ಬೆಂಗಳೂರು, ನ. 19: ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಪುತ್ರಿ ಐಶ್ವರ್ಯಾ ಹಾಗೂ ಮಾಜಿ ಸಿಎಂ ಎಸ್. ಎಂ ಕೃಷ್ಣ ಅವರ ಮೊಮ್ಮಗ, ಕೆಫೆ ಕಾಫಿ ಡೇ ಮಾಲಿಕ ದಿ. ಸಿದ್ಧಾರ್ಥ್ ಪುತ್ರ ಅಮರ್ತ್ಯ ಹೆಗಡೆಯ ನಿಶ್ಚಿತಾರ್ಥ ಇಂದು ನೆರವೇರಲಿದೆ. ಈ ಹಿನ್ನಲೆ ಎರಡು ಕುಟುಂಬಗಳಲ್ಲಿ ಸಂಭ್ರಮ ಕಳೆಗಟ್ಟಿದೆ.
ಈ ಕಾರ್ಯಕ್ರಮವು ಕೆಂಪೆಗೌ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಿರುವ ಖಾಸಗಿ ಐಷಾರಾಮಿ ಹೊಟೇಲ್ನಲ್ಲಿ ನಡೆಯಲಿದ್ದು, ಕೊರೊನಾ ಸಾಮಕ್ರಾಮಿಕ ಇರುವ ಕಾರಣ ಸರಳವಾಗಿ ನಿಶ್ಚಿತಾರ್ಥ ನೆರವೇರಲಿದೆ. ಎರಡು ಕಡೆಗಳ ಕುಟುಂಬಸ್ಥರು ಹಾಗೂ ಆಯ್ದ ರಾಜಕೀಯ ಗಣ್ಯ ವ್ಯಕ್ತಿಗಳು, ಚಿತ್ರ ನಟ ನಟಿಯರು ಹಾಗೂ ಉದ್ಯಮಗಳಿಗೆ ಮಾತ್ರ ಆಮಂತ್ರಣ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಲಿದ್ದು, ಒಟ್ಟು ೫೦ ರೂಮ್ಗಳನ್ನು ಬುಕ್ ಮಾಡಿದ್ದಾರೆ ಎನ್ನಲಾಗುತ್ತಿದೆ.