ್ಯ ಉತ್ತರ ಭಾರತದಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣಗಳು ದಕ್ಷಿಣ ಭಾರತಕ್ಕೂ ಕಾಲಿಡುವ ಸಾಧ್ಯತೆ ಹೆಚ್ಚಿದ್ದು, ಹೀಗಾಗಿ ಈಗಲೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ. ಡೆಂಗ್ಯೂ ಬಾರದಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ವಿವರ ಇಲ್ಲಿದೆ ನೋಡಿ.
ಡೆಂಗ್ಯೂ ರೋಗ ಲಕ್ಷಣಗಳು :

- ಕಡಿಮೆ ರಕ್ತದೊತ್ತಡ
- ವಾಂತಿ
- ಚರ್ಮದ ದದ್ದುಗಳು
- ವಿಪರೀತ ಜ್ವರ
- ತೀವ್ರ ಮೈಕೈನೋವು
- ಕಣ್ಣು ಮತ್ತು ಮೂಳೆಗಳಲ್ಲಿ ನೋವು
- ರಕ್ತಸ್ರಾವ
- ಹೊಟ್ಟೆ ನೋವು
- ಆಯಾಸ ಮತ್ತು ಚಡಪಡಿಕೆಡೆಂಗ್ಯೂಗೆ ಕಾರಣ ಮತ್ತು ಮುಂಜಾಗ್ರತಾ ಕ್ರಮಗಳು
- ಈಡಿಸ್ ಈಜಿಪ್ಟೈ ಸೊಳ್ಳೆ ಕಚ್ಚುವುದರಿಂದ ಡೆಂಗ್ಯೂ ಜ್ವರ ಬರುತ್ತದೆ.
ಈಡಿಸ್ ಈಜಿಪ್ಟೈ ಸೊಳ್ಳೆ ಕಚ್ಚಿದ 3 ರಿಂದ 14 ದಿನಗಳ ಒಳಗೆ ಡೆಂಗ್ಯೂ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮೊದಲಿಗೆ ಜ್ವರದೊಂದಿಗೆ ಆರಂಭಗೊಳ್ಳುವ ಡೆಂಗ್ಯೂ, ನಂತರ ಬೇರೆ ಬೇರೆ ಲಕ್ಷಣಗಳಿಂದ ಉಲ್ಬಣಗೊಳ್ಳುತ್ತದೆ. ಡೆಂಗ್ಯೂ ಮುಂಜಾಗ್ರತಾ ಕ್ರಮವಾಗಿ, ಕೂಲರ್ಗಳು, ಪ್ಲಾಸ್ಟಿಕ್ ಕಂಟೇನರ್,
ಇದನ್ನೂ ಓದಿ : https://vijayatimes.com/health-tips-of-banana-flower/
ಬಕೆಟ್ಗಳು, ಬಳಸಿದ ಟೈರ್ಗಳು, ವಾಟರ್ ಕೂಲರ್ಗಳು ಹೀಗೆ ನೀರು ಶೇಖರಣೆಗೊಳ್ಳುವ ಸ್ಥಳಗಳನ್ನು ಕನಿಷ್ಠ ವಾರಕ್ಕೊಮ್ಮೆಯಾದರೂ ಶುದ್ದಗೊಳಿಸಬೇಕು. ಈ ರೀತಿಯ ನೀರಿನಲ್ಲಿಯೇ ಈಡಿಸ್ ಈಜಿಪ್ಟೈ ಸೊಳ್ಳೆ ಜೀವಿಸುತ್ತದೆ.

- ಸಾಧ್ಯವಾದಷ್ಟು ಸದಾ ಕಾಲ ಕೈಕಾಲುಗಳನ್ನು ಮುಚ್ಚುವ ಬಟ್ಟೆಗಳನ್ನು ಧರಿಸಬೇಕು.
- ಪ್ರತಿದಿನ ಹೆಚ್ಚು ನೀರು ಮತ್ತು ಜ್ಯೂಸ್ ಕುಡಿಯಬೇಕು.
- ಮನೆಯಲ್ಲಿ ನೀರು ಶೇಖರಿಸಿರುವ ಪಾತ್ರೆಗಳನ್ನು ಮುಚ್ಚಿಡಬೇಕು.
- ಸೊಳ್ಳೆಗಳ ಕಡಿತವನ್ನು ತಡೆಯಲು ಹಗಲಿನಲ್ಲಿಯೂ ಸೊಳ್ಳೆ ಪರದೆಗಳನ್ನು ಬಳಸಬೇಕು.
- ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.
- ಮಹೇಶ್.ಪಿ.ಎಚ್