• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಪಾಕಿಸ್ತಾನದ ವಿರುದ್ಧ ಪರೋಕ್ಷ ಯುದ್ಧ ಆರಂಭಿಸಿದ ಭಾರತ: ಜಲ, ವಾಣಿಜ್ಯ, ಸಾಗರ, ಗಡಿ ಸೇರಿದಂತೆ ಹಲವು ರಂಗಗಳಲ್ಲಿ ನಿರ್ಬಂಧ

Neha M by Neha M
in ಪ್ರಮುಖ ಸುದ್ದಿ, ರಾಜಕೀಯ, ವಿಜಯ ಟೈಮ್ಸ್‌, ವೈರಲ್ ಸುದ್ದಿ
ಪಾಕಿಸ್ತಾನದ ವಿರುದ್ಧ ಪರೋಕ್ಷ ಯುದ್ಧ ಆರಂಭಿಸಿದ ಭಾರತ: ಜಲ, ವಾಣಿಜ್ಯ, ಸಾಗರ, ಗಡಿ ಸೇರಿದಂತೆ ಹಲವು ರಂಗಗಳಲ್ಲಿ ನಿರ್ಬಂಧ
0
SHARES
9
VIEWS
Share on FacebookShare on Twitter
  • ಕ್ಷಿಪಣಿ ಹಾರಿಸಲಿಲ್ಲ, ಬಾಂಬ್‌ ಬೀಳಿಸಲಿಲ್ಲ ಆದರೂ ಪಾಕ್ ಗಡಗಡ
  • ಪಾಕಿಸ್ತಾನದ ಕೃಷಿ, ಜಲ ವಿದ್ಯುತ್, ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ದೊಡ್ಡ ಪೆಟ್ಟು ತಂದಿದೆ.
  • ಅಂತರರಾಷ್ಟ್ರೀಯ ಹಣಕಾಸು ನಿಧಿ ಮೂಲಕ (India launches proxy war against Pak) ಪಾಕಿಸ್ತಾನಕ್ಕೆ ದೊರೆಯುವ ಆರ್ಥಿಕ ನೆರವನ್ನು ಸ್ಥಗಿತಗೊಳಿಸಲು ಭಾರತ ಪ್ರಯತ್ನ

ಪಹಲ್ಗಾಮ್‌ನ ನರಮೇಧಕ್ಕೆ (Pahalgam massacre) ಪಾಕ್‌ ಉಗ್ರರೇ ನೇರಕಾರಣ ಎಂಬುದು ಗೊತ್ತಾದ ಮೇಲೂ ಭಾರತ (India) ಮುನಿಸು ಹೊರಹಾಕಿದರೂ, ಪಾಕ್‌ ಮೇಲೆ ತಕ್ಷಣಕ್ಕೆ ಮುಗಿ ಬೀಳಲಿಲ್ಲ.ಆದರೆ, ಪಾಕ್‌ (Pak) ಈ 14 ದಿನಗಳಲ್ಲಿ ಸರಿಯಾಗಿ ನಿದ್ದೆಯನ್ನೇ ಮಾಡಿಲ್ಲ.

ಭಾರತ ಎಲ್ಲಿ ತನ್ನ ಮೇಲೆ ಯುದ್ಧ ಸಾರುತ್ತದೋ, ಎಂದುಕೊಂಡು ಮೊದಲಿನಿಂದಲೂ ತಾನು ಯುದ್ಧಕ್ಕೆ ರೆಡಿ (Ready for battle) , ತನ್ನ ಬಳಿ ಅಣು ಬಾಂಬ್‌ ಇದೆ, ಮುಂತಾದ ಹೇಳಿಕೆ ನೀಡುತ್ತಲೇ ಬಂತು. ಇಷ್ಟಾದ ಮೇಲೂ ಭಾರತವೇನು ಸಾಂಪ್ರದಾಯಿಕ ಯುದ್ಧಕ್ಕೆ (India conventional war) ಇಳಿಯಲಿಲ್ಲ. ಪಾಕ್‌ ಮೇಲೆ ಕ್ಷಿಪಣಿ ಹಾರಿಸಲಿಲ್ಲ, ಬಾಂಬನ್ನೂ ಬೀಳಿಸಲಿಲ್ಲ.

ನೇರ ಸಂಗ್ರಾಮದ ಬದಲು ಪರೋಕ್ಷವಾಗಿ ಆರ್ಥಿಕ, ಜಲ ಹಾಗೂ ರಾಜತಾಂತ್ರಿಕ ಸಮರದ (Diplomatic warfare) ಮೂಲಕ ಶತ್ರು ದೇಶದ ಬೆನ್ನೆಲುಬು ಮುರಿಯುವ ಚಾಣಕ್ಯ ತಂತ್ರ ಅನುಸರಿಸಿದೆ.

ಉಗ್ರ ಪೋಷಕ ಪಾಕ್‌ ವಿರುದ್ಧ ಭಾರತ ಮೊದಲು ಸಾರಿದ್ದೇ ಜಲಸಮರ. 65 ವರ್ಷಗಳ ಹಿಂದೆ ರೂಪುಗೊಂಡಿದ್ದ ಸಿಂಧು (Indus River was formed) ಜಲ ಒಪ್ಪಂದವನ್ನು ಅಮಾನತುಗೊಳಿಸಿ, ನೆರೆಯ ದೇಶದ ಜೀವನಾಡಿಯಾದ ನೀರನ್ನು ಸ್ಥಗಿತಗೊಳಿಸಿತು. ಚೆನಾಬ್‌, ಸಿಂಧು, ಝೀಲಂ (Chenab, Indus, Jhelum) ನದಿಗಳ ನೀರನ್ನು ನಿಲ್ಲಿಸುವ ಮೂಲಕ ಜಲಘಾತ ನೀಡಿದೆ.

ಸಿಂಧು ಕಣಿವೆ (Indus Valley) ನೀರು ಸ್ಥಗಿತದಿಂದ ಪಾಕಿಸ್ತಾನದ ಕೃಷಿ, ಜಲ ವಿದ್ಯುತ್‌, ಕುಡಿಯುವ ನೀರಿನ ವ್ಯವಸ್ಥೆಗೆ ದೊಡ್ಡ ಪೆಟ್ಟು ಬಿದ್ದಿದೆ.ಸಿಂಧು ನದಿ ನೀರು ಅವಲಂಬಿಸಿದ್ದ ಶೇ.80ರಷ್ಟು ಕೃಷಿ ಭೂಮಿ (Agricultural land) ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಪಾಕಿಸ್ತಾನದ ಜಿಡಿಪಿಗೆ ಶೇ.25ರಷ್ಟು ಕೊಡುಗೆ ನೀಡುತ್ತಿದ್ದ ಕೃಷಿ ವಲಯ ಇನ್ನು ನೀರಿನ ಅಭಾವದಿಂದ ನಷ್ಟ ಅನುಭವಿಸಬಹುದು.

ಆಹಾರದ ಅಭದ್ರತೆ ಎದುರಾಗಬಹುದು. ನೀರಿಲ್ಲದೆ ಜಲವಿದ್ಯುತ್‌ ಘಟಕಗಳು ಸ್ಥಗಿತಗೊಂಡು ದೇಶದ ಅರ್ಧ (Half of the country) ಭಾಗ ಕಗ್ಗತ್ತಲೆಯ ಕೂಪಕ್ಕೆ ಬೀಳಬಹುದು.

ಪಾಕ್‌ ಜತೆಗೆ ರಸ್ತೆ, ವಾಯು, ಜಲ (air, water) ಮಾರ್ಗದ ಮೂಲಕ ನಡೆಯುತ್ತಿದ್ದ ಪ್ರತ್ಯಕ್ಷ ಹಾಗೂ ಪರೋಕ್ಷ ವ್ಯಾಪಾರ ನಿಷೇಧಿಸಲಾಗಿದೆ. ಎಲ್ಲಾ ರೀತಿಯ ರಫ್ತು ಆಮದು (Export Import) ನಿರ್ಬಂಧಿಸುವ ಮೂಲಕ ಪರೋಕ್ಷ ಸಮರ ಸಾರಲಾಗಿದೆ. ಭಾರತ- ಪಾಕಿಸ್ತಾನ ನಡುವೆ ವಾರ್ಷಿಕವಾಗಿ 2.41 ಶತಕೋಟಿ ಡಾಲರ್‌ ವ್ಯವಹಾರ (Dollar business) ನಡೆಯುತ್ತಿತ್ತು.

ಆದರೆ, ಪದೇಪದೆ ಉಗ್ರ ದಾಳಿಯ ಪರಿಣಾಮ ನೆರೆಯ ದೇಶದ ಜತೆಗಿನ ವ್ಯವಹಾರವನ್ನು ಭಾರತ ಕಡಿತಗೊಳಿಸಿದೆ. ಕಳೆದ 2 ವರ್ಷಗಳಲ್ಲಂತೂ ಆಮದು-ರಫ್ತು ಪ್ರಮಾಣ (Import-export volume) ಗಣನೀಯವಾಗಿ ಕುಸಿದಿದೆ. ಇದರಿಂದಾಗಿ ಪಾಕ್‌ ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ನಲುಗುತ್ತಿದೆ. ಸದ್ಯದಲ್ಲೇ, ವಸ್ತುಗಳ ಬೆಲೆ ಗಗನ (price skyrocketed) ಮುಟ್ಟಲಿದೆ. ಇದು ಜನಾಕ್ರೋಶಕ್ಕೆ ಕಾರಣವಾಗಲಿದೆ.

ಇನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ (Internationally) ಪಾಕಿಸ್ತಾನಕ್ಕೆ ದೊರೆಯುತ್ತಿದ್ದ ಆರ್ಥಿಕ ನೆರವು ಸ್ಥಗಿತಗೊಳಿಸಲು ಭಾರತ ಮುಂದಾಗಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಮೂಲಕ ಸಾಲ ಪಡೆಯುವುದನ್ನು ತಡೆಯಲು ಪ್ರಯತ್ನಿಸಲಾಗಿದೆ. ಜಾಗತಿಕ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲವನ್ನು ಅಭಿವೃದ್ಧಿಗೆ ಬಳಸದೆ ಉಗ್ರರ ಪೋಷಣೆಗೆ (Feed the extremists) ಬಳಸುತ್ತಿರುವ ಪುರಾವೆ ಮಂಡಿಸಿ ಸಾಲ ಸೌಲಭ್ಯಕ್ಕೆ ಕತ್ತರಿ ಹಾಕುವುದು ಭಾರತದ ಉದ್ದೇಶ.

ಇದನ್ನು ಓದಿ :  http://ಗೋವಾ ಶಿರ್ಗಾಂವ್ ದೇವಸ್ಥಾನದಲ್ಲಿ ಭೀಕರ ಕಾಲ್ತುಳಿತ: 6 ಸಾ*, 30 ಕ್ಕೂ ಹೆಚ್ಚು ಜನರಿಗೆ ಗಾಯ

ಇದೇ 9ರಂದು ನಡೆಯುವ ಐಎಂಎಫ್‌ ಕಾರ್ಯಕಾರಿ (IMF Executive) ಮಂಡಳಿ ಸಭೆಯಲ್ಲಿ (India launches proxy war against Pak) ಪಾಕಿಸ್ತಾನಕ್ಕೆ ಸಾಲ ನೀಡದಂತೆ ಒತ್ತಡ ಹೆಚ್ಚಿಸಲು ಭಾರತ ನಿರ್ಧರಿಸಿದೆ. ಪಾಕ್‌ಗೆ ಇದು ಜಾಗತಿಕ ಮುಜುಗರ. ಐಎಂಎಫ್‌ ಸಾಲ ಪಡೆಯುವುದು ಕಗ್ಗಂಟಾಗಲಿದೆ. ಉಗ್ರಜಾಲಕ್ಕೆ ಫಂಡಿಂಗ್‌ ಕಷ್ಟವಾಗಲಿದೆ.

Tags: Diplomatic warfareInternationallyPahalgam massacre

Related News

ದೋಹಾ ಡೈಮಂಡ್‌ನಲ್ಲಿ ಇತಿಹಾಸ ಬರೆದ ನೀರಜ್ ಚೋಪ್ರಾ: ಬೆಳ್ಳಿ ಗೆದ್ದ ಚಿನ್ನದ ಹುಡುಗ
Sports

ದೋಹಾ ಡೈಮಂಡ್‌ನಲ್ಲಿ ಇತಿಹಾಸ ಬರೆದ ನೀರಜ್ ಚೋಪ್ರಾ: ಬೆಳ್ಳಿ ಗೆದ್ದ ಚಿನ್ನದ ಹುಡುಗ

May 17, 2025
ನಮ್ಮ ವಾಯುನೆಲೆಗಳನ್ನು ಭಾರತದ ಕ್ಷಿಪಣಿಗಳು ಉಡಾಯಿಸಿದೆ: ಕೊನೆಗೂ ಸತ್ಯ ಒಪ್ಪಿಕೊಂಡ ಪಾಕಿಸ್ತಾನ
ದೇಶ-ವಿದೇಶ

ನಮ್ಮ ವಾಯುನೆಲೆಗಳನ್ನು ಭಾರತದ ಕ್ಷಿಪಣಿಗಳು ಉಡಾಯಿಸಿದೆ: ಕೊನೆಗೂ ಸತ್ಯ ಒಪ್ಪಿಕೊಂಡ ಪಾಕಿಸ್ತಾನ

May 17, 2025
ಪೂಜೆಗಷ್ಟೇ ಅಲ್ಲ, ಆರೋಗ್ಯಕ್ಕೂ ಒಳ್ಳೆಯದು ಕರ್ಪೂರ
ಆರೋಗ್ಯ

ಪೂಜೆಗಷ್ಟೇ ಅಲ್ಲ, ಆರೋಗ್ಯಕ್ಕೂ ಒಳ್ಳೆಯದು ಕರ್ಪೂರ

May 16, 2025
ಇನ್ಮುಂದೆ ಗ್ರೇಟರ್‌ ಅಲ್ಲ, ಕ್ವಾರ್ಟರ್‌ ಬೆಂಗಳೂರು : ಆರ್‌ ಅಶೋಕ್ ವ್ಯಂಗ್ಯ
ಪ್ರಮುಖ ಸುದ್ದಿ

ಇನ್ಮುಂದೆ ಗ್ರೇಟರ್‌ ಅಲ್ಲ, ಕ್ವಾರ್ಟರ್‌ ಬೆಂಗಳೂರು : ಆರ್‌ ಅಶೋಕ್ ವ್ಯಂಗ್ಯ

May 16, 2025

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.