- ಭಾರತದ ಕ್ರಮ ನ್ಯಾಯವಾಗಿಲ್ಲ ಎಂದ ಪಾಕಿಸ್ಥಾನ (Indus water Band to pak)
- ದ್ವಿಪಕ್ಷೀಯ ಸಂಬಂಧ ಇನ್ನಷ್ಟು ಹದಗೆಡಬಹುದು ಎಂದು ಸೂಚನೆ
- ಭಾರತದ ವಿಧಾನ ಆತುರ ಹಾಗೂ ಅಪಕ್ವ ಎಂದು ಕಿಡಿ ಕಾರಿದ ಪಾಕ್
Pakistan: ಕಳೆದೆರಡು ದಿನಗಳ ಹಿಂದೆಯಷ್ಟೇ ಪಹಲ್ಗಾಮ್ನಲ್ಲಿ (Pahalgam) ಉಗ್ರರ ದಾಳಿಯ (Terror Attack) ನಂತರ ಸಿಂಧೂ ಜಲ (Indus Vally) ಒಪ್ಪಂದವನ್ನು ಸ್ಥಗಿತಗೊಳಿಸಲು ಹಾಗೂ ರಾಜತಾಂತ್ರಿಕ ಸಂಬಂಧಗಳನ್ನು ಕೆಳದರ್ಜೆಗಿಳಿಸಲು ಭಾರತ ತೆಗೆದುಕೊಂಡ ಕ್ರಮಕ್ಕೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನ ಗುರುವಾರ ತನ್ನ ಎಲ್ಲಾ ದ್ವಿಪಕ್ಷೀಯ ಒಪ್ಪಂದಗಳು (Bilateral agreements) ಮತ್ತು ವ್ಯಾಪಾರ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ ಮತ್ತು ಭಾರತೀಯ (Indian) ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿದೆ.
1971 ರ ಭಾರತ-ಪಾಕಿಸ್ತಾನ ಯುದ್ಧದ ನಂತರ 1972 ರಲ್ಲಿ ಉಭಯ ದೇಶಗಳ ನಡುವೆ ಸಹಿ ಹಾಕಲಾದ ಪ್ರಮುಖ (Signed key) ಶಾಂತಿ ಒಪ್ಪಂದವಾದ ಸಿಮ್ಲಾ ಒಪ್ಪಂದವನ್ನು ಮತ್ತು ಭಾರತ ತನ್ನ ನಡವಳಿಕೆಯನ್ನು ಬದಲಾಯಿಸುವವರೆಗೆ ಎಲ್ಲಾ ದ್ವಿಪಕ್ಷೀಯ ಒಪ್ಪಂದಗಳನ್ನು ಸ್ಥಗಿತಗೊಳಿಸಿರುವುದಾಗಿ ನೆರೆಯ ದೇಶ (Neighboring country) ಹೇಳಿದೆ.ಉಗ್ರರ ದಾಳಿಯ ನಂತರ ಭಾರತದ ಪ್ರತಿಕ್ರಿಯೆ ಹಾಗೂ ಇದಕ್ಕೆ ಪಾಕ್ ನೀಡಿರುವ ಪ್ರತಿ ಸಂದೇಶವು (Each message) ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ಕೆಳಮಟ್ಟಕ್ಕೆ ತಳ್ಳಬಹುದು ಎಂದು ಎಂದು ರಾಜತಾಂತ್ರಿಕ ವೀಕ್ಷಕರು ಎಚ್ಚರಿಸಿದ್ದು, 2019 ರ ಪುಲ್ವಾಮಾ-ಬಾಲಕೋಟ್ ಬಿಕ್ಕಟ್ಟಿನ ನಂತರ ಮುಂದುವರಿದಿರುವ ಬಿರುಕನ್ನು ಮತ್ತಷ್ಟು ಹೆಚ್ಚಿಸಬಹುದು (Crack can be further increased) ಎಂದಿದ್ದಾರೆ.
ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ಉಗ್ರರು (Extremists) ನಡೆಸಿದ ದಾಳಿಯಲ್ಲಿ 26 ಜನರು ಪ್ರಾಣ ತೆತ್ತಿದ್ದು, ಇದಕ್ಕೆ ತಕ್ಕ ಶಾಸ್ತಿಯಾಗಿ ಭಾರತ ನೆರೆಯ ಪಾಕ್ ಮೇಲೆ (Pak) ಕ್ರಮ ಕೈಗೊಂಡಿದೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಪ್ರಮುಖ ಸಚಿವರು ಮತ್ತು ಮೂರು ಪಡೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಕೂಡಲೇ ತಮ್ಮ ಈ ನಿರ್ಧಾರವನ್ನು ಘೋಷಿಸಿದ್ದಾರೆ.
ಪಾಕ್ ಭಯೋತ್ಪಾದನೆಯನ್ನು (Pakistan terrorism) ಖಂಡಿಸುತ್ತದೆ ಎಂದು ಹೇಳಿದ್ದು ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವ ಭಾರತದ ಕ್ರಮವನ್ನು ತಿರಸ್ಕರಿಸಿದೆ.240 ಮಿಲಿಯನ್ ಪಾಕ್ ಪ್ರಜೆಗಳಿಗೆ (millions of Pakistani citizens) ನದಿ ನೀರು ಜೀವನಾಡಿಯಾಗಿದ್ದು ಜಲ ಒಪ್ಪಂದದ ಸ್ಥಗಿತವು ಯುದ್ಧಕ್ಕೆ ಪರೋಕ್ಷ ಆಹ್ವಾನವನ್ನು ನೀಡಿದಂತೆ ಎಂದು ಎಚ್ಚರಿಸಿದೆ.

ಪಾಕ್ನ ಸಾರ್ವಭೌಮತ್ವ, ಭದ್ರತೆಗೆ ಯಾವುದೇ ಬೆದರಿಕೆಯನ್ನು ಎಲ್ಲಾ ಕ್ಷೇತ್ರಗಳಲ್ಲಿ ದೃಢವಾದ (Firm in fields) ಪರಸ್ಪರ ಕ್ರಮಗಳೊಂದಿಗೆ ಎದುರಿಸಲಾಗುವುದು ಎಂದು ರಾಷ್ಟ್ರೀಯ ಭದ್ರತಾ ಸಮಿತಿ (National Security Committee) ಸಭೆಯ ನಂತರ ಪಾಕಿಸ್ತಾನ ಹೇಳಿಕೆ ನೀಡಿದ್ದಾಗಿ ಡಾನ್ ಸುದ್ದಿಪತ್ರಿಕೆ ವರದಿ ಮಾಡಿದೆ.ಉಗ್ರರ ದಾಳಿಗೆ (Terrorist attacks) ಪ್ರತಿಯಾಗಿ ಭಾರತ ಏಪ್ರಿಲ್ 23 ರಂದು 1960 ರ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿತು ಮತ್ತು ಪಾಕಿಸ್ತಾನದೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಕೆಳಮಟ್ಟಕ್ಕಿಳಿಸುವುದಾಗಿ ಘೋಷಿಸಿತು (Declared) .
ಇದಕ್ಕೂ ಮುನ್ನ ಉಪ ಪ್ರಧಾನಿ ಇಶಾಕ್ ದಾರ್ ಅವರು ಖಾಸಗಿ ದೂರದರ್ಶನ ಚಾನಲ್ನೊಂದಿಗೆ (Television channel) ಮಾತನಾಡುತ್ತಾ, ಭಾರತದ ಈ ವಿಧಾನ ಅಪಕ್ವ ಹಾಗೂ ಆತುರದ್ದಾಗಿದೆ ಎಂದು ಹೇಳಿಕೆ ನಿಡಿದ್ದಾರೆ. ಅಲ್ಲದೆ ದಾಳಿಗೆ ಭಾರತ ಯಾವುದೇ ಪುರಾವೆಗಳನ್ನು ಪ್ರಸ್ತುತಪಡಿಸಿಲ್ಲ ಹಾಗೂ ತಮ್ಮ ಕ್ರಮಗಳಲ್ಲಿ ಯಾವುದೇ ಪ್ರಬುದ್ಧತೆ ತೋರ್ಪಡಿಸಿಲ್ಲ ಎಂದು ಇಶಾಕ್ ತಿಳಿಸಿದ್ದಾರೆ.
ಇದನ್ನು ಓದಿ : http://ಚೀನಾದಲ್ಲೀಗ 10 ಜಿ ನೆಟ್ : 1000 ಎಂಬಿಪಿಎಸ್ ವೇಗದ ನೆಟ್ ವರ್ಕ್ ಅಭಿವೃದ್ಧಿ ಪಡಿಸಿದ ಚೀನಾ
ಇದೊಂದು ಗಂಭೀರವಲ್ಲದ ವಿಧಾನವಾಗಿದೆ ಹಾಗೂ ಘಟನೆಯ ಕೂಡಲೇ ಪಾಕ್ ಮೇಲೆ ಅಪಪ್ರಚಾರ (Slander against Pakistan) ಆರಂಭಿಸಿದರು ಎಂದು ಆಪಾದಿಸಿದ್ದಾರೆ. ಇನ್ನು ಪಾಕಿಸ್ತಾನದ (Indus water Band to pak) ವಿದೇಶಾಂಗ ಕಚೇರಿ ದಾಳಿಯಲ್ಲಿ ನಡೆದ ಜೀವಹಾನಿಯ ಕುರಿತು ವಿಷಾದ ವ್ಯಕ್ತಪಡಿಸಿದೆ.