- ಪಿಒಕೆ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ಪ್ರತೀಕಾರದ ದಾಳಿ
- ಕಾಶ್ಮೀರದಲ್ಲಿನ ಉಗ್ರಗಾಮಿ ಶಿಬಿರಗಳ ಮೇಲೆ ರಾತ್ರಿ ಮಿಂಚಿನ ದಾಳಿ
- ಸಿಂಧೂರ ಅಳಿಸಿ, ಮೋದಿಗೆ ಹೋಗಿ ಹೇಳು ಎಂದಿದ್ದವರಿಗೆ ಪ್ರಧಾನಿ ಮೋದಿ ಪ್ರತ್ಯುತ್ತರ
New delhi: ಪಹಲ್ಗಾಮ್ ದಾಳಿಗೆ (Pahalgam attack) ಪ್ರತೀಕಾರವಾಗಿ ಭಾರತದ ಸಶಸ್ತ್ರ ಪಡೆಗಳು ಬುಧವಾರ (Indian Army gives befitting reply to pak) ಅಂದರೆ ಇಂದು ನಸುಕಿನ ವೇಳೆ ಆಪರೇಷನ್ ಸಿಂಧೂರ ಕಾರ್ಯಾಚರಣೆ (Operation Vermilion) ನಡೆಸಿ ಪಾಕಿಸ್ತಾನ, ಪಿಒಕೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (POK) ದಲ್ಲಿದ್ದ ಎಲ್ಇಟಿ, ಜೆಎಇಂ ಕೇಂದ್ರ ಕಚೇರಿ ಸೇರಿ 9 ಉಗ್ರ ನೆಲೆಗಳನ್ನು (9 terrorist bases) ನಾಶ ಮಾಡಿವೆ.
ಇದನ್ನು ಭಾರತದ ರಕ್ಷಣಾ ಸಚಿವಾಲಯ ದೃಢೀಕರಿಸಿದ್ದು, ಭಾರತ ನಡೆಸಿದ ದಾಳಿಯು ನಿಶ್ಚಿತವಾದ (Attack was certain) ಅಂದರೆ ಕೇಂದ್ರೀಕೃತ ಹಾಗೂ ಅಳೆದು ತೂಗಿದ ಪ್ರಚೋದನಕಾರಿಯಲ್ಲದ ಭಯೋತ್ಪಾದನಾ ನೆಲೆಗಳ ಮೇಲಿನ ದಾಳಿ (Attack above) ಎಂಬುದನ್ನು ಸ್ಪಷ್ಟವಾಗಿ ಹೇಳಿದೆ. ಗಡಿಯಾಚೆಗಿನ ಭಯೋತ್ಪಾದನೆ ನಿಯಂತ್ರಿಸುವುದಕ್ಕೆ ಭಾರತ ಸರ್ಕಾರ ಹೆಚ್ಚು ನಿಖರವಾದ ದಾಳಿಯನ್ನು ಆಯೋಜಿಸಿದ್ದು, ಇದಕ್ಕೆ ಈಗಾಗಲೇ ಅಮೆರಿಕ ಹಾಗೂ ಇತರೆ ದೇಶಗಳ ಬೆಂಬಲ ಸಿಕ್ಕಿದೆ.
ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಲಷ್ಕರ್ ಏ ತೊಯ್ಬಾ (LET), ಜೈಷ್ ಏ ಮೊಹ್ಮದ್ (JEM) ಹಾಗೂ ಹಿಜ್ಬುಲ್ ಮುಜಾಹಿದ್ದೀನ್ ನೆಲೆಗಳು ನಾಶವಾಗಿವೆ. ಪಹಲ್ಗಾಮ್ ದಾಳಿಯ (Pahalgam attack) ನಂತರ, ಪಾಕಿಸ್ತಾನವು ಪಿಒಕೆಯಲ್ಲಿ ತನ್ನ ಸೇನಾ ಜಮಾವಣೆ ಹೆಚ್ಚಿಸಲು ಪ್ರಾರಂಭಿಸಿತ್ತು. ದಾಳಿಯ ಭಯದಿಂದಾಗಿ (Fear of attack) , ಸುಮಾರು 1 ಸಾವಿರ ಹೋಟೆಲ್ಗಳು ಮತ್ತು ಮದರಸಾಗಳನ್ನು ಇಲ್ಲಿ ಮುಚ್ಚಲಾಗಿತ್ತು. ಅಜಾನ್ ಕೂಡ ಲೌಡ್ ಸ್ಪೀಕರ್ ಇಲ್ಲದೆ ಮಾಡಲಾಗುತ್ತಿತ್ತು.

ಮಂಗಳವಾರ ಮಧ್ಯರಾತ್ರಿಯ ನಂತರ ಮುಜಫರಾಬಾದ್ ನಗರದ (Muzaffarabad city) ಸುತ್ತಮುತ್ತಲಿನ ಪರ್ವತಗಳ ಬಳಿ ಪಾಕಿಸ್ತಾನಿ ಆಕ್ರತಮಿತ ಕಾಶ್ಮೀರ ಪ್ರದೇಶದಲ್ಲಿ (Kashmir region) ಹಲವಾರು ದೊಡ್ಡ ಸ್ಫೋಟಗಳು ಕೇಳಿಬಂದವು ಎಂದು ಹಲವಾರು ಸ್ಥಳೀಯರು ತಿಳಿಸಿದ್ದಾರೆ. ಸ್ಫೋಟಗಳ ನಂತರ ನಗರದಲ್ಲಿ ವಿದ್ಯುತ್ ಕಡಿತಗೊಂಡಿದೆ (Power cut) ಎಂದು ಸ್ಥಳೀಯರು ಹೇಳಿದ್ದಾರೆ. ಇದೇ ಕಾರಣಕ್ಕೆ ಮಧ್ಯರಾತ್ರಿ ಪಾಕಿಸ್ತಾನದ ಬೀದಿಗಳಲ್ಲಿ ಭಾರಿ ಜನಸಮೂಹ ಸೇರಿದೆ.
ಭಾರತವು ಪಾಕಿಸ್ತಾನದಲ್ಲಿನ ಭಯೋತ್ಪಾದಕ ಶಿಬಿರಗಳ (Terrorist camps) ಮೇಲೆ ದಾಳಿ ಮಾಡಿದ ನಂತರ ಪಾಕಿಸ್ತಾನದ ಮಸೀದಿಗಳಲ್ಲಿ ಎಚ್ಚರಿಕೆಯ ಸಂದೇಶದ ಘೋಷಣೆ ಮಾಡಲಾಗಿದೆ. ಪಾಕಿಸ್ತಾನದಾದ್ಯಂತ ಭಯದ ವಾತಾವರಣವಿದೆ. ಜನರು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳನ್ನು ತಲುಪಬೇಕು ಎಂದು ಮಸೀದಿಗಳ ಮೂಲಕ (Through mosques) ಮನವಿ ಮಾಡಲಾಗುತ್ತಿದೆ. ಈ ಸಮಯದಲ್ಲಿ ಮನೆಗಳಲ್ಲಿ ಯಾರೂ ಇರಬಾರದು ಎಂದು ಸಲಹೆ ನೀಡಲಾಗಿದೆ.
ಭಾರತದ ಆಪರೇಷನ್ ಸಿಂಧೂರ್ ಪಾಕಿಸ್ತಾನ ಮತ್ತು ಪಾಕ್ (Sindoor Pakistan and Pak) ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ಸಶಸ್ತ್ರ (Indian armed) ಪಡೆಗಳು ನಡೆಸುತ್ತಿರುವ ಸರ್ಜಿಕಲ್ ಸ್ಟ್ರೈಕ್ ಆಗಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, 9 ಸ್ಥಳಗಳನ್ನು ಗುರಿಯಾಗಿಸಿ (Target 9 locations) ದಾಳಿ ಮಾಡಲಾಗಿದೆ.
ಭಾರತದ ಮೇಲೆ ಭಯೋತ್ಪಾದಕ ದಾಳಿಗಳನ್ನು ಯೋಜಿಸಿ ಕಾರ್ಯಗತಗೊಳಿಸಲಾಗುತ್ತಿದ್ದ ಸ್ಥಳಗಳು (Indian Army gives befitting reply to pak) ಇವುಗಳೇ ಎನ್ನಲಾಗಿದೆ.ದಾಳಿಯ ನಂತರ ಪಾಕಿಸ್ತಾನದಲ್ಲಿ ಕೋಲಾಹಲ (Uproar in Pakistan) ಉಂಟಾಗಿದೆ. ಭಾರತವು ಮುಜಫರಾಬಾದ್, ಕೋಟ್ಲಿ ಮತ್ತು ಬಹವಾಲ್ಪುರದಲ್ಲಿ ಪ್ರಮುಖ ಕ್ಷಿಪಣಿ ದಾಳಿ ನಡೆಸಿದೆ.
ಇದನ್ನು ಓದಿ : http://ಅಕ್ರಮ ಗಣಿಗಾರಿಕೆ: ಜನಾರ್ದನ ರೆಡ್ಡಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ
ಪಾಕಿಸ್ತಾನಿ ಮಾಧ್ಯಮಗಳ (Pakistani media) ಹೇಳಿಕೆಯ ನಂತರ, ಭಾರತ ಸರ್ಕಾರವೂ ದಾಳಿಯನ್ನು ಅಧಿಕೃತವಾಗಿ ದೃಢಪಡಿಸಿದೆ.