- ಹಾಂಗ್ಕಾಂಗ್ ವಿರುದ್ಧ 3-0 ಭರ್ಜರಿ (india won squash world cup) ಜಯ
- ಮೊದಲ ಏಷ್ಯನ್ ಚಾಂಪಿಯನ್ ಎಂಬ ದಾಖಲೆ
- 2023ರ ಕಂಚಿನ ನಂತರ 2025ರಲ್ಲಿ ವಿಶ್ವಕಪ್ ಚಿನ್ನ ಗೆದ್ದ ಭಾರತ
ಚೆನ್ನೈನ ಎಕ್ಸ್ಪ್ರೆಸ್ ಅವೆನ್ಯೂ ಮಾಲ್ನಲ್ಲಿ ನಡೆದ (india won squash world cup) ಸ್ಕ್ವಾಷ್ ವಿಶ್ವಕಪ್ ಫೈನಲ್ (Squash World Cup Final) ಪಂದ್ಯದಲ್ಲಿ ಭಾರತ ತಂಡ ಹಾಂಗ್ಕಾಂಗ್ ವಿರುದ್ಧ 3-0 ಅಂತರದ ಭರ್ಜರಿ ಜಯ ಸಾಧಿಸಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ.
ಇದು ಕೇವಲ ಒಂದು ಪಂದ್ಯ ಗೆಲುವಲ್ಲ, ಭಾರತೀಯ ಸ್ಕ್ವಾಷ್ ಇತಿಹಾಸದಲ್ಲೇ ಮೊದಲ ವಿಶ್ವಕಪ್ ಪ್ರಶಸ್ತಿ ಎಂಬ ಕಾರಣಕ್ಕೆ ಈ ಸಾಧನೆ ವಿಶೇಷ ಸ್ಥಾನ ಪಡೆದುಕೊಂಡಿದೆ.

ಅದರಲ್ಲೂ, ವಿಶ್ವಕಪ್ ಫೈನಲ್ನಲ್ಲಿ ಮೊದಲ ಬಾರಿಗೆ ಎರಡು ಏಷ್ಯನ್ ರಾಷ್ಟ್ರಗಳು ಮುಖಾಮುಖಿಯಾದುದು ಈ ಗೆಲುವಿಗೆ ಇನ್ನಷ್ಟು ಘನತೆ ನೀಡಿದೆ.
2023ರಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದ ಭಾರತ, ಈ ಬಾರಿ ಚಿನ್ನದ ಪದಕ ಗೆದ್ದು (india won squash world cup) ಜಾಗತಿಕ ಮಟ್ಟದಲ್ಲಿ ತನ್ನ ಶಕ್ತಿಯನ್ನು ಸಾಬೀತುಪಡಿಸಿದೆ.
ಈ ವಿಶ್ವಕಪ್ ಗೆಲುವಿನೊಂದಿಗೆ ಭಾರತ, ಆಸ್ಟ್ರೇಲಿಯಾ (Australia) , ಇಂಗ್ಲೆಂಡ್ ಮತ್ತು ಈಜಿಪ್ಟ್ ನಂತರ ಸ್ಕ್ವಾಷ್ ವಿಶ್ವಕಪ್ ಗೆದ್ದ ನಾಲ್ಕನೇ ರಾಷ್ಟ್ರವಾಗಿದ್ದು, ಮೊದಲ ಏಷ್ಯನ್ ರಾಷ್ಟ್ರ ಎಂಬ ಗೌರವವನ್ನೂ ಪಡೆದುಕೊಂಡಿದೆ.
ವೆಲವನ್, ಜೋಶ್ನಾ ಚಿನ್ನಪ್ಪ, ಅಭಯ್ ಸಿಂಗ್ (Abhay Singh) ಮತ್ತು ಅನಹತ್ ಸಿಂಗ್ (Anahat Singh) ಅವರನ್ನು ಒಳಗೊಂಡ ಭಾರತೀಯ ತಂಡ, ಒಗ್ಗಟ್ಟಿನ ಆಟ, ತಾಳ್ಮೆ ಮತ್ತು ತಂತ್ರಜ್ಞಾನದ ಮೂಲಕ ಈ ಐತಿಹಾಸಿಕ ಸಾಧನೆಯನ್ನು ಸಾಧ್ಯವನ್ನಾಗಿಸಿದೆ.
ಹಾಂಗ್ಕಾಂಗ್ ತಂಡವೂ ಗಮನಾರ್ಹ ಪ್ರದರ್ಶನ ನೀಡಿದ್ದು, ಎರಡು ವರ್ಷಗಳ ಹಿಂದೆ ಎಂಟನೇ ಸ್ಥಾನದಲ್ಲಿದ್ದ ತಂಡ ಈ ಬಾರಿ ರನ್ನರ್-ಅಪ್ ಆಗಿ ಹೊರಹೊಮ್ಮಿರುವುದು ಅವರ ಬೆಳವಣಿಗೆಗೆ ಸಾಕ್ಷಿಯಾಗಿದೆ.
ಈ ಫೈನಲ್ನಲ್ಲಿ ಭಾರತದ ಗೆಲುವಿಗೆ ಭದ್ರ ಅಡಿಪಾಯ ಹಾಕಿದವರು ಅನುಭವಸಂಪನ್ನ ಆಟಗಾರ್ತಿ ಜೋಶ್ನಾ ಚಿನ್ನಪ್ಪ.
ವಿಶ್ವ ಶ್ರೇಯಾಂಕದಲ್ಲಿ ತಮ್ಮಿಗಿಂತ ಬಹಳ ಮೇಲಿರುವ ಕಾಯಿಲೀ ಅವರನ್ನು ಎದುರಿಸಿದ ಜೋಶ್ನಾ, 23 ನಿಮಿಷಗಳ ಕಾಲ ನಡೆದ ಕಠಿಣ ಹೋರಾಟದಲ್ಲಿ ಅದ್ಭುತ ಆಟ ಪ್ರದರ್ಶಿಸಿದರು.
ಮೊದಲ ಗೇಮ್ನಲ್ಲಿ ಗೆಲುವು ಸಾಧಿಸಿದ ಬಳಿಕ, ಎರಡನೇ ಗೇಮ್ನಲ್ಲಿ ಹಿನ್ನಡೆ ಅನುಭವಿಸಿದರೂ, ಮೂರನೇ ಗೇಮ್ನಲ್ಲಿ ತಾಳ್ಮೆಯಿಂದ ಆಟ ಆಡಿದರು.
ನಾಲ್ಕನೇ ಗೇಮ್ನಲ್ಲಿ ಸಂಪೂರ್ಣ ಹಿಡಿತ ಸಾಧಿಸಿ ಎದುರಾಳಿಗೆ ಯಾವುದೇ ಅವಕಾಶ ನೀಡದೇ ಗೆಲುವು ಸಾಧಿಸಿದರು.
ಈ ಪ್ರದರ್ಶನವನ್ನು ಜೋಶ್ನಾ ತಮ್ಮ ವೃತ್ತಿ ಜೀವನದ ಟಾಪ್-5 ಪ್ರದರ್ಶನಗಳಲ್ಲಿ ಒಂದೆಂದು ವಿವರಿಸಿ ಸಂತಸ ವ್ಯಕ್ತಪಡಿಸಿದರು.
ಪುರುಷರ ವಿಭಾಗದಲ್ಲಿ ಅಭಯ್ ಸಿಂಗ್ ತಮ್ಮ ಮೆರುಗಿನ ಆಟದಿಂದ ಗಮನ ಸೆಳೆದರು.
ಹಾಲಿ ಏಷ್ಯನ್ ಚಾಂಪಿಯನ್ ಅಲೆಕ್ಸ್ ಲಾವ್ ವಿರುದ್ಧ ಏಕಪಕ್ಷೀಯ ಹೋರಾಟ ನಡೆಸಿದ ಅಭಯ್, ಆರಂಭದಿಂದಲೇ ಪಂದ್ಯವನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡರು.
ಯಾವುದೇ ಗೇಮ್ನಲ್ಲೂ ಎದುರಾಳಿಗೆ ಮೇಲ್ಚಲನೆ ನೀಡದೆ, ನೇರ ಗೇಮ್ಗಳಲ್ಲಿ ಗೆಲುವು ಸಾಧಿಸುವ ಮೂಲಕ ಭಾರತದ ಚಿನ್ನದ ಕನಸಿಗೆ ಮತ್ತಷ್ಟು ಬಲ ತುಂಬಿದರು.
ಇನ್ನು ಕಿರಿಯ ಆಟಗಾರ್ತಿ ಅನಹತ್ ಸಿಂಗ್ ಕೇವಲ 16 ನಿಮಿಷಗಳಲ್ಲಿ ಟೊಮೆಟೊ ಹೊ ಅವರನ್ನು ಸೋಲಿಸಿ ಭಾರತದ ಗೆಲುವನ್ನು ಅಧಿಕೃತವಾಗಿ ಖಚಿತಪಡಿಸಿದರು.
ಅವರ ವೇಗ, ಆತ್ಮವಿಶ್ವಾಸ ಮತ್ತು ಆಕ್ರಮಣಕಾರಿ ಆಟ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.
ಸೆಮಿಫೈನಲ್ನಲ್ಲಿ (Semifinal) ಬಲಿಷ್ಠ ಈಜಿಪ್ಟ್ ತಂಡವನ್ನು ಮಣಿಸಿದ ನಂತರ, ಫೈನಲ್ನಲ್ಲಿ ಹಾಂಗ್ಕಾಂಗ್ (Hang Kong) ವಿರುದ್ಧ ಆಡಿದ ಪಂದ್ಯ ಒತ್ತಡದಿಂದ ಕೂಡಿತ್ತು.
ಆದರೆ ಆ ಒತ್ತಡವನ್ನು ಧೈರ್ಯ ಮತ್ತು ಅನುಭವದೊಂದಿಗೆ ಎದುರಿಸಿದ ಭಾರತೀಯ ಆಟಗಾರರು, ದೇಶಕ್ಕೆ ಐತಿಹಾಸಿಕ ಜಯ ತಂದುಕೊಟ್ಟರು.
ತಂಡದ ಕೋಚ್ ಹರಿಂದರ್ ಸಿಂಗ್ (Harinder Singh) ಅವರು, ಆಟಗಾರರು ಮಾನಸಿಕವಾಗಿ ಬಹಳ ಬಲಿಷ್ಠರಾಗಿದ್ದು, ಕಠಿಣ ಸಂದರ್ಭಗಳಲ್ಲೂ ಶಾಂತತೆಯಿಂದ ಆಟ ಆಡಿದದ್ದೇ ಈ ಯಶಸ್ಸಿನ ಪ್ರಮುಖ ಕಾರಣ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಈ ಚಿನ್ನದ ಪದಕ ಕೇವಲ ಒಂದು ಟ್ರೋಫಿಯಲ್ಲ, ಭಾರತದಲ್ಲಿ ಸ್ಕ್ವಾಷ್ ಕ್ರೀಡೆಗೆ ಹೊಸ ಉತ್ಸಾಹ, ಹೊಸ ಭರವಸೆ ಮತ್ತು ಮುಂದಿನ ತಲೆಮಾರಿಗೆ ಪ್ರೇರಣೆಯ ಸಂಕೇತವಾಗಿ ಉಳಿಯಲಿದೆ.
ಇದನ್ನು ಓದಿ : ಬೆಂಗಳೂರು ಜನತೆಗೆ ಜಲಮಂಡಳಿಯಿಂದ ಗುಡ್ ನ್ಯೂಸ್: ಜನವರಿಯಿಂದ ಒನ್ ಟೈಮ್ ಸೆಟಲ್ಮೆಂಟ್ ಜಾರಿ, ಫೈನ್ ಸಂಪೂರ್ಣ ಮನ್ನಾ