- HIV ಜಾಗೃತಿ ಅಭಿಯಾನಗಳ ನಡುವೆಯೂ ಬಾಗಲಕೋಟೆಯಲ್ಲಿ ಪಾಸಿಟಿವಿಟಿ ರೇಟ್ ಏರಿಕೆ
- ಬಾಗಲಕೋಟೆಯಲ್ಲಿ 17,000ಕ್ಕೂ ಹೆಚ್ಚು HIV ಆ್ಯಕ್ಟೀವ್ ಕೇಸ್ (HIV positivity rate rises in Bagalkot)
- ವಲಸೆ ಕಾರ್ಮಿಕರು, ಜಾಗೃತಿ ಕೊರತೆ ಮತ್ತು ಅಸುರಕ್ಷಿತ ವರ್ತನೆಗಳ ಸಂಯೋಜನೆ ಸೋಂಕು ಹೆಚ್ಚಲು ಮೂಲ ಕಾರಣ ಎಂದ ಆರೋಗ್ಯ ಇಲಾಖೆ
Bagalkote: ಕರ್ನಾಟಕದಲ್ಲಿ ಆರೋಗ್ಯ ಇಲಾಖೆ ಶಾಕಿಂಗ್ ವರದಿ ಒಂದನ್ನು ತೆರೆದಿಟ್ಟಿದ್ದು ಅದರಲ್ಲಿ ಬಾಗಲಕೋಟೆ ಜಿಲ್ಲೆಯ ಹೆಸರು ಕೇಳಿಬಂದಿದೆ.

ವಿಶೇಷವಾಗಿ HIV/ಏಡ್ಸ್ ಸಂಬಂಧಿಸಿದ ಸಂಖ್ಯೆಗಳ ಬಗ್ಗೆ ಮಾತನಾಡುವಾಗ, ಕಳೆದ ಎರಡು ದಶಕಗಳಿಂದ (HIV positivity rate rises in Bagalkot) ಈ ಜಿಲ್ಲೆ ಗಮನಸೆಳೆಯುತ್ತಲೇ ಬಂದಿದೆ.
ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದರೂ, ಬಾಗಲಕೋಟೆಯಲ್ಲಿ HIV ಪಾಸಿಟಿವಿಟಿ (Positivity) ರೇಟ್ ರಾಜ್ಯದ ಇತರ ಜಿಲ್ಲೆಗಳಿಗಿಂತ ಇನ್ನೂ ಹೆಚ್ಚಾಗಿದೆ.
ಸೋಂಕಿತರ ಸಂಖ್ಯೆ ಹಿಂದಿನ ವರ್ಷಗಳಿಗಿಂತ ಕಡಿಮೆಯಾದರೂ, ಶೇಕಡಾವಾರು ಪಾಸಿಟಿವಿಟಿ ಪ್ರಮಾಣದಲ್ಲಿ ಜಿಲ್ಲೆ ಮತ್ತೆ ನಂಬರ್ ಒನ್ (Number one)ಸ್ಥಾನದಲ್ಲಿರುವುದು ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ.
ಜಿಲ್ಲೆಯಲ್ಲಿ ನಡೆಯುವ HIV ಸ್ಕ್ರೀನಿಂಗ್ (Screening) ಪರೀಕ್ಷೆಗಳಲ್ಲಿ ಪ್ರತೀ 100 ಜನರಲ್ಲಿ ಒಬ್ಬರಿಗೆ ಸೋಂಕು ದೃಢವಾಗುತ್ತಿರುವುದು ಆರೋಗ್ಯ ಇಲಾಖೆಗೆ ಗಂಭೀರ ಎಚ್ಚರಿಕೆ ಆಗಿದೆ.
ಇದು ಇತರ ಜಿಲ್ಲೆಗಳಿಗಿಂತ ಹೆಚ್ಚಿನ ಪ್ರಮಾಣವಾಗಿದ್ದು, ಬಾಗಲಕೋಟೆಯ ಪಾಸಿಟಿವಿಟಿ ರೇಟ್ (Positivity rate) ರಾಜ್ಯ ಸರಾಸರಿಗಿಂತ ತುಂಬಾ ಮೇಲಿರುವ ಮತ್ತೊಂದು ಸೂಚಕವಾಗಿದೆ.
ಒಟ್ಟು 17,976 ಆ್ಯಕ್ಟೀವ್ ಕೇಸ್ಗಳು (Active cases) ಇವೆ ಎನ್ನುವ ಲೆಕ್ಕಾಂಶ ಕೂಡಾ ಪರಿಸ್ಥಿತಿಯ ತೀವ್ರತೆಯನ್ನು ವ್ಯಕ್ತಪಡಿಸುತ್ತದೆ.ಈ ಸೋಂಕು ಕೇವಲ ವಯಸ್ಕರಲ್ಲೇ ಸೀಮಿತವಾಗಿಲ್ಲ; 300 ಮಕ್ಕಳಲ್ಲಿ, 13 ಗರ್ಭಿಣಿಯರಲ್ಲಿ ಮತ್ತು 47 ಬಾಣಂತಿಯರಲ್ಲಿ ದೃಢವಾಗಿರುವುದು ಆರೋಗ್ಯ ವ್ಯವಸ್ಥೆಗೆ ದೊಡ್ಡ ಸವಾಲಾಗಿದೆ.
ಸೋಂಕಿತರ ಒಟ್ಟು ಸಂಖ್ಯೆ ನಿಧಾನವಾಗಿ ಇಳಿದರೂ, ಹೊಸದಾಗಿ ಪತ್ತೆಯಾಗುವ ಪ್ರಕರಣಗಳ ಪ್ರಮಾಣದಲ್ಲಿ ಯಥಾಸ್ಥಿತಿ ಮುಂದುವರಿದಿರುವುದು ಇಲ್ಲಿ ಇರುವ ಸಮಸ್ಯೆಯ ಚಿತ್ರಣವನ್ನು ನೀಡುತ್ತದೆ. ಇನ್ನು ಬಾಗಲಕೋಟೆಯ HIV ಪ್ರಮಾಣ ಏಕೆ ಹೆಚ್ಚಿದೆ ಎಂಬ ಪ್ರಶ್ನೆಗೆ ಪ್ರಮುಖ ಕಾರಣವಾಗಿ “ಅಂತರಾಜ್ಯ ವಲಸೆ” ಪ್ರಸ್ತಾಪವಾಗಿದೆ.
ವಿಶೇಷವಾಗಿ ಮಹಾರಾಷ್ಟ್ರ–ಕರ್ನಾಟಕ ಗಡಿಯಲ್ಲಿರುವ ಮುಧೋಳ ಮತ್ತು ಜಮಖಂಡಿ ತಾಲೂಕುಗಳಲ್ಲಿ ಪ್ರಕರಣಗಳು ಹೆಚ್ಚಾಗಿ ನೋಂದಾವಣೆಯಾಗಿವೆ. ಪ್ರತಿವರ್ಷ ಕಬ್ಬು ಕಟಾವುಗಾಗಿ ಮಹಾರಾಷ್ಟ್ರದಿಂದ ಬರುವ
ಸಾವಿರಾರು (HIV positivity rate rises in Bagalkot) ಕಾರ್ಮಿಕರ ತಾತ್ಕಾಲಿಕ ವಲಸೆ, ಅಸುರಕ್ಷಿತ ಲೈಂಗಿಕ ವರ್ತನೆಗಳು ಮತ್ತು ಆರೋಗ್ಯ ಜಾಗೃತಿಯ ಕೊರತೆ ಇವೆಲ್ಲಾ ಸೇರಿ ರೋಗ ಹರಡುವಿಕೆಗೆ ಮೂಲ ಕಾರಣವಾಗಿವೆ.
ಈ ಹಿಂದೆಯೇ ಈ ಪ್ರದೇಶಗಳಲ್ಲಿ ಸೋಂಕು ಹರಡುವಿಕೆಯ ಬಗ್ಗೆ ಅಲೆಯೇ ದಾಖಲೆ ಇದ್ದು, ಗಡಿಭಾಗ ಚಲನವಲನವು ಸೋಂಕು ನಿಯಂತ್ರಣದಲ್ಲಿ ಮತ್ತಷ್ಟು ಸವಾಲುಗಳನ್ನು ತಂದಿದೆ. ಸ್ಥಳೀಯರಿಗೂ, ವಲಸಿಗರಿಗೂ ಸಮಾನವಾಗಿ ತಲುಪುವ ಆರೋಗ್ಯ ಶಿಕ್ಷಣ ಮತ್ತು ರೀತ್ಯಾದ ಚಿಕಿತ್ಸಾ ಸೌಲಭ್ಯಗಳು ಇನ್ನೂ ಸಮರ್ಪಕವಾಗಿ ತಲುಪಿಲ್ಲ ಎನ್ನುವುದೇ ಪರಿಣಿತರ ಅಭಿಪ್ರಾಯವಾಗಿದೆ.
ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹಲವು ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ. ಶಾಲೆಗಳು–ಕಾಲೇಜುಗಳು, ಗ್ರಾಮೀಣ ಪ್ರದೇಶಗಳು, ಕಾರ್ಮಿಕ ವಸತಿ ಹಾಗೂ ನಗರ ಬಡಾವಣೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳು,
ಬೀದಿ ನಾಟಕಗಳು, ಕ್ಯಾಂಪೇನ್ಗಳು ಹಾಗೂ ಹೆಚ್ಚಿನ ಪ್ರಮಾಣದ ಟೆಸ್ಟಿಂಗ್ (Testing) ಅಭಿಯಾನಗಳನ್ನು ಮುಂದೂಡಲಾಗಿದೆ. ಸೋಂಕು ಪತ್ತೆಯಾದವರಿಗೆ ತಕ್ಷಣ ಚಿಕಿತ್ಸೆ, ನಿಯಮಿತ ಔಷಧಿ, ಕೌನ್ಸೆಲಿಂಗ್
(Counselling) ಹಾಗೂ ಪೌಷ್ಠಿಕ ನೆರವಿನ ವ್ಯವಸ್ಥೆಗಳೂ ಕಲ್ಪಿಸಲಾಗುತ್ತಿದೆ. ಆದರೆ ಈ ಎಲ್ಲ ಪ್ರಯತ್ನಗಳು ಸಮುದಾಯದ ನೈಜ ಸಹಕಾರವಿಲ್ಲದೆ ಸಾಕಾಗುವುದಿಲ್ಲ. HIV ಬಗ್ಗೆ ಇನ್ನೂ ಇರುವ ಸಾಮಾಜಿಕ ಲಜ್ಜೆ, ಭ್ರಾಂತಿ ಮತ್ತು ಭಯದಿಂದ ಹಲವರು ಪರೀಕ್ಷೆಗೆ ಮುಂದೆ ಬರದೇ ಇರುವುದರಿಂದ ನಿಯಂತ್ರಣ ಕ್ರಮಗಳಿಗೆ ಅಡ್ಡಿ ಉಂಟಾಗಿದೆ.
ಜನಸಾಮಾನ್ಯರಲ್ಲಿ ಮನೋಭಾವದ ಬದಲಾವಣೆ ಮತ್ತು ಆರೋಗ್ಯ ಜಾಗೃತಿ ಮೂಡಿಸುವುದು ಆರೋಗ್ಯ ಸಿಬ್ಬಂದಿಗೆ ದೊಡ್ಡ ಹೊಣೆಗಾರಿಕೆಯಾಗಿಯೇ ಉಳಿದಿದೆ. ಒಟ್ಟಿನಲ್ಲಿ ನೋಡಿದರೆ, ಬಾಗಲಕೋಟೆಯಲ್ಲಿ HIV
ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವುದು ಸಂತೋಷದ ಸಂಗತಿಯೇ ಆಗಿದ್ದರೂ, ಪಾಸಿಟಿವಿಟಿ ರೇಟ್ ಇನ್ನೂ ಮೊದಲ ಸ್ಥಾನದಲ್ಲಿರುವುದು ಜಿಲ್ಲೆಯ ಆರೋಗ್ಯ ಪರಿಸ್ಥಿತಿಯ ಗಂಭೀರತೆಯನ್ನು ತೋರುತ್ತದೆ.