- ಬಿಎಂಆರ್ಸಿಎಲ್ ಆಡಳಿತ ಕೇಂದ್ರದ ಕೈಯಲ್ಲಿ: ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಬ್ರೇಕ್
- ಕೈಗಾರಿಕಾ ವಿವಾದ ಕಾಯ್ದೆಯಡಿ ಪ್ರಕಟಿಸಿದ್ದ ನೋಟಿಫಿಕೇಶನ್ ಅಮಾನ್ಯ
- ಬಿಎಂಆರ್ಸಿಎಲ್ ಪ್ರತ್ಯೇಕ ಸಂಸ್ಥೆ ಅಲ್ಲ ರೈಲ್ವೆ ಕಂಪನಿ ಎಂದು ತೀರ್ಪು ನೀಡಿದ ಹೈಕೋರ್ಟ್
Bengaluru: ಕರ್ನಾಟಕ ಹೈಕೋರ್ಟ್ (High Court) ಮಹತ್ವದ ತೀರ್ಪೊಂದನ್ನು ನೀಡುತ್ತಾ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಅನ್ನು ‘ಅತ್ಯವಶ್ಯಕ ಸೇವೆ’ ಅಥವಾ ‘ಅಗತ್ಯ ಸೇವೆ’ ಎಂದು ಘೋಷಿಸುವ ಆಡಳಿತಾತ್ಮಕ ಹಕ್ಕು ರಾಜ್ಯ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಹಿನ್ನೆಲೆಯಲ್ಲಿ, 2017 ರ ಜುಲೈ 7ರಂದು ಕಾನೂನು ಮತ್ತು ಗೃಹ ಇಲಾಖೆಯು ಹೊರಡಿಸಿದ್ದ ಆದೇಶವನ್ನು ಏಕಸದಸ್ಯ ಪೀಠ ರದ್ದುಪಡಿಸಿದೆ. (High Court clarifies about metro)

ತೀರ್ಪಿನ ಪ್ರಕಾರ, ಬಿಎಂಆರ್ಸಿಎಲ್ ಯಾವುದೇ ಪ್ರತ್ಯೇಕ ರಾಜ್ಯದ ಕಂಪನಿ (Company) ಅಲ್ಲ, ಇದು ರೈಲ್ವೆ ಕಂಪನಿಯಾಗಿದ್ದು ಈ ಸಂಸ್ಥೆಗೆ ಸಂಬಂಧಿಸಿದ ಅಂತಿಮ ಆಡಳಿತಾತ್ಮಕ ಅಧಿಕಾರ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ ಎಂದು ತೀರ್ಪು ನೀಡಿದೆ.
ಅಷ್ಟಕ್ಕೂ ಈ ತೀರ್ಪು ಬಿಎಂಆರ್ಸಿಎಲ್ ಉದ್ಯೋಗಿಗಳ ಸಂಘ ಸಲ್ಲಿಸಿದ್ದ ಅರ್ಜಿಯ ಮೇಲೆ ಹೊರಬಂದಿದೆ. (High Court clarifies about metro)
ಕೈಗಾರಿಕಾ ವಿವಾದ ಕಾಯ್ದೆಯಡಿ ಮತ್ತು ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆಯಡಿಯಲ್ಲಿ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ಕಾನೂನುಬದ್ಧವಾಗಿಲ್ಲ ಎಂದು ವಾದಿಸಿ ಸಂಘವು ಹೈಕೋರ್ಟ್ (High Court) ಬಾಗಿಲು ತಟ್ಟಿತ್ತು.
ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ಪೀಠ, ರಾಜ್ಯ ಸರ್ಕಾರಕ್ಕೆ ಬಿಮ್ಆರ್ಸಿಎಲ್ ಸೇವೆಗಳನ್ನು ‘ಸಾರ್ವಜನಿಕ ಉಪಯುಕ್ತತೆ’ ಅಥವಾ ‘ಅಗತ್ಯ ಸೇವೆ’ ಎಂದು ಘೋಷಿಸುವಷ್ಟು ಅಧಿಕಾರವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ಇದಕ್ಕೆ ಕಾರಣವಾಗಿರುವುದು ಬಿಎಂಆರ್ಸಿಎಲ್ ಒಂದು ರೈಲ್ವೆ ಕಂಪನಿ ಎಂಬ ಕಾನೂನುಸ್ಥಿತಿ, ಮತ್ತು ರೈಲ್ವೆ ಸಂಬಂಧಿತ ನಿಯಂತ್ರಣ ಹಾಗೂ ನಿರ್ಣಯ ತೆಗೆದುಕೊಳ್ಳುವ ಅಧಿಕಾರ ಕೇಂದ್ರ ಸರ್ಕಾರದ್ದಾಗಿದೆ .
ಇನ್ನು ತೀರ್ಪಿನಲ್ಲಿ ಮತ್ತೊಂದು ಮುಖ್ಯ ಅಂಶವಿದೆ.
ಬಿಎಂಆರ್ಸಿಎಲ್ನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಲಾ 50% ಪಾಲುದಾರಿಕೆ ಹೊಂದಿದ್ದರೂ, ನಿರ್ಣಾಯಕ ಆಡಳಿತಾತ್ಮಕ ತೀರ್ಮಾನಗಳಲ್ಲಿ ಅಂತಿಮ ಮಾತು ಕೇಂದ್ರ ಸರ್ಕಾರದ್ದಾಗಿರುತ್ತದೆ.
ದೊಡ್ಡ ನೀತಿ ಬದಲಾವಣೆಗಳು, ಉದ್ಯೋಗಿಗಳ ಹಕ್ಕು ಸಂಬಂಧಿತ ನಿರ್ಧಾರಗಳು, ಮತ್ತು ಸೇವಾ ನಿಯಮಗಳಂತಹ ವಿಷಯಗಳಲ್ಲಿ ಕೇಂದ್ರ ಸರ್ಕಾರದ ಅನುಮೋದನೆ ಅಗತ್ಯ.
ಹೀಗಾಗಿ, ರಾಜ್ಯ ಸರ್ಕಾರವು ಏಕಪಕ್ಷೀಯವಾಗಿ ಎಸ್ಮಾ ಜಾರಿ ಮಾಡುವುದು ಅಥವಾ ಇತರೆ ಕಟ್ಟುನಿಟ್ಟಿನ ಆದೇಶಗಳನ್ನು ಹೊರಡಿಸುವಂತಿಲ್ಲ.
ಈ ತೀರ್ಪು ಮುಂದಿನ ದಿನಗಳಲ್ಲಿ ಮೆಟ್ರೋ ನೌಕರರ ಸಂಘಗಳ ಹೋರಾಟ, ಮುಷ್ಕರ ಅಥವಾ ಸೇವೆಯ
ಸ್ಥಗಿತದ ಸಂದರ್ಭದಲ್ಲಿ ಕಾನೂನು ಗೊಂದಲ ತಪ್ಪಿಸಲು ಸಹಾಯಕವಾಗಲಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪ್ರತಿದಿನ ಲಕ್ಷಾಂತರ ಪ್ರಯಾಣಿಕರನ್ನು ಸಾಗಿಸುವ ನಮ್ಮ ಮೆಟ್ರೋಗೆ (Metro) ಈ ತೀರ್ಪು ದೊಡ್ಡ ಆಡಳಿತಾತ್ಮಕ ಬೆಳವಣಿಗೆಯಂತೆ ಕಂಡಿದೆ.
ಸೇವೆ, ದರ, ವಿಸ್ತರಣಾ ಹಂತ ಹಾಗೂ ನೌಕರರ ಹಕ್ಕುಗಳ ಬಗ್ಗೆ ರಾಜ್ಯ–ಕೇಂದ್ರ ಸರಕಾರಗಳ ನಡುವೆ ಉಂಟಾಗುತ್ತಿದ್ದ ಕಾನೂನು ವಿವಾದಗಳಿಗೆ ಈ ತೀರ್ಪು ಸ್ಪಷ್ಟತೆ ನೀಡಿದೆ. ಸಾರ್ವಜನಿಕ ವಲಯದಲ್ಲೂ ಈ ತೀರ್ಪು ಚರ್ಚೆಗೆ ಗ್ರಾಸವಾಗಿದೆ.
ಇದನ್ನು ಓದಿ : ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ ಹೊಸ ಪ್ಲಾನ್, ಕೋಬ್ರಾ ಬೀಟ್ ತಂತ್ರ ಅಳವಡಿಕೆ