- ರಾಷ್ಟ್ರಮಟ್ಟದಲ್ಲಿ ಭಾರೀ ಸದ್ದು ಮಾಡಿದ್ದ ಧರ್ಮ** ಪ್ರಕರಣ (Investigation temporarily suspended until FSL report arrives)
- FSL ವರದಿ ಬರುವವರೆಗೂ ತನಿಖೆ ತಾತ್ಕಾಲಿಕ ಸ್ಥಗಿತ: ಗೃಹ ಸಚಿವ ಡಾ.ಜಿ ಪರಮೇಶ್ವರ್
ಬೆಂಗಳೂರು: ಧರ್ಮ** ಪ್ರಕರಣಕ್ಕೆ ಸಂಬಂದಿಸಿದಂತೆ ಎಸ್ಐಟಿ ತಂಡ ನೀಡಿರುವ ತನಿಖಾ ಮಾಹಿತಿಯನ್ನು ಗೃಹ ಸಚಿವ ಡಾ.ಜಿ ಪರಮೇಶ್ವರ್(Dr. G Parameshwar) ಅವರು ಸದನಕ್ಕೆ ಮಾಹಿತಿ ನೀಡಿದ್ದಾರೆ.
ಎಸ್ಐಟಿ ರಚನೆಯಾದ ದಿನದಿಂದ ಇಲ್ಲಿಯ ವರೆಗು ತನಿಖೆಯ ಬೆಳವಣಿಗೆ ಹೇಗಿದೆ ಎಂಬುದರ ಬಗ್ಗೆ ವಿವರಿಸುದ್ದಾರೆ.
ಜುಲೈ 20 ರಂದು ರಾಜ್ಯ ಸರ್ಕಾರ(State Govt) ಧರ್ಮ**ದಲ್ಲಿ ನಡೆದಿದೆ ಎನ್ನಲಾಗಿರುವ ಅಸಹಜ ಸಾ*ವು ಪ್ರಕರಣದ ತನಿಖೆ ನಡೆಸಲು ಎಸ್ಐಟಿ(SIT) ರಚನೆ ಮಾಡಿತ್ತು,
ಎಡಿಜಿಪಿ ಪ್ರಣಬ್ ಮೊಹಾಂತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿ, ಆರೋಪ ಪ್ರಕರಣ ಸಂಬಂಧ ಸಮಗ್ರ ತನಿಖೆ ನಡೆಸಲು ಸರ್ಕಾರ ಸೂಚನೆ ನೀಡಿತ್ತು.

ಅದರಂತೆಯೇ ಎಸ್ಐಟಿ ಅಧಿಕಾರಿಗಳು ಧರ್ಮ**ದಲ್ಲಿ ಬಿಡಾರ ಹೂಡಿತ್ತು, ಅನಾಮಿಕ ದೂರದಾರ ನೀಡುತ್ತಿರುವ ಮಾಹಿತಿ ಮೇರೆಗೆ ಬರುಡೆ ರಹಸ್ಯ ಶೋದಿಸಲು ಶೋದ ಕಾರ್ಯ ಪ್ರಾರಂಬಿಸಿತ್ತು,
ಗುಂಡಿ ಅಗೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ದೂರುದಾರ ಹೇಳಿಕೊಂಡಂತೆ ಮಣ್ಣು ಮಾಡಿದ್ದಾನೆ ಎನ್ನಲಾಗ್ತಿರುವ ಸ್ಥಳಗಳನ್ನು ಅಗೆದು ಸಾಕ್ಷ್ಯಕ್ಕಾಗಿ ಹುಡುಕಾಟ ನಡೆಸ್ತಿದ್ದಾರೆ.
ಆದರೇ ದೂರುದಾರ ಗುರುತಿಸಿದ್ದ ಅಷ್ಟೂ ಜಾಗಗಳ ಷೈಕಿ ಕೇವಲ 2 ಪಾಯಿಂಟ್ ನಲ್ಲಿ ಮಾತ್ರ ಅವಷೇಶ ಪತ್ತೆಯಾಗಿತ್ತು.
ಧರ್ಮ**ದ ತನಿಖೆ ಬಗ್ಗೆ ಮಾಹಿತಿ ನೀಡುವಂತೆ ವಿಪಕ್ಷಗಳು ಪಟ್ಟು ಹಿಡಿದಿದ್ದು, ಇದಕ್ಕೆ ಗೃಹ ಸಚಿವ ಪರಮೇಶ್ವರ್ ಉತ್ತರಿಸಿದ್ದಾರೆ.
ಕಳೆದ 25 ವರ್ಷಗಳಿಂದ ಧರ್ಮ**ದಲ್ಲಿ ಮಹಿಳೆಯರು ಕಾಣೆಯಾಗಿರುವ ಬಗ್ಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ(Dr. Nagalakshmi Chowdhury) ಅವರು ಸಿಎಂ ಗೆ ಪತ್ರ ಬರೆದಿದ್ದು,
ಅದರಂತೆ ಜುಲೈ 19ರಂದು ಎಸ್ ಐ ಟಿ ರಚನೆ ಆಗಿತ್ತು. ಎಸ್ ಐಟಿ ಯಲ್ಲಿ ಪ್ರಣಬ್ ಮೊಹಾಂತಿ ನೇತೃತ್ವದಲ್ಲಿ ಎಸ್ಐಟಿ ತಂಡ ತನಿಖೆ ನಡೆಸಿದೆ.
ಎಸ್ ಐ ಟಿಯವರು ಅನಾಮಿಕನ ಬಳಿ 161 ಹೇಳಿಕೆ ತೆಗೆದುಕೊಂಡಿದ್ದಾರೆ. ಅನಾಮಿಕ ದೂರುದಾರ ವ್ಯಕ್ತಿ ಶ*ಗಳನ್ನ ಎಲ್ಲೆಲ್ಲಿ ಹೊತಿದ್ದೆನೆ ಎಂದು ಹೇಳಿದ್ದಾನೆ. ಆತನ ಮಾಹಿತಿ ಆಧರಿಸಿ ಎಸ್ ಐ ಟಿ ತನಿಖೆ ಆರಂಭಿಸಿದೆ ಎಂದು ಡಾ.ಜಿ ಪರಮೇಶ್ವರ್ ತಿಳಿಸಿದರು.
ಇದೆಲ್ಲವೂ ತನಿಖೆಯ ಪೂರ್ವ ಭಾಗವಾಗಿದ್ದು, ಈವರೆಗೆ ಅಸ್ತಿಪಂಜರ ಸಿಕ್ಕಿದ ಜಾಗಗಳ ಹಾಗೂ ಮೂಳೆಗಳ ಬಗ್ಗೆ ವಿಶ್ಲೇಷಣೆ ಆಗಬೇಕಿದೆ. ಕೆಮಿಕಲ್, ಡಿಎನ್ಎ ಅನಾಲಿಸಿಸ್ ಮಾಡಬೇಕು,
ಅಸ್ತಿಪಂಜರದ ವರದಿಗಳು, ಮಣ್ಣಿನ ಪರೀಕ್ಷಾ ವರದಿಗಳು ಹಾಗೂ ವಿಶ್ಲೇಷಣಾ ವರದಿಗಳು ಬಂದ ನಂತರವೇ ಅಸಲಿ ತನಿಖೆ ಆರಂಭ ಆಗಲಿದೆ ಇನ್ನು ಮುಂದೆ ತನಿಖೆ ತುಂಬಾ ಗಂಭೀರವಾಗಿ ನಡೆಯುತ್ತದೆ
ಇದನ್ನು ಓದಿ: ಧರ್ಮ**ದಲ್ಲಿ ಶ* ಹೂತ ಪ್ರಕರಣ, SIT ತಂಡಕ್ಕೆ GPR ಎಂಟ್ರಿ, 38 ವರ್ಷದ ಹಿಂದಿನ ಪದ್ಮಲತಾ ಕೇಸ್ಗೆ ಮರುಜೀವ
ಪಾರದರ್ಶಕವಾಗಿ, ಯಾರದೇ ಒತ್ತಡಕ್ಕೆ ಮಣಿಯದ ರೀತಿಯಲ್ಲಿ ತನಿಖೆಯ ದಿಕ್ಕನ್ನು ತಪ್ಪಿಸಲು ಅವಕಾಶ ಇಲ್ಲದ ರೀತಿಯಲ್ಲಿ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಪರಮೇಶ್ವರ ತಿಳಿಸಿದರು. (Investigation temporarily suspended until FSL report arrives)