ಇಂದಿನಿಂದ ರಾಜ್ಯಾದ್ಯಂತ (household census begins today) ಮನೆಗಣತಿ ಆರಂಭ
ಸಿಬ್ಬಂದಿ ಕೊರತೆ, ತರಬೇತಿ ಗೊಂದಲದ ನಡುವೆ ಆರಂಭವಾದ ಮನೆಗಣತಿ ಪ್ರಕ್ರಿಯೆ
ಮನೆಗಳ ಸ್ಥಿತಿ, ಸೌಲಭ್ಯಗಳ ಬಗ್ಗೆ 33 ಪ್ರಶ್ನೆಗಳಿಗೆ ವಿವರ ಸಂಗ್ರಹಿಸಲಿರುವ ಗಣತಿದಾರರು
Bengaluru : ಕೇಂದ್ರ ಸರ್ಕಾರದ ‘ಜನಗಣತಿ–2027’ ಪ್ರಕ್ರಿಯೆಯ ಭಾಗವಾಗಿ ಕರ್ನಾಟಕದಲ್ಲಿ (household census begins today) ಏಪ್ರಿಲ್ 1ರಿಂದ ಆರಂಭವಾಗಿದ್ದ ಸ್ವಯಂ ಗಣತಿ ನಿನ್ನೆಗೆ (ಏಪ್ರಿಲ್ 15)ಅಂತ್ಯಗೊಂಡಿದೆ.
ಇದರ ಮುಂದುವರಿದ ಹಂತವಾಗಿ ಇಂದಿನಿಂದ (ಏಪ್ರಿಲ್ 16)ರಿಂದ ರಾಜ್ಯದಾದ್ಯಂತ ಮನೆಗಣತಿ ಹಾಗೂ ಮನೆಗಳ ಪಟ್ಟಿಯ ತಯಾರಿಕೆ ಕಾರ್ಯ ಪ್ರಾರಂಭವಾಗುತ್ತಿದೆ.
ಒಂದು ತಿಂಗಳ ಕಾಲ ನಡೆಯಲಿರುವ ಈ ಪ್ರಕ್ರಿಯೆಯಲ್ಲಿ ಗಣತಿದಾರರು ಮನೆಮನೆಗೆ ತೆರಳಿ ವಾಸಸ್ಥಳದ ಸ್ಥಿತಿ, ಮೂಲಸೌಕರ್ಯ, ಆಸ್ತಿ ವಿವರಗಳು ಸೇರಿದಂತೆ ಹಲವು

ಮಾಹಿತಿಗಳನ್ನು ಸಂಗ್ರಹಿಸಲಿದ್ದಾರೆ. ಇದು ದೇಶದ ಅಭಿವೃದ್ಧಿ ಯೋಜನೆಗಳಿಗೆ ಆಧಾರವಾಗುವ ಮಹತ್ವದ ಅಂಕಿಅಂಶಗಳನ್ನು ಒದಗಿಸುವ ಉದ್ದೇಶ ಹೊಂದಿದೆ.
ಈ ಬಾರಿ ಜನಗಣತಿಯ ಮೊದಲ ಹಂತವಾಗಿ “ಮನೆಗಳ ಪಟ್ಟಿ ಮತ್ತು ವಸತಿ ಗಣತಿ”ಗೆ ವಿಶೇಷ ಮಹತ್ವ (household census begins today) ನೀಡಲಾಗಿದೆ.
ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲೂ ಜಿಲ್ಲಾಡಳಿತಗಳ ಮೂಲಕ ಈ ಕಾರ್ಯ ನಡೆಯಲಿದ್ದು, ಸುಮಾರು 2 ಲಕ್ಷಕ್ಕೂ ಅಧಿಕ ಗಣತಿದಾರರನ್ನು ನಿಯೋಜಿಸಲಾಗಿದೆ.
ಏಪ್ರಿಲ್ 16ರಿಂದ ಮೇ 15ರವರೆಗೆ ನಡೆಯುವ ಈ ಕಾರ್ಯದಲ್ಲಿ ಮನೆಗಳ ಸಂಖ್ಯೆ, ಕಟ್ಟಡದ ಸ್ವರೂಪ, ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಶೌಚಾಲಯ ಸೌಲಭ್ಯ ಸೇರಿದಂತೆ ವಿವಿಧ ಮೂಲಭೂತ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತದೆ.
ಮೊದಲ ಹಂತದಲ್ಲಿ ಒಟ್ಟು 33 ಪ್ರಶ್ನೆಗಳ ಮೂಲಕ ಮಾಹಿತಿಯನ್ನು ಪಡೆಯಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನಗಣತಿಯ ವೇಳೆ ಸಂಗ್ರಹಿಸಲಾಗುವ ಎಲ್ಲಾ ವೈಯಕ್ತಿಕ ಮಾಹಿತಿಗೆ ಸಂಪೂರ್ಣ ಗೌಪ್ಯತೆ ನೀಡಲಾಗುತ್ತದೆ ಎಂಬ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ.
ಈ ಮಾಹಿತಿಯನ್ನು ಯಾವುದೇ ಕಾನೂನು ಪ್ರಕ್ರಿಯೆಗಳಲ್ಲಿ ಅಥವಾ ಮಾಹಿತಿ ಹಕ್ಕು ಕಾಯ್ದೆಯಡಿ ಹಂಚಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಹೀಗಾಗಿ ನಾಗರಿಕರು ಯಾವುದೇ ಭಯವಿಲ್ಲದೆ ಸರಿಯಾದ ಮತ್ತು ನಿಖರ ಮಾಹಿತಿಯನ್ನು ನೀಡಬೇಕು ಎಂದು ಮನವಿ ಮಾಡಲಾಗಿದೆ.
ಜನರ ಸಹಕಾರವೇ ಯಶಸ್ವಿ ಗಣತಿಗೆ ಮುಖ್ಯವಾದ ಅಂಶವಾಗಿರುವುದರಿಂದ ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ಪಾಲ್ಗೊಳ್ಳುವುದು ಅಗತ್ಯವಾಗಿದೆ.
ಇದರ ಮಧ್ಯೆ ಗಣತಿ ಕಾರ್ಯದ ಸಿದ್ಧತೆಗಳ ಬಗ್ಗೆ ಕೆಲವು ಅಸಮಾಧಾನಗಳೂ ವ್ಯಕ್ತವಾಗಿವೆ. ಗಣತಿದಾರರಿಗೆ ತರಬೇತಿ ನೀಡುವಲ್ಲಿ ಗೊಂದಲ ಉಂಟಾಗಿದೆ ಎಂದು
ಶಿಕ್ಷಕರು ಮತ್ತು ಸಿಬ್ಬಂದಿ ಆರೋಪಿಸಿದ್ದಾರೆ. ಅಲ್ಲದೆ, 58 ವರ್ಷ ಮೀರಿದವರನ್ನೂ ಈ ಕಾರ್ಯಕ್ಕೆ ನಿಯೋಜಿಸಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.
ತರಬೇತಿ ಸಭೆಗಳಿಗೆ ಹಾಜರಾದರೂ ಗೈರುಹಾಜರಿ ಎಂದು ದಾಖಲಿಸಿ ನೋಟಿಸ್ ನೀಡುತ್ತಿರುವ ಬಗ್ಗೆ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ವೇತನ ವಿಲೇವಾರಿ ವಿಳಂಬವಾಗಿರುವುದರಿಂದ ಆರ್ಥಿಕ ತೊಂದರೆ ಎದುರಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಇನ್ನೊಂದೆಡೆ, ಗಣತಿದಾರರನ್ನು ತಮ್ಮ ವಾಸಸ್ಥಳದ ಹತ್ತಿರ ನಿಯೋಜಿಸುವ ಬದಲು 25ರಿಂದ 50 ಕಿಲೋಮೀಟರ್ ದೂರದ ಪ್ರದೇಶಗಳಿಗೆ ಕಳುಹಿಸಲಾಗುತ್ತಿದೆ ಎಂಬ
ಆರೋಪವೂ ಕೇಳಿಬಂದಿದೆ. ಇದರಿಂದ ಕಾರ್ಯ ನಿರ್ವಹಣೆಯಲ್ಲಿ ಅನಾವಶ್ಯಕ ಅಡಚಣೆಗಳು ಎದುರಾಗುತ್ತಿವೆ ಎಂದು ಶಿಕ್ಷಕರು ತಿಳಿಸಿದ್ದಾರೆ.
ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಮುಂದೆ ಪ್ರತಿಭಟನೆ ನಡೆಸಿದರೂ ತಕ್ಷಣದ ಪರಿಹಾರ ಸಿಗದಿರುವುದು ಬೇಸರಕಾರಿಯಾಗಿದೆ.
ಆದಾಗ್ಯೂ, ಸರ್ಕಾರದ ಈ ಮಹತ್ವದ ಕಾರ್ಯ ಯಶಸ್ವಿಯಾಗಲು ಎಲ್ಲರೂ ಒಗ್ಗೂಡಿ ಸಹಕರಿಸಬೇಕೆಂಬ ನಿರೀಕ್ಷೆ ವ್ಯಕ್ತವಾಗಿದೆ.