- ಅಕ್ರಮ ಗಣಿಗಾರಿಕೆ ಕೇಸ್ಗೆ ಸಂಬಂಧಿಸಿದಂತೆ ಶಾಸಕ ಜನಾರ್ದನ ರೆಡ್ಡಿ ಅಪರಾಧ ಎಂದ ಸಿಬಿಐ ಕೋರ್ಟ್.
- ಕೇಸ್ಗೆ ಸಂಬಂಧಿಸಿದಂತೆ ಬರೋಬ್ಬರಿ 13 ವರ್ಷಗಳಿಂದ ನಡೆದ ಸುದೀರ್ಘ ವಿಚಾರಣೆ.
- 7 ವರ್ಷ ಶಿಕ್ಷೆ ಪ್ರಕಟ; ಮತ್ತೆ ಜೈಲು ಪಾಲಾಗಲಿರುವ ಗಂಗಾವತಿ ಶಾಸಕ
ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ (Illegal mining Janardhana Reddy to jail) ಕ್ಷೇತ್ರದ ಬಿಜೆಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ (BJP MLA Gali Janardhana Reddy) ಅವರಿಗೆ ಸಿಬಿಐ ಕೋರ್ಟ್ ಶಾಕ್ ನೀಡಿದೆ. ಹೊಸ ಪಕ್ಷ ಕಲ್ಯಾಣ ರಾಜ್ಯ (Welfare State) ಪ್ರಗತಿ ಪಕ್ಷ ಕಟ್ಟಿ ಗೆದ್ದು ಬೀಗಿದ್ದ ಶಾಸಕ ಮರಳಿ ಬಿಜೆಪಿ ಸೇರ್ಪಡೆಯಾಗಿದ್ದರು. ಇದೀಗ ಅವರಿಗೆ ಪ್ರಕರಣವೊಂದರಲ್ಲಿ ಸಿಬಿಐ ಕೋರ್ಟ್ ಜೈಲು (CBI court jail) ಶಿಕ್ಷೆ ಪ್ರಕಟಿಸಿದೆ.
ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆ ಇದೀಗ ಪ್ರಕಟವಾಗಿದೆ. ಸಿಬಿಐ (CBI) ಆದೇಶ ಮಾಡಿದೆ.ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲವನ್ನು ಸೃಷ್ಟಿ ಮಾಡಿದ್ದ ಗಾಲಿ ಜನಾರ್ದನ ರೆಡ್ಡಿ ಅಕ್ರಮ ಅದಿರು ಗಣಿಗಾರಿಕೆ ಪ್ರಕರಣವು (Mining case) ಇದೀಗ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದದಿದೆ.
ಈ ಪ್ರಕರಣದಲ್ಲಿ ಇದೀಗ ಮಾಜಿ ಸಚಿವ (Former Minister) ಹಾಗೂ ಹಾಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಬರೋಬ್ಬರಿ ಒಂದಲ್ಲ.. ಎರಡಲ್ಲ 7 ವರ್ಷಗಳ ಜೈಲು ಶಿಕ್ಷೆಯನ್ನು ಸಿಬಿಐ ವಿಶೇಷ ಹೈಕೋರ್ಟ್ (Special High Court) ವಿಧಿಸಿ ಆದೇಶ ಮಾಡಿದೆ.
ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 13 ವರ್ಷಗಳಿಂದ ಸುದೀರ್ಘ (13 years) ವಿಚಾರಣೆ ನಡೆದಿದ್ದು ಅಂತಿಮವಾಗಿ ಮೇ 6ರಂದು ಈ ಕೇಸ್ಗೆ ಸಂಬಂಧಿಸಿದಂತೆ 7 ವರ್ಷ ಜೈಲು ಶಿಕ್ಷೆ (7 years in prison) ಪ್ರಕಟಿಸಿದೆ.ಇನ್ನು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ (Chief Minister B.S. Yediyurappa) ಅವರು ಇದ್ದ ಸಂದರ್ಭದಲ್ಲಿ ಭಾರೀ ಅಕ್ರಮ ಅದಿರು ಗಣಿಗಾರಿಕೆ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿತ್ತು.

ಇದೇ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಅವರಿಗೆ ಜೈಲು ಶಿಕ್ಷೆ ಸಹ (prison sentence) ವಿಧಿಸಲಾಗಿತ್ತು. ಈ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಅವರ ಹೆಸರು ಹಾಗೂ ಆಂಧ್ರ ಪ್ರದೇಶದ ಪ್ರಭಾವಿಗಳ ಹೆಸರು ಸಹ ಕೇಳಿ ಬಂದ ಮೇಲೆ ಬಿಜೆಪಿಯು ಕೇಂದ್ರ (BJP Centre) ಮಟ್ಟದಲ್ಲಿ ಮುಜುಗರಕ್ಕೆ ಒಳಗಾಗಿತ್ತು. ಜೈಲು ಶಿಕ್ಷೆ (Imprisonment) ಹಾಗೂ ಜಡ್ಜ್ಗೆ ಆಮಿಷದಂತಹ ಗಂಭೀರ ಆರೋಪ ಕೇಳಿ ಬಂದ ಮೇಲೆ ಜನಾರ್ದನ ರೆಡ್ಡಿ ಅವರಿಂದ ಬಿಜೆಪಿ ಅಂತರ (BJP distance) ಕಾಪಾಡಿಕೊಂಡಿತ್ತು.
ಇದೇ ವರ್ಷ ರಾಜ್ಯದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ (Assembly elections) ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೊಸ ಪಕ್ಷವನ್ನು ಸ್ಥಾಪನೆ ಮಾಡಿದ್ದ ಅವರು ಶಾಸಕರಾಗಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು (Successful) . ಶಾಸಕರಾಗಿ ಆಯ್ಕೆಯಾದ ಕೆಲವೇ ತಿಂಗಳುಗಳಲ್ಲಿ ಅವರು ಬಿಜೆಪಿಗೆ (BJP) ಸೇರ್ಪಡೆಯಾಗಿದ್ದು.
ಬಿಜೆಪಿಯ ರಾಜ್ಯಾಧ್ಯಕ್ಷ ಹುದ್ದೆಗೂ ಅವರ ಹೆಸರು ಕೇಳಿ ಬಂದಿತ್ತು. ಈ ವಿಷಯದ ಚರ್ಚೆ (Discussion of the topic) ನಡೆಯುತ್ತಿರುವಾಗಲೇ ಸಿಬಿಐ ಅವರಿಗೆ ದೊಡ್ಡ ಶಾಕ್ (Big shock) ನೀಡಿದೆ.ಇದೀಗ ಜನಾರ್ದನ ರೆಡ್ಡಿಗೆ 7 ವರ್ಷ ಜೈಲು ಶಿಕ್ಷೆ ಪ್ರಕಟವಾಗಿದೆ. 3 ವರ್ಷಕ್ಕಿಂತ ಹೆಚ್ಚು ಶಿಕ್ಷೆ ವಿಧಿಸಲಾಗಿರುವುದರಿಂದ (Heavy punishment) ಅವರು ಜೈಲು ಸೇರುವುದು ಫಿಕ್ಸ್ (Jail is a fix) ಅಂತಲೇ ಹೇಳಲಾಗುತ್ತಿದೆ.
ಇದನ್ನು ಓದಿ : http://ಬಿರು ಬೇಸಿಗೆಯಲ್ಲಿ ಕೂಲ್ ಡ್ರಿಂಕ್ಸ್ ಕುಡಿಯೋ ಮುನ್ನ ಹುಷಾರ್ : ಶರಬತ್ ಹಾಗೂ ಜಿಲೇಬಿಯಲ್ಲಿ ಕ್ಯಾನ್ಸರ್ ಕಾರಕ ಕೆಮಿಕಲ್
ಜಾಮೀನಿಗಾಗಿ ಹೈದರಾಬಾದ್ನ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಬೇಕು (Application should be submitted) ಎನ್ನುವ ಷರತ್ತನ್ನು ವಿಧಿಸಲಾಗಿದೆ. ಹೈಕೋರ್ಟ್ (Illegal mining Janardhana Reddy to jail) ಜಾಮೀನು ನೀಡುವವರೆಗೆ ಜೈಲಿನಲ್ಲಿರಬೇಕಾಗುತ್ತದೆ. ಇದೀಗ ಈ ಪ್ರಕರಣದಲ್ಲಿ ಅವರು ಶಾಸಕ ಸ್ಥಾನವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.