- ಭದ್ರತಾ ಕಾರಣಗಳಿಗಾಗಿ 24 ವಿಮಾನ ನಿಲ್ದಾಣಗಳು ತಾತ್ಕಾಲಿಕ ಬಂದ್
- ದೆಹಲಿ ಏರ್ಪೋರ್ಟ್ ಸಹಜ ಸ್ಥಿತಿಯಲ್ಲಿ ಕಾರ್ಯಾಚರಣೆ (International flights on high alert)
- ಇಂಡಿಗೋ ವಿಮಾನ ಸೇರಿದಂತೆ ಕೆಲ ವಿಮಾನಗಳ ಹಾರಾಟ ರದ್ದು
New delhi: ಪಾಕಿಸ್ತಾನ ಕ್ಷಿಪಣಿ ದಾಳಿ (Pakistan missile attack) ನಡೆಸಿದ ಬಳಿಕ ಭಾರತ ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಪಾಕಿಸ್ಥಾನದ ಮೇಲೆ ಮಿಸೈಲ್ಗಳ ಸುರಿಮಳೆಗೈದಿದೆ. ಈ ನಡುವೆ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಆದ್ರೆ ಪಾಕ್ ಕ್ಷಿಪಣಿ ದಾಳಿ ಬೆನ್ನಲ್ಲೇ ಭಾರತ (India) ದೇಶಾದ್ಯಂತ 24 ವಿಮಾನ ನಿಲ್ದಾಣಗಳ (Airports) ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಭಾರತ ಮತ್ತು ಪಾಕಿಸ್ತಾನ (India Pak) ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ, ಭದ್ರತಾ ಕಾರಣಗಳಿಗಾಗಿ ಭಾರತ ಸರ್ಕಾರ 24 ವಿಮಾನ ನಿಲ್ದಾಣಗಳನ್ನು (Air ports) ನಾಗರಿಕ ವಿಮಾನಯಾನಕ್ಕಾಗಿ ಮುಚ್ಚಿದೆ. ಜಮ್ಮು, ಪಂಜಾಬ್, ಗುಜರಾತ್ ಮತ್ತು ರಾಜಸ್ಥಾನದ ಭಾರತೀಯ ನಗರಗಳ ಮೇಲೆ ಪಾಕಿಸ್ತಾನ ಡ್ರೋನ್ (Pak Drone) ಮತ್ತು ಕ್ಷಿಪಣಿ ದಾಳಿ ನಡೆಸಿದ ನಂತರ ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಈ ಮುಚ್ಚಿದ ವಿಮಾನ ನಿಲ್ದಾಣಗಳಲ್ಲಿ ಚಂಡೀಗಢ, ಶ್ರೀನಗರ, ಜೈಸಲ್ಮೇರ್, ಶಿಮ್ಲಾ(Chandigarh, Srinagar, Jaisalmer, Shimla)ಮತ್ತು ಇತರ ಪ್ರಮುಖ ನಗರಗಳ ವಿಮಾನ ನಿಲ್ದಾಣಗಳು ಸೇರಿವೆ. ಭದ್ರತಾ ಕಾರಣಗಳಿಂದಾಗಿ ಈ ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
ಪ್ರಯಾಣಿಕರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ಭದ್ರತೆಯನ್ನು (Security) ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ. ಇಂಡಿಗೋ ವಿಮಾನಯಾನ ಸಂಸ್ಥೆಯು ಮೇ 8, 2025 ರಂದು ಅಥವಾ ಅದಕ್ಕೂ ಮೊದಲು ಮಾಡಿದ ಬುಕಿಂಗ್ಗಳಿಗೆ, ಶ್ರೀನಗರ, ಜಮ್ಮು, ಅಮೃತಸರ, ಲೇಹ್, ಚಂಡೀಗಢ, ಧರ್ಮಶಾಲಾ, (Srinagar, Jammu, Amritsar, Leh, Chandigarh, Dharamsala,)ಬಿಕಾನೇರ್, ಜೋಧ್ಪುರ, ಕಿಶನ್ಗಢ ಮತ್ತು ರಾಜ್ಕೋಟ್ಗೆ ಅಥವಾ ಅಲ್ಲಿಂದ ಮೇ 22, 2025 ರವರೆಗೆ ಮಾಡಿದ ಪ್ರಯಾಣಕ್ಕಾಗಿ ಬದಲಾವಣೆ ಅಥವಾ ರದ್ದತಿ ಶುಲ್ಕವನ್ನು ಮನ್ನಾ ಮಾಡಲಾಗಿದೆ ಎಂದು ತಿಳಿಸಿದೆ.

ಇನ್ನು ಇಳಿದ ವಿಮಾನಯಾನಗಳ ಸಂಸ್ಥೆಯು ನಿಗದಿತ ನಿರ್ಗಮನ ಸಮಯಕ್ಕಿಂತ ಕನಿಷ್ಠ ಮೂರು ಗಂಟೆಗಳ (3 hours) ಮೊದಲು ವಿಮಾನ ನಿಲ್ದಾಣವನ್ನು ತಲುಪಲು ಪ್ರಯಾಣಿಕರಿಗೆ ಸೂಚಿಸಿದೆ. ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋದ (Civil Aviation Security Bureau) ಆದೇಶದ ಮೇರೆಗೆ ವಿಮಾನ ನಿಲ್ದಾಣದಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆಯು (airline) ಸಾಮಾಜಿಕ ಮಾಧ್ಯಮ ವೇದಿಕೆ ‘X’ ನಲ್ಲಿ ಪೋಸ್ಟ್ನಲ್ಲಿ ತಿಳಿಸಿದೆ.
ಹೊರಡುವ 75 ನಿಮಿಷಗಳ ಮೊದಲು ಚೆಕ್-ಇನ್ ಮುಕ್ತಾಯಗೊಳ್ಳುತ್ತದೆ (Check-in ends) ಎಂದು ಏರ್ ಇಂಡಿಯಾ ಹೇಳಿದೆ. ಈ ಪರಿಸ್ಥಿತಿಯಲ್ಲಿ, ಪ್ರಯಾಣಿಕರು ತಮ್ಮ ಪ್ರಯಾಣದಲ್ಲಿ ಯಾವುದೇ ಅನಾನುಕೂಲತೆಯನ್ನು ತಪ್ಪಿಸಲು ಮುಂಚಿತವಾಗಿ ವಿಮಾನ ನಿಲ್ದಾಣವನ್ನು ತಲುಪಲು ಸೂಚಿಸಲಾಗಿದೆ.
ಗುರುವಾರದಂದು ದೇಶೀಯ ವಿಮಾನಯಾನ ಸಂಸ್ಥೆಗಳು ಸುಮಾರು 430 ವಿಮಾನಗಳ (430 flights) ಹಾರಾಟವನ್ನು ರದ್ದುಗೊಳಿಸಿದ್ದು, ಇದು ದೇಶದ ಒಟ್ಟು ನಿಗದಿತ ವಿಮಾನಗಳ ಪೈಕಿ ಸುಮಾರು ಶೇ.3 ರಷ್ಟಿದೆ (3 percent). ಮೇ 10 ರವರೆಗೆ 27 ವಿಮಾನ ನಿಲ್ದಾಣಗಳು ಮುಚ್ಚಲ್ಪಟ್ಟಿರುತ್ತವೆ. ಶ್ರೀನಗರ, ಜಮ್ಮು, ಲೇಹ್, ಚಂಡೀಗಢ, ಅಮೃತಸರ, ಲುಧಿಯಾನ, (Srinagar, Jammu, Leh, Chandigarh, Amritsar, Ludhiana) ಪಟಿಯಾಲ, ಬಟಿಂಡಾ, ಹಲ್ವಾರಾ, ಪಠಾಣ್ಕೋಟ್, ಭುಂತರ್, ಶಿಮ್ಲಾ, ಗಗ್ಗಲ್, ಧರ್ಮಶಾಲಾ, ಕಿಶನ್ಗಢ, ಜೈಸಲ್ಮೇರ್, ಜೋಧ್ಪುರ, ಬಿಕಾನೇರ್, ಮುಂದ್ರಾ, ಜಾಮ್ನಗರ, ರಾಜ್ಕೋಟ್, ಪೋರಬಂದರ್, ಕಾಂಡ್ಲಾ, ಕೇಶೋಡ್, ಭುಜ್, ಗ್ವಾಲಿಯರ್ ಮತ್ತು ಹಿಂದೋನ್ ವಿಮಾನ ನಿಲ್ದಾಣಗಳು ಈ ಸಮಸ್ಯೆಗೆ ತುತ್ತಾಗಿವೆ.
ಹಲವು ಭಾರತೀಯ ವಿಮಾನಯಾನ ಸಂಸ್ಥೆಗಳು (Indian Airlines) ಪ್ರಯಾಣ ಸಲಹೆಗಳನ್ನು ನೀಡಿದ್ದು, ಅದಕ್ಕೆ ಅನುಗುಣವಾಗಿ ಪ್ರಯಾಣಿಕರು ತಮ್ಮ ಪ್ರಯಾಣದ ಯೋಜನೆಯನ್ನು ಪ್ಲ್ಯಾನ್ ಮಾಡಿಕೊಳ್ಳುವಂತೆ ತಿಳಿಸಿವೆ. ಇನ್ನೂ ದೇಶಾದ್ಯಂತ ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ (International airports) ಕಟ್ಟೆಚ್ಚರ ವಹಿಸಲಾಗಿದೆ.
ಇದನ್ನು ಓದಿ : http://ಆಪರೇಷನ್ ಸಿಂಧೂರ ಮಾಹಿತಿಗೆ ನಾರಿ ಶಕ್ತಿ: ಗಮನ ಸೆಳೆದಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ
ಇನ್ನೂ ದೇಶದ ರಾಜಧಾನಿ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Delhi internal national air port) ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ. ಭದ್ರತೆ ಹೆಚ್ಚಿಸಿರುವ ಕಾರಣ ಕೆಲವು ವಿಮಾನಗಳ ಹಾರಾಟಗಳು ರದ್ದಾಗಿವೆ. ಪ್ರಯಾಣಿಕರು ತಮ್ಮ ವಿಮಾನಯಾನದ ಬಗ್ಗೆ (International flights on high alert) ಮಾಹಿತಿ ತಿಳಿದುಕೊಂಡು ಏರ್ಪೋರ್ಟ್ಗೆ ಬರಲು ಸೂಚಿಸಲಾಗಿದೆ.