ಹೊಸದಿಲ್ಲಿ: ಮುಂಬರುವ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಿದ್ಧತೆ ನಡೆಯುತ್ತಿದೆ. ಅಂದಿನ ಸಮಾರಂಭಕ್ಕೆ ಟೋಕಿಯೋ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಭಾರತೀಯ ಆಟಗಾರರನ್ನು ವಿಶೇಷ ಆಹ್ವಾನಿತರಾಗಿ ಕೆಂಪು ಕೋಟೆಗೆ ಆಹ್ವಾನಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕೆಂಪು ಕೋಟೆಯಲ್ಲಿ ಪ್ರಧಾನಿಯವರು ಎಲ್ಲರನ್ನು ವೈಯಕ್ತಿಕವಾಗಿ ಭೇಟಿಯಾಗಲಿದ್ದು, ಸಂವಹನ ನಡೆಸುತ್ತಾರೆ. ಭಾರತದ 228 ಸದಸ್ಯರ ತಂಡವು 119 ಆಟಗಾರರನ್ನ ಒಳಗೊಂಡ ಒಲಿಂಪಿಕ್ಸ್ನಲ್ಲಿ ಭಾಗವಹಿಸುತ್ತಿದ್ದು, ಭಾರತೀಯ ಒಲಿಂಪಿಕ್ ತಂಡದಲ್ಲಿ ಪಿವಿ ಸಿಂಧು, ಮನು ಭಾಕರ್, ಮೇರಿ ಕೋಮ್, ಮೀರಾಬಾಯಿ ಚಾನು, ವಿನೇಶ್ ಫೋಗಟ್, ದೀಪಿಕಾ ಕುಮಾರ್ ಸೇರಿದ್ದಾರೆ.
ಇನ್ನು ಒಲಿಂಪಿಕ್ಸ್ನಲ್ಲಿ ಆಡುವ ಭಾರತೀಯ ಆಟಗಾರರಿಗೆ ಪ್ರಮುಖ ಸಂದೇಶವನ್ನ ನೀಡಿರುವ ಪ್ರಧಾನಿ ಮೋದಿ, ಸರಿಯಾದ ಪ್ರತಿಭೆಯನ್ನ ಪ್ರೋತ್ಸಾಹಿಸಿದಾಗ ಭಾರತೀಯ ಆಟಗಾರರು ಅಂತಹ ಉತ್ಸಾಹವನ್ನ ಪಡೆಯುತ್ತಾರೆ ಎಂದು ಹೇಳಿದ್ದರು.
There is a rising spirit of self-confidence in India and we are seeing glimpses of this at #Tokyo2020, where our athletes are putting up spirited performances and making 130 crore Indians proud. pic.twitter.com/Djcyhx8eey
— Narendra Modi (@narendramodi) August 3, 2021