• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಸೆ.17 ಹೈದ್ರಾಬಾದ್‌ ವಿಮೋಚನೆ ; ರಜಾಕರ ಹಾವಳಿ, ಪಟೇಲರ ದಿಟ್ಟತನ, ಪೊಲೀಸ್ ಕಾರ್ಯಾಚರಣೆ!

Mohan Shetty by Mohan Shetty
in ದೇಶ-ವಿದೇಶ
hyderabad
0
SHARES
2
VIEWS
Share on FacebookShare on Twitter

Hyderabad : 1947 ಆಗಸ್ಟ್ ೧೫ ರಂದು ಭಾರತ ಸ್ವತಂತ್ರವಾಯಿತು. ಆದರೆ ಹೈದ್ರಾಬಾದ್ (Hyderabad) ಸಂಸ್ಥಾನದ ಜನರ ಅಭಿಪ್ರಾಯವನ್ನು ವಿರೋಧಿಸಿದ ನಿಜಾಮ “ನಿಜಾಮ್ ರೇಡಿಯೋ”(Nizam Radio) ಮೂಲಕ ಹೈದ್ರಾಬಾದ್ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿದ.

Nizam

ಆ ಕಾಲದಲ್ಲಿ ವಿಶ್ವದ ಅತ್ಯಂತ ಶ್ರೀಮಂತರಲ್ಲಿ ಒಬ್ಬನಾಗಿದ್ದ ನಿಜಾಮ್ನ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಲು ಬ್ರಿಟಿಷ್(British) ಹಾಗು ಪಾಕಿಸ್ತಾನ(Pakistan) ಪ್ರತ್ಯಕ್ಷ ಮತ್ತು ಪರೋಕ್ಷ ಬೆಂಬಲವಿತ್ತವು.

ಪಾಕಿಸ್ತಾನವು ಹೈದರಾಬಾದ್ ಸ್ವತಂತ್ರ ರಾಷ್ಟ್ರವೆಂದು ಮಾನ್ಯ ಮಾಡಿದ ಮೊದಲ ದೇಶವಾಯಿತು. ಪರೋಕ್ಷವಾಗಿ ಬ್ರಿಟನ್‌ ಕೂಡಾ ಇದಕ್ಕೆ ನೆರವು ನೀಡಿತ್ತು.

ಆಗ ಹೈದರಾಬಾದ ಪ್ರಜೆಗಳು ಸ್ವಾಮಿ ರಾಮಾನಂದ ತೀರ್ಥರ ನೇತೃತ್ವದಲ್ಲಿ ಅಹಿಂಸಾತ್ಮಕ ಚಳುವಳಿ ಪ್ರಾರಂಭಿಸಿದ್ದರು. ಈ ಚಳುವಳಿಯನ್ನು ಹತ್ತಿಕ್ಕಲು ನಿಜಾಮ ಪೋಲೀಸ್ ಬಲವನ್ನು ಅತ್ಯಂತ ಕ್ರೂರವಾಗಿ ಬಳಸಿದ.

ಕಾಸಿಂ ರಜವಿ ಎಂಬ ಭಯೋತ್ಪಾದಕನ ನೇತ್ರತ್ವದಲ್ಲಿ ರಜಾಕರರು ಎಂಬ ಹೆಸರಿನ ಭಯೋತ್ಪಾದಕರ ಪಡೆಯನ್ನು ದಾಳಿಗಿಳಿಸಿದರು.

hyderabad

ಈ ರಜಾಕಾರರು ಸಾವಿರಾರು ಅಮಾಯಕರ ಮೇಲೆ ದಾಳಿ ಮಾಡಿ ಲೂಟಿ, ಅತ್ಯಾಚಾರ, ದೌರ್ಜನ್ಯ ನೆಡೆಸಿದರು. ಹಿಂದು ಸಮುದಾಯದ ಮೇಲೆ ದಾಳಿ ಮಾಡುವುದು,

ಬೆಳೆ ನಾಶ ಮಾಡುವುದು, ಮನೆಗಳನ್ನು ಹಾಗು ದೇವಸ್ಥಾನಗಳನ್ನು ಲೂಟಿ ಮಾಡುವುದು, ಹೆಂಗಸರ ಮೇಲೆ ಅತ್ಯಾಚಾರ, ಹಿಂಸಿಸಿ ಕೊಲ್ಲುವುದು.

`ಕಾಟೊ, ಲೂಟೊ ಔರ ಬಾಟೊ’ ಎನ್ನುವುದು ರಜಾಕಾರರಿಗೆ ಕಾಶೀಮ ರಜವಿಯ ಆದೇಶವಾಗಿತ್ತು. ೧೯೪೬-೪೮ರ ನಡುವೆ ರಜಾಕಾರರು ನಡೆಯಿಸಿದ ದೌರ್ಜನ್ಯಗಳ ಅಂಕಿ ಅಂಶಗಳು ಇಂತಿವೆ.

https://youtu.be/kbwSg9_8jrY ವೆಹಿಕಲ್ ಟೋಯಿಂಗ್ ಅವಶ್ಯಕತೆ ಇದೆಯಾ?

  • ರಾಯಚೂರು ಜಿಲ್ಲೆಯಲ್ಲಿ 95 ಗ್ರಾಮಗಳ ಮೇಲೆ ದಾಳಿ, 26 ಕೊಲೆ, 76 ಮಹಿಳೆಯರ ಮೇಲೆ ದೌರ್ಜನ್ಯ.
  • ಕಲಬುರ್ಗಿ ಜಿಲ್ಲೆಯಲ್ಲಿ 88 ಗ್ರಾಮಗಳ ಮೇಲೆ ದಾಳಿ, 43 ಕೊಲೆ, 33 ದರೋಡೆ ಹಾಗು 25 ಮಹಿಳೆಯರ ಮೇಲೆ ದೌರ್ಜನ್ಯ.
  • ಬೀದರ ಜಿಲ್ಲೆಯಲ್ಲಿ 178 ಗ್ರಾಮಗಳ ಮೇಲೆ ದಾಳಿ, 123 ಕೊಲೆ, 27 ಮಹಿಳೆಯರ ಮೇಲೆ ದೌರ್ಜನ್ಯ.

ಪಟೇಲರ ದಿಟ್ಟತನ : 1948 ಸಪ್ಟಂಬರ್ ೧೨ರಂದು ಪ್ರಧಾನಿ ಜವಾಹರಲಾಲ್‌ ನೆಹರೂ ಸಭೆಯನ್ನು ಕರೆದರು. ಸಭೆಯಲ್ಲಿ ಪ್ರಧಾನಿ ನೆಹರೂ, ಗೃಹಮಂತ್ರಿ ಪಟೇಲ, ಗೋಪಾಲಸ್ವಾಮಿ ಅಯ್ಯಂಗಾರ್, ರಕ್ಷಣಾ ಮಂತ್ರಿ ಬಲದೇವ ಸಿಂಗ, ಜನರಲ್ ಬುಕರ್, ಜನರಲ್ ಕರಿಯಪ್ಪ ಉಪಸ್ಥಿತರಿದ್ದರು.

ಇದನ್ನೂ ಓದಿ : https://vijayatimes.com/wife-got-to-know-his-husband-is-women-after-8-years/

ಜನರಲ್ ಬುಕರ್ ಸಶಸ್ತ್ರ ಕ್ರಮ ತೆಗೆದುಕೊಳ್ಳಲು ಒಪ್ಪಲಿಲ್ಲ. ಸಶಸ್ತ್ರ ಕ್ರಮ ತೆಗೆದುಕೊಳ್ಳುವುದೆ ಆದರೆ, ತಾವು ರಾಜೀನಾಮೆ ಕೊಡುವುದಾಗಿ ಹೇಳಿದರು.

ಆಗ ಪಟೇಲರು “ಜನರಲ್ ಬುಕರ್, ನೀವು ರಾಜೀನಾಮೆ ಕೊಡಬಹುದು. ಸಶಸ್ತ್ರ ಕ್ರಮ ನಾಳೆ ಪ್ರಾರಂಭವಾಗುವದು” ಎಂದು ಘೋಷಣೆ ಮಾಡಿದರು.

ನಂತರ ಸಪ್ಟಂಬರ್ 13 ರಂದು ಭಾರತೀಯ ಸೇನೆ ಹೈದ್ರಾಬಾದ್‌ ಮೇಲೆ ದಾಳಿ ಪ್ರಾರಂಭಿಸಿತು. ಸಪ್ಟಂಬರ್ 18 ರಂದು ಭಾರತೀಯ 18 ಸೇನೆಯ ಜನರಲ್ ಚೌಧರಿಗೆ ಹೈದರಾಬಾದ್‌ ಸೇನೆಯ ಮುಖಂಡ ಎಲ್ ಎದ್ರೂಸ್ ಶರಣಾಗತನಾದ. ಹೈದ್ರಾಬಾದ್ ಜನತೆಗೆ ವಿಮೋಚನೆ ದೊರೆಯಿತು.
  • ಮಹೇಶ್‌ ಪಿ.ಎಚ್
Tags: HyderabadHyderabad Liberation DayNizamRazakars

Related News

ಹಳಿ ತಪ್ಪಿರುವುದು ರೈಲು ಬೋಗಿಗಳಲ್ಲ, ನಮ್ಮ ಸರ್ಕಾರ ; ಮೋದಿ ವಿರುದ್ದ ಕಿಡಿಕಾರಿದ ನಟ ಕಿಶೋರ್
ದೇಶ-ವಿದೇಶ

ಹಳಿ ತಪ್ಪಿರುವುದು ರೈಲು ಬೋಗಿಗಳಲ್ಲ, ನಮ್ಮ ಸರ್ಕಾರ ; ಮೋದಿ ವಿರುದ್ದ ಕಿಡಿಕಾರಿದ ನಟ ಕಿಶೋರ್

June 6, 2023
ಭಾರತದ ಟಾಪ್ 10 ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಪಟ್ಟಿ ಇಲ್ಲಿದೆ
ದೇಶ-ವಿದೇಶ

ಭಾರತದ ಟಾಪ್ 10 ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಪಟ್ಟಿ ಇಲ್ಲಿದೆ

June 6, 2023
ghaziabad
ದೇಶ-ವಿದೇಶ

ಆನ್ಲೈನ್ ಗೇಮಿಂಗ್ ಅಪ್ಲಿಕೇಶನ್ ಮೂಲಕ ಮತಾಂತರ ಜಾಲ ಬೇಧಿಸಿದ ಯುಪಿ ಪೊಲೀಸರು

June 6, 2023
ಕಾನೂನು ಎಲ್ಲರಿಗೂ ಒಂದೇ, ತಪ್ಪಿತಸ್ಥರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಲಿದೆ: ಕುಸ್ತಿಪಟುಗಳಿಗೆ ಅಮಿತ್ ಶಾ ಭರವಸೆ
ದೇಶ-ವಿದೇಶ

ಕಾನೂನು ಎಲ್ಲರಿಗೂ ಒಂದೇ, ತಪ್ಪಿತಸ್ಥರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಲಿದೆ: ಕುಸ್ತಿಪಟುಗಳಿಗೆ ಅಮಿತ್ ಶಾ ಭರವಸೆ

June 6, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.