ಬೆಂಗಳೂರು, ಜು. 06: ಕರ್ನಾಟಕದ ನೂತನ ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ಅವರನ್ನ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಕರ್ನಾಟಕ ಸೇರಿ 8 ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನ ನೇಮಕ ಮಾಡಲಾಗಿದ್ದು, ಕರ್ನಾಟಕ ನೂತನ ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ನೇಮಿಸಿ ರಾಷ್ಟ್ರಪತಿ ರಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ.
ರಾಜ್ಯಪಾಲ ವಜುಭಾಯಿ ವಾಲಾ ಅವರ ಅವಧಿ ಮುಗಿದ ಹಿನ್ನೆಲೆ ಕರ್ನಾಟಕ ನೂತನ ರಾಜ್ಯಪಾಲರಾಗಿ ತಾವರ್ ಚಂದ್ ಗೆಹ್ಲೋಟ್ ಅವರನ್ನ ನೇಮಕ ಮಾಡಲಾಗಿದೆ.
ಉಳಿದಂತೆ ಮಿಜೋರಾಂ- ಹರಿಬಾಬು ಕಂಭಾಪತಿ ಮಧ್ಯಪ್ರದೇಶ- ಮಂಗುಭಾಯಿ ಚಂಗುಭಾಯಿ ಪಟೇಲ್ ಹಿಮಾಚಲ ಪ್ರದೇಶ- ರಾಜೇಂದ್ರನ್ ವಿಶ್ವನಾಥ ಅರ್ಲೇಕರ್, ಲಗೋವಾ- ಪಿಎಸ್ ಶ್ರೀಧರನ್ ಪಿಳ್ಲೈ, ತ್ರಿಪುರಾ- ಸತ್ಯದೇವ್ ನಾರಾಯಣ್ ಆರ್ಯ, ಜಾರ್ಖಂಡ್- ರಮೇಶ್ ಬೈಸ್ ಹಾಗೂ ಹರಿಯಾಣ ರಾಜ್ಯಪಾಲರಾಗಿ ಬಂಡಾರು ದತ್ತಾತ್ರೇಯ ಅವರನ್ನು ನೇಮಕ ಮಾಡಲಾಗಿದೆ.