- ಆಪರೇಷನ್ ಸಿಂಧೂರ್ ಬೆನ್ನಲ್ಲೆ ಭಾರತ-ಪಾಕಿಸ್ತಾನ ಗಡಿಯಲ್ಲಿ ಯುದ್ಧದ ಆತಂಕ
- ಸೂಕ್ಷ್ಮ ಪ್ರದೇಶಗಳಲ್ಲೂ ತೀವ್ರ ಕಟ್ಟೆಚ್ಚರ (High alert in coastal areas karnataka)
- ಅರಬ್ಬಿ ಸಮುದ್ರ ಹಾಗೂ ಬೋಟ್ಗಳ ಮೇಲೆ ತೀವ್ರ ನಿಗಾ
Mangalore: ಏಪ್ರಿಲ್ 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ (Pahalgam) ನಡೆದ ಉಗ್ರರ ದಾಳಿಗೆ (Terror Attack) ಪ್ರತೀಕಾರವಾಗಿ ಭಾರತೀಯ ಸೇನೆ (Indian Army) ಪಾಕಿಸ್ತಾನದ 9 ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಅಪರೇಷನ್ ಸಿಂಧೂರ (Operation Sindoora) ಹೆಸರಿನ ದಾಳಿಯಲ್ಲಿ ಹಲವಾರು ಭಯೋತ್ಪಾದಕರು ಸಾವನ್ನಪ್ಪಿದ್ದರು .
ಈ ಹಿನ್ನೆಲೆಯಲ್ಲಿ ಭಾರತ-ಪಾಕಿಸ್ತಾನ (India-Pakistan) ಗಡಿಯಲ್ಲಿ ಯುದ್ಧದ ಆತಂಕ ಎದುರಾಗಿದೆ. ಮಾತ್ರವಲ್ಲ, ಕೆಲವು ಸೂಕ್ಷ್ಮ ಪ್ರದೇಶಗಳಲ್ಲೂ (Sensitive areas) ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಅದರಂತೆ ಕರಾವಳಿಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದ್ದು, ಅರಬ್ಬಿ ಸಮುದ್ರದಲ್ಲಿ (Arabian Sea) ತೀವ್ರ ನಿಗಾವಹಿಸಲಾಗಿದೆ.
ರಾಜ್ಯದ ಕರಾವಳಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ (High alert) . ಅರಬ್ಬೀ ಸಮುದ್ರದಲ್ಲಿ ತೀವ್ರ ನಿಗಾ ವಹಿಸಿರುವ ಕರಾವಳಿ ಕಾವಲು (Coast Guard) ಪಡೆ ಪೊಲೀಸರು. ಮಂಗಳೂರಿನ ಬಂದರು ತೀರದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಸಮುದ್ರ ಮಾರ್ಗದ ಮೀನುಗಾರಿಕಾ ಬೋಟ್ (Fishing boat) , ಮೀನುಗಾರರ ತಪಾಸಣೆ, ದಾಖಲೆಗಳನ್ನು ತಪಾಸಣೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಮೀನುಗಾರರ ವಿಚಾರಣೆಯನ್ನು (Inquiry of fishermen) ಕೂಡ ಕರಾವಳಿ ನಡೆಸುತ್ತಿರುವ ಪೊಲೀಸರು ಅನುಮಾನಾಸ್ಪದ ಬೋಟ್ಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ.
ಉಡುಪಿ ಕೇಂದ್ರಿತ (Udupi Centre) ಕರಾವಳಿ ಕಾವಲು ಪೊಲೀಸ್ ಪಡೆ ಪ್ಯಾಟ್ರೋಲಿಂಗ್, ಬೋಟ್ ಚೆಕ್ಕಿಂಗ್, ಬೀಚ್ ಪಾಯಿಂಟ್ಗಳಲ್ಲಿ ಪೊಲೀಸ್ ಸಿಬ್ಬಂದಿ (Police personnel) ನಿಯೋಜನೆ ಮಾಡಲಾಗಿದ್ದು ಕಡಲಿನಲ್ಲಿ ಸುಳಿದಾಡುವ ಅಪರಿಚಿತ ವ್ಯಕ್ತಿಗಳು, ದೋಣಿಗಳು ಕಂಡರೆ ಕರಾವಳಿ ಕಾವಲು (Coast Guard) ಪೊಲೀಸ್ ಪಡೆಗೆ ಮಾಹಿತಿ ನೀಡುವಂತೆ ಕಡಲಿನಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ, ಆಳಸಮುದ್ರಕ್ಕೆ ಮೀನುಗಾರಿಕೆ ನಿರತರಿಗೆ ಸೂಚನೆ ನೀಡಲಾಗಿದೆ.

ಕೇಂದ್ರದ ಕೋಸ್ಟ್ಗಾರ್ಡ್ ಕಡಲಿನಲ್ಲಿ (Coast Guard at sea) 200 ನಾಟಿಕಲ್ ದೂರದಲ್ಲಿ ಗಸ್ತು ಹೆಚ್ಚಿಸಿದ್ದು, ಯಾವುದೇ ಅನಾಮಿಕ ಹಡಗು, ಬೋಟ್ಗಳ ಸುತ್ತಾಟದ ಮೇಲೆ ನಿಗಾ ಇರಿಸುವಂತೆ ಸೂಚನೆ ನೀಡಲಾಗಿದೆ. ಕಡಲ ಗಸ್ತು ಹಡಗು ವರಾಹ, ಸಕ್ಷಮ್, ಫಾಸ್ಟ್ ಪ್ಯಾಟ್ರೋಲ್ ವೆಸೆಲ್ಗಳಾದ ಅಮಾತ್ರ್ಯ, ರಾಜ್ದೂತ್ (Rajdoot) ಹಾಗೂ ಸಾವಿತ್ರಿಭಾಯಿ ಫುಲೆ, ಇಂಟರ್ಸೆಪ್ಟರ್ ಬೋಟ್ಗಳು ಯಾವುದೇ ಸನ್ನಿವೇಶಗಳನ್ನು ಎದುರಿಸಲು ಸನ್ನದ್ಧವಾಗಿದೆ. ಸಮುದ್ರ ಮಾರ್ಗದ (Sea route) ಮೂಲಕ ಅಕ್ರಮ ಪ್ರವೇಶಕ್ಕೆ ತಡೆ ಹಾಗೂ ಮೀನುಗಾರರು, ನಾಗರಿಕರ ರಕ್ಷಣೆಯ ಕ್ಷಿಪ್ರ (Civil defense rapid response) ಕಾರ್ಯಾಚರಣೆಗಳನ್ನು ಮಾಡಲು ಸಿದ್ಧಗೊಂಡಿದೆ.
ಭಾರತದ ಸೀಮಾ ರೇಖೆಯೊಳಗೆ ಯಾವುದೇ ಹಡಗು ಅಕ್ರಮ ಪ್ರವೇಶ ಮಾಡದಂತೆ ಅಥವಾ ಅನಾಮಿಕ ಹಡಗುಗಳು ಸುತ್ತಾಟ (Ships cruise) ನಡೆಸಿದರೆ ಕ್ಷಿಪ್ರ ಕಾರ್ಯಾಚರಣೆ ನಡೆಸುವಂತೆ ಸೂಚನೆ ನೀಡಲಾಗಿದೆ.ಉಡುಪಿಯ ಸೈಂಟ್ ಮೇರಿಸ್, ಭಟ್ಕಳದ ನೇತ್ರಾಣಿ (Bhatkal’s Netrani) , ಕಾರವಾದ ಕೂರ್ಮಿಗಡ-ದೇವುಗಡ ಸೇರಿದಂತೆ 50ಕ್ಕೂ ಅಧಿಕ ಹೈಲ್ಯಾಂಡ್ಗಳಿದ್ದು, ಅಲ್ಲಿಗೆ ತೆರಳಿ ತಪಾಸಣೆ ನಡೆಸುವಂತೆ ಸೂಚನೆ ನೀಡಲಾಗಿದೆ.
ಇದನ್ನು ಓದಿ : http://ಅಪರೇಷನ್ ಸಿಂಧೂರ: ಕಣಿವೆಯಲ್ಲಿ ನೆತ್ತರು ಹರಿಸಿದ್ದ ಉಗ್ರರಿಗೆ ಭಾರತ ಸೇನೆಯಿಂದ ತಕ್ಕ ಉತ್ತರ
ಉಗ್ರರು ಹೈಲ್ಯಾಂಡ್ನಲ್ಲಿ ವಾಸ್ತವ್ಯ ಹೂಡಿ ದಾಳಿ ಮಾಡುವ ಸಾಧ್ಯತೆಯ ಬಗ್ಗೆ ಎಚ್ಚರ ವಹಿಸಿ ಪ್ರತಿ (Careful everyone) ಹೈಲ್ಯಾಂಡ್ಗಳನ್ನು ಪದೇ ಪದೆ ತಪಾಸಣೆ (High alert in coastal areas karnataka) ನಡೆಸುವಂತೆ ಕೋಸ್ಟ್ಗಾರ್ಡ್ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ.