- ಚಿಕ್ಕಪೇಟೆಯಲ್ಲಿ ಇನ್ನೂ ಮುಗಿಯದ ವೈಟ್ ಟಾಪಿಂಗ್ ಕಾಮಗಾರಿ
- ಸಗಟು ಮಾರುಕಟ್ಟೆ ಅಸ್ತವ್ಯಸ್ತ, ವ್ಯಾಪಾರಸ್ಥರಿಗೆ ನಷ್ಟ (Businessmen cursing BBMP)
- ಗಡುವು ಪೂರ್ಣಗೊಂಡಿದ್ದರೂ ಕಾಮಗಾರಿ ಇನ್ನೂ ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿ
Bengaluru: ರಾಜಧಾನಿಯ ಹದಗೆಟ್ಟ ರಸ್ತೆಗಳಲ್ಲಿನ ಪ್ರಯಾಣ ತ್ರಾಸದಾಯಕವಾಗಿರುವಾಗಲೇ ಬಿಬಿಎಂಪಿ(BBMP) ಹಲವು ರಸ್ತೆಗಳಲ್ಲಿ ವೈಟ್ ಟಾಪಿಂಗ್(White topping) ಕಾಮಗಾರಿಯನ್ನು ಕೈಗೊಂಡಿತ್ತು
ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನ (Bangalore) ಅತಿದೊಡ್ಡ ಸಗಟು ಮಾರುಕಟ್ಟೆಗಳಲ್ಲಿ(Wholesale market) ಒಂದಾಗಿರುವ ಚಿಕ್ಕಪೇಟೆಯಲ್ಲಿ(Chikpet) ವೈಟ್ ಟಾಪಿಂಗ್ ಕಾಮಗಾರಿಗೆ ನೀಡಲಾಗಿದ್ದ ಗುಡುವು ಪೂರ್ಣಗೊಂಡಿದ್ದರೂ,
ಕಾಮಗಾರಿ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ. ಮುಂದುವರೆದ ಕಾಮಗಾರಿಯಿಂದಾಗಿ ಮಾರುಕಟ್ಟೆ ಅಸ್ತವ್ಯಸ್ತಗೊಂಡಿದ್ದು, ನಷ್ಟದಿಂದಾಗಿ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.
ಚಿಕ್ಕಪೇಟೆ ಮೆಟ್ರೋ (Metro) ನಿಲ್ದಾಣದ ಬಳಿ ಕೇವಲ ಶೇ.10ರಷ್ಟು ವೈಟ್-ಟಾಪಿಂಗ್ ಕೆಲಸ ಮಾತ್ರ ಉಳಿದಿದೆ ಎಂದು ಬಿಬಿಎಂಪಿ ಹೇಳುತ್ತಿದೆ.
ಆದರೆ, ಬಾಕಿ ಉಳಿದಿರುವ ಕಾಮಗಾರಿ ಸಾಕಷ್ಟು ಸಮಸ್ಯೆಗಳನ್ನುಂಟು ಮಾಡುತ್ತಿದೆ ಎಂದು ವ್ಯಾಪಾರಸ್ಥರು ದೂರಿದ್ದಾರೆ.

ಮೆಟ್ರೋ ಜಂಕ್ಷನ್(Metro Junction) ಬಳಿ ಕಾಮಕಾರಿ ಕೆಲಸ ಬಾಕಿಯಿದ್ದು, ಅಲ್ಲಿ ಗಂಟೆಗೆ ಸಾವಿರಾರು ಜನರು ಮತ್ತು ವಾಹನಗಳು ಹಾದು ಹೋಗುತ್ತವೆ.
ಅಪೂರ್ಣ ಕೆಲಸ ಮತ್ತು ಬ್ಯಾರಿಕೇಡ್ಗಳು (Barricade) ಈ ಪ್ರದೇಶದಲ್ಲಿ ಸಂಚಾರ ದಟ್ಟಣೆ (Traffic congestion) ಸಮಸ್ಯೆಯನ್ನು ಹೆಚ್ಚಿಸಿದೆ. ಕೆಲಸ ಪುನರಾರಂಭವಾಗುವ ಮೊದಲು ಮಳೆ ಪ್ರಾರಂಭವಾದರೆ, ಪ್ರವಾಹ (flood) ಪರಿಸ್ಥಿತಿ ಎದುರಾಗುತ್ತದೆ.
ಅಲ್ಲದೆ, ರಸ್ತೆ ಪರಿಸ್ಥಿತಿಗಳು ಕೂಡ ಹಾಳಾಗುತ್ತದೆ ಎಂದು ಸ್ಥಳೀಯರು (natives) ಹೇಳಿದ್ದಾರೆ. ಅಷ್ಟೇ ಅಲ್ಲದೆ ಕಾಮಗಾರಿ ಕೆಲಸಗಳಿಂದಾಗಿ ಈಗಾಗಲೇ ಗ್ರಾಹಕರ (customers) ಸಂಖ್ಯೆ ಕಡಿಮೆಯಾಗಿದೆ.
ಬಿಬಿಎಂಪಿ ಇನ್ನೂ ತಡ ಮಾಡಿದರೆ, ಮತ್ತಷ್ಟು ಸಮಸ್ಯೆಗಳು ಎದುರಾಗುತ್ತವೆ ಎಂದು ವ್ಯಾಪಾರಸ್ಥರೊಬ್ಬರು ಬೇಸರವನ್ನು ಹೊರಹಾಕಿದ್ದಾರೆ.
ಇನ್ನು ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು (Students) ಇಲ್ಲಿ ಸಂಚರಿಸಲು ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಆ ಮೊದಲು ಮೊದಲು, ಈ ವೃತ್ತವನ್ನು ದಾಟಲು ಕೇವಲ 5 ರಿಂದ 7 ನಿಮಿಷ ಸಮಯ ಬೇಕಾಗುತ್ತಿತ್ತು.
ಆದರೆ, ರಸ್ತೆ ಕಾಮಗಾರಿಯಿಂದಾಗಿ 15 ರಿಂದ 20 ನಿಮಿಷಗಳ ಕಾಲ ಬೇಕಾಗುತ್ತಿದೆ. ಇಲ್ಲಿ ನಡೆಯುತ್ತಿರುವ ವೈಟ್ ಟ್ಯಾಪಿಂಗ್ ಕಾಮಗಾರಿ ಕೆಲಸಗಳಿಂದಾಗಿ ಆಟೋಗಳೂ (Auto) ಕೂಡ ಇಲ್ಲಿಗೆ ಬರಲು ಬಯಸುವುದಿಲ್ಲ ಎಂದು ವಿದ್ಯಾರ್ಥಿಗಳು ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೆಲಸ ವಿಳಂಬವಾಗಿದೆ ಎಂದು ಬಿಬಿಎಂಪಿ ಎಂಜಿನಿಯರ್ (BBMP Engineer) ಹೇಳಿದ್ದು,
ಕಳಪೆ ಯೋಜನೆ (Poor planning) ಮತ್ತು ಸಮನ್ವಯದ ಕೊರತೆಯೇ(Lack of coordination) ನಿಜವಾದ ಕಾರಣ ಎಂದು ಸ್ಥಳೀಯ ವ್ಯಾಪಾರಿಗಳು ದೂರಿದ್ದಾರೆ.
ಇದನ್ನು ಓದಿ :ಮಾವು ಬೆಲೆ ತೀವ್ರ ಕುಸಿತ: ರಾಜ್ಯದ ರೈತರ ನೆರವು ನೀಡುವಂತೆ ಪ್ರಧಾನಿಗೆ ಮನವಿ
ಕಳಪೆ ರಸ್ತೆ ಸಂಪರ್ಕದಿಂದಾಗಿ ಗ್ರಾಹಕರು ಈ ಪ್ರದೇಶಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. (Businessmen cursing BBMP) ಇದರಿಂದ ನಮ್ಮ ವ್ಯವಹಾರಗಳಿಗೆ ತೀವ್ರ ಹೊಡೆತ ಬಿದ್ದಿದೆ ಎಂದು ಅಲ್ಲಿನ ವ್ಯಾಪಾರಸ್ಥರು ಬಿಬಿಎಂಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.