- ಪಾಕಿಸ್ತಾನಕ್ಕೆ ತಕ್ಕ ಎದಿರೇಟು
- ಪಾಕ್ನಲ್ಲಿನ ಉಗ್ರ ನೆಲೆಗಳು ಉಡೀಸ್ (India repels Pakistan attack)
- ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ಮುಂದುವರಿಕೆ
New delhi: ಪಹಲ್ಗಾಮ್ ಉಗ್ರ ದಾಳಿಗೆ ಪ್ರತಿಯಾಗಿ ಭಾರತೀಯ ಸೇನಾ (Indian Army) ಪಡೆಗಳು ಬುಧವಾರ ನಡೆಸಿದ ‘ಆಪರೇಷನ್ ಸಿಂಧೂರ’ (Operation Sindoori) ಕಾರ್ಯಾಚರಣೆಗೆ ಕುದ್ದು ಹೋಗಿರುವ ಪಾಕಿಸ್ತಾನ ಪ್ರತೀಕಾರಕ್ಕೆ (Pakistan to retaliate) ಮುಂದಾಗಿದೆ.
ಇಂದು ಚೀನಾ ನಿರ್ಮಿತ ಎರಡು ಸಣ್ಣ ಪ್ರಮಾಣದ ಕ್ಷಿಪಣಿಗಳನ್ನು ಭಾರತದ ಮೇಲೆ ಹಾರಿಬಿಟ್ಟಿದೆ. ಇವುಗಳನ್ನು ಭಾರತೀಯ ವಾಯು ರಕ್ಷಣಾ(Indian Air Defence) ವ್ಯವಸ್ಥೆಯು ಹೊಡೆದು ಹಾಕಿದೆ. ಗಡಿ ಭಾಗದಲ್ಲಿರುವ ಪಂಜಾಬ್ನ ಹಳ್ಳಿಯೊಂದರ (village in Punjab) ಮೇಲಿಂದ ಹಾರಿಬಂದ ಪಾಕಿಸ್ತಾನದ ಸ್ಪೋಟಕಗಳನ್ನು ಭಾರತದ ವಾಯು ರಕ್ಷಣಾ ವ್ಯವಸ್ಥೆಯು ಯಶಸ್ವಿಯಾಗಿ ತಡೆ ಹಿಡಿದಿದೆ.
ಕ್ಷಿಪಣಿಯನ್ನು ಆಕಾಶದಲ್ಲಿಯೇ (missile is in the sky) ನಿಷ್ಕ್ರಿಯಗೊಳಿಸಿ, ಅವುಗಳನ್ನು ಹೊಡೆದುರುಳಿಸಿದೆ.ಇದರ ಚಿತ್ರಗಳು ಮತ್ತು ದೃಶ್ಯಗಳು ಮಾಧ್ಯಮಗಳಲ್ಲಿ ವರದಿಯಾಗಿದೆ. ಪತನಗೊಳಿಸಲಾದ ಕ್ಷಿಪಣಿಗಳು ಚೀನಾ ನಿರ್ಮಿತ ಎಂದು ಗುರುತಿಸಲಾಗಿದೆ. ಬುಧವಾರವಷ್ಟೇ ಭಾರತದ ದಾಳಿಗೆ ಪ್ರತೀಕಾರ (Retaliation for India’s attack) ತೀರಿಸಿಕೊಳ್ಳುವುದಾಗಿ ಪಾಕಿಸ್ತಾನ ಹೇಳಿತ್ತು. ಅದರ ಬೆನ್ನಲ್ಲೇ, ವಿಫಲ ಕ್ಷಿಪಣಿ ದಾಳಿ ನಡೆಸಿದೆ.
ಇನ್ನು ಬುಧವಾರ ಮಧ್ಯರಾತ್ರಿ ಭಾರತೀಯ ಸೇನಾಪಡೆಗಳು ಕಾರ್ಯಾಚರಣೆ ನಡೆಸಿ, ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ (occupied Kashmir) ಒಂಬತ್ತು ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ (Missile attack) ನಡೆಸಿ ಧ್ವಂಸ ಮಾಡಿದ್ದವು.
ಇವೆಲ್ಲವೂ ಭಾರತದಲ್ಲಿ ಹಲವು ಉಗ್ರ ದಾಳಿಗೆ ಕಾರಣವಾಗಿದ್ದ ಜೈಶ್ – ಎ – ಮೊಹಮ್ಮದ್ ಮತ್ತು ಲಷ್ಕರ್ – ಎ – ತೈಬಾ ಸಂಘಟನೆಗಳ ಪ್ರಧಾನ ಕಚೇರಿಗಳಾಗಿದ್ದವು. ಭಾರತ ನಡೆಸಿದ ಕ್ಷಿಪಣಿ ದಾಳಿಯಲ್ಲಿ 31 ಜನರು ಸಾ*ನ್ನಪ್ಪಿದ್ದಾರೆ. 57 ಜನರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಸೇನೆ (Pakistan Army) ಹೇಳಿಕೊಂಡಿದೆ.
ಆದರೆ, ಇದರ ಸಂಖ್ಯೆ ನೂರಕ್ಕೂ ಹೆಚ್ಚಿದೆ ಎಂದು ಭಾರತದ ಸೇನೆ (Indian Army) ತಿಳಿಸಿದೆ. ಜೈಷ್ ಎ ಮೊಹಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮತ್ತು ಪುಲ್ವಾಮಾ ದಾಳಿಯ ರೂವಾರಿ (Attacker) ಮಸೂದ್ ಅಜರ್ನ ಪತ್ನಿ, ಸಹೋದರಿ ಸೇರಿ 10 ಮಂದಿ ಸಾವನ್ನಪ್ಪಿದ್ದಾರೆ.

ಭಾರತದ ದಾಳಿಗೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನಿ ಪಡೆಗಳು ಜಮ್ಮು -ಕಾಶ್ಮೀರದ ಕುಪ್ವಾರಾ ಜಿಲ್ಲೆಯ (Kupwara district of Jammu and Kashmir) ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಭಾರೀ ಶೆಲ್ ದಾಳಿ ನಡೆಸಿದೆ. ಇದರಲ್ಲಿ ಓರ್ವ ಯೋಧ (warrior) ಸೇರಿ, 13 ಮಂದಿ ಸಾವಿಗೀಡಾಗಿದ್ದಾರೆ. 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯು ತಕ್ಕ ಪ್ರತ್ಯುತ್ತರ ನೀಡಿದೆ.
ಸತತ 15 ದಿನಗಳಿಂದ ಪಾಕಿಸ್ತಾನ ಕದನ ವಿರಾಮ (Armistice) ಉಲ್ಲಂಘಿಸುತ್ತಲೇ ಬಂದಿದೆ. ಗಡಿಭಾಗದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್ ಸೇರಿದಂತೆ ಗಡಿಭಾಗಗಳಲ್ಲಿ ಭಾರತೀಯ ಸೇನೆಯನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ನಡೆಸಿದ ದಾಳಿಯನ್ನು ಹಿಮ್ಮೆಟ್ಟಿಸಿರುವ ಭಾರತೀಯ (Indian who retreated) ಸೇನೆ, ಪಾಕಿಸ್ತಾನದ ೫೦ಕ್ಕೂ ಹೆಚ್ಚು ಡ್ರೋಣ್ಗಳನ್ನು ಹೊಡೆದುರುಳಿಸಿದೆ.
ಇದನ್ನು ಓದಿ : http://ಆಪರೇಷನ್ ಸಿಂಧೂರ ಮಾಹಿತಿಗೆ ನಾರಿ ಶಕ್ತಿ: ಗಮನ ಸೆಳೆದಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ
ಕ್ಷಿಪಣಿಗಳು ಮತ್ತು ಡ್ರೋನ್ಗಳನ್ನು ಬಳಸಿಕೊಂಡು ದೇಶದ ಉತ್ತರ ಮತ್ತು ಪಶ್ಚಿಮದ ೧೫ ನಗರಗಳಲ್ಲಿ (15 cities in the North and West) ಹಲವಾರು ಮಿಲಿಟರಿ ಗುರಿಗಳನ್ನು ಹೊಡೆಯಲು ಪಾಕಿಸ್ತಾನ ಪಡೆಗಳು ಮಾಡಿದ ಪ್ರಯತ್ನಗಳನ್ನು ವಿಫಲಗೊಳಿಸಲಾಗಿದೆ. ದೇಶದ ಹಲವಾರು ಸ್ಥಳಗಳಲ್ಲಿ ಪಾಕಿಸ್ತಾನದ ವಾಯು ರಕ್ಷಣಾ ಜಾಲವನ್ನು ಗುರಿಯಾಗಿಸಿಕೊಂಡಿದ್ದೇವೆ ಪ್ರತಿದಾಳಿ ನಡೆಸಲಾಗಿದೆ (India repels Pakistan attack) ಎಂದು ಭಾರತೀಯ ಸೇನೆ (Indian army) ಹೇಳಿದೆ.