- ಕ್ಷಿಪಣಿ ಹಾರಿಸಲಿಲ್ಲ, ಬಾಂಬ್ ಬೀಳಿಸಲಿಲ್ಲ ಆದರೂ ಪಾಕ್ ಗಡಗಡ
- ಪಾಕಿಸ್ತಾನದ ಕೃಷಿ, ಜಲ ವಿದ್ಯುತ್, ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ದೊಡ್ಡ ಪೆಟ್ಟು ತಂದಿದೆ.
- ಅಂತರರಾಷ್ಟ್ರೀಯ ಹಣಕಾಸು ನಿಧಿ ಮೂಲಕ (India launches proxy war against Pak) ಪಾಕಿಸ್ತಾನಕ್ಕೆ ದೊರೆಯುವ ಆರ್ಥಿಕ ನೆರವನ್ನು ಸ್ಥಗಿತಗೊಳಿಸಲು ಭಾರತ ಪ್ರಯತ್ನ
ಪಹಲ್ಗಾಮ್ನ ನರಮೇಧಕ್ಕೆ (Pahalgam massacre) ಪಾಕ್ ಉಗ್ರರೇ ನೇರಕಾರಣ ಎಂಬುದು ಗೊತ್ತಾದ ಮೇಲೂ ಭಾರತ (India) ಮುನಿಸು ಹೊರಹಾಕಿದರೂ, ಪಾಕ್ ಮೇಲೆ ತಕ್ಷಣಕ್ಕೆ ಮುಗಿ ಬೀಳಲಿಲ್ಲ.ಆದರೆ, ಪಾಕ್ (Pak) ಈ 14 ದಿನಗಳಲ್ಲಿ ಸರಿಯಾಗಿ ನಿದ್ದೆಯನ್ನೇ ಮಾಡಿಲ್ಲ.
ಭಾರತ ಎಲ್ಲಿ ತನ್ನ ಮೇಲೆ ಯುದ್ಧ ಸಾರುತ್ತದೋ, ಎಂದುಕೊಂಡು ಮೊದಲಿನಿಂದಲೂ ತಾನು ಯುದ್ಧಕ್ಕೆ ರೆಡಿ (Ready for battle) , ತನ್ನ ಬಳಿ ಅಣು ಬಾಂಬ್ ಇದೆ, ಮುಂತಾದ ಹೇಳಿಕೆ ನೀಡುತ್ತಲೇ ಬಂತು. ಇಷ್ಟಾದ ಮೇಲೂ ಭಾರತವೇನು ಸಾಂಪ್ರದಾಯಿಕ ಯುದ್ಧಕ್ಕೆ (India conventional war) ಇಳಿಯಲಿಲ್ಲ. ಪಾಕ್ ಮೇಲೆ ಕ್ಷಿಪಣಿ ಹಾರಿಸಲಿಲ್ಲ, ಬಾಂಬನ್ನೂ ಬೀಳಿಸಲಿಲ್ಲ.
ನೇರ ಸಂಗ್ರಾಮದ ಬದಲು ಪರೋಕ್ಷವಾಗಿ ಆರ್ಥಿಕ, ಜಲ ಹಾಗೂ ರಾಜತಾಂತ್ರಿಕ ಸಮರದ (Diplomatic warfare) ಮೂಲಕ ಶತ್ರು ದೇಶದ ಬೆನ್ನೆಲುಬು ಮುರಿಯುವ ಚಾಣಕ್ಯ ತಂತ್ರ ಅನುಸರಿಸಿದೆ.
ಉಗ್ರ ಪೋಷಕ ಪಾಕ್ ವಿರುದ್ಧ ಭಾರತ ಮೊದಲು ಸಾರಿದ್ದೇ ಜಲಸಮರ. 65 ವರ್ಷಗಳ ಹಿಂದೆ ರೂಪುಗೊಂಡಿದ್ದ ಸಿಂಧು (Indus River was formed) ಜಲ ಒಪ್ಪಂದವನ್ನು ಅಮಾನತುಗೊಳಿಸಿ, ನೆರೆಯ ದೇಶದ ಜೀವನಾಡಿಯಾದ ನೀರನ್ನು ಸ್ಥಗಿತಗೊಳಿಸಿತು. ಚೆನಾಬ್, ಸಿಂಧು, ಝೀಲಂ (Chenab, Indus, Jhelum) ನದಿಗಳ ನೀರನ್ನು ನಿಲ್ಲಿಸುವ ಮೂಲಕ ಜಲಘಾತ ನೀಡಿದೆ.
ಸಿಂಧು ಕಣಿವೆ (Indus Valley) ನೀರು ಸ್ಥಗಿತದಿಂದ ಪಾಕಿಸ್ತಾನದ ಕೃಷಿ, ಜಲ ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆಗೆ ದೊಡ್ಡ ಪೆಟ್ಟು ಬಿದ್ದಿದೆ.ಸಿಂಧು ನದಿ ನೀರು ಅವಲಂಬಿಸಿದ್ದ ಶೇ.80ರಷ್ಟು ಕೃಷಿ ಭೂಮಿ (Agricultural land) ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಪಾಕಿಸ್ತಾನದ ಜಿಡಿಪಿಗೆ ಶೇ.25ರಷ್ಟು ಕೊಡುಗೆ ನೀಡುತ್ತಿದ್ದ ಕೃಷಿ ವಲಯ ಇನ್ನು ನೀರಿನ ಅಭಾವದಿಂದ ನಷ್ಟ ಅನುಭವಿಸಬಹುದು.
ಆಹಾರದ ಅಭದ್ರತೆ ಎದುರಾಗಬಹುದು. ನೀರಿಲ್ಲದೆ ಜಲವಿದ್ಯುತ್ ಘಟಕಗಳು ಸ್ಥಗಿತಗೊಂಡು ದೇಶದ ಅರ್ಧ (Half of the country) ಭಾಗ ಕಗ್ಗತ್ತಲೆಯ ಕೂಪಕ್ಕೆ ಬೀಳಬಹುದು.

ಪಾಕ್ ಜತೆಗೆ ರಸ್ತೆ, ವಾಯು, ಜಲ (air, water) ಮಾರ್ಗದ ಮೂಲಕ ನಡೆಯುತ್ತಿದ್ದ ಪ್ರತ್ಯಕ್ಷ ಹಾಗೂ ಪರೋಕ್ಷ ವ್ಯಾಪಾರ ನಿಷೇಧಿಸಲಾಗಿದೆ. ಎಲ್ಲಾ ರೀತಿಯ ರಫ್ತು ಆಮದು (Export Import) ನಿರ್ಬಂಧಿಸುವ ಮೂಲಕ ಪರೋಕ್ಷ ಸಮರ ಸಾರಲಾಗಿದೆ. ಭಾರತ- ಪಾಕಿಸ್ತಾನ ನಡುವೆ ವಾರ್ಷಿಕವಾಗಿ 2.41 ಶತಕೋಟಿ ಡಾಲರ್ ವ್ಯವಹಾರ (Dollar business) ನಡೆಯುತ್ತಿತ್ತು.
ಆದರೆ, ಪದೇಪದೆ ಉಗ್ರ ದಾಳಿಯ ಪರಿಣಾಮ ನೆರೆಯ ದೇಶದ ಜತೆಗಿನ ವ್ಯವಹಾರವನ್ನು ಭಾರತ ಕಡಿತಗೊಳಿಸಿದೆ. ಕಳೆದ 2 ವರ್ಷಗಳಲ್ಲಂತೂ ಆಮದು-ರಫ್ತು ಪ್ರಮಾಣ (Import-export volume) ಗಣನೀಯವಾಗಿ ಕುಸಿದಿದೆ. ಇದರಿಂದಾಗಿ ಪಾಕ್ ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ನಲುಗುತ್ತಿದೆ. ಸದ್ಯದಲ್ಲೇ, ವಸ್ತುಗಳ ಬೆಲೆ ಗಗನ (price skyrocketed) ಮುಟ್ಟಲಿದೆ. ಇದು ಜನಾಕ್ರೋಶಕ್ಕೆ ಕಾರಣವಾಗಲಿದೆ.
ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ (Internationally) ಪಾಕಿಸ್ತಾನಕ್ಕೆ ದೊರೆಯುತ್ತಿದ್ದ ಆರ್ಥಿಕ ನೆರವು ಸ್ಥಗಿತಗೊಳಿಸಲು ಭಾರತ ಮುಂದಾಗಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಮೂಲಕ ಸಾಲ ಪಡೆಯುವುದನ್ನು ತಡೆಯಲು ಪ್ರಯತ್ನಿಸಲಾಗಿದೆ. ಜಾಗತಿಕ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲವನ್ನು ಅಭಿವೃದ್ಧಿಗೆ ಬಳಸದೆ ಉಗ್ರರ ಪೋಷಣೆಗೆ (Feed the extremists) ಬಳಸುತ್ತಿರುವ ಪುರಾವೆ ಮಂಡಿಸಿ ಸಾಲ ಸೌಲಭ್ಯಕ್ಕೆ ಕತ್ತರಿ ಹಾಕುವುದು ಭಾರತದ ಉದ್ದೇಶ.
ಇದನ್ನು ಓದಿ : http://ಗೋವಾ ಶಿರ್ಗಾಂವ್ ದೇವಸ್ಥಾನದಲ್ಲಿ ಭೀಕರ ಕಾಲ್ತುಳಿತ: 6 ಸಾ*, 30 ಕ್ಕೂ ಹೆಚ್ಚು ಜನರಿಗೆ ಗಾಯ
ಇದೇ 9ರಂದು ನಡೆಯುವ ಐಎಂಎಫ್ ಕಾರ್ಯಕಾರಿ (IMF Executive) ಮಂಡಳಿ ಸಭೆಯಲ್ಲಿ (India launches proxy war against Pak) ಪಾಕಿಸ್ತಾನಕ್ಕೆ ಸಾಲ ನೀಡದಂತೆ ಒತ್ತಡ ಹೆಚ್ಚಿಸಲು ಭಾರತ ನಿರ್ಧರಿಸಿದೆ. ಪಾಕ್ಗೆ ಇದು ಜಾಗತಿಕ ಮುಜುಗರ. ಐಎಂಎಫ್ ಸಾಲ ಪಡೆಯುವುದು ಕಗ್ಗಂಟಾಗಲಿದೆ. ಉಗ್ರಜಾಲಕ್ಕೆ ಫಂಡಿಂಗ್ ಕಷ್ಟವಾಗಲಿದೆ.