ಪ್ರಕ್ರತಿದತ್ತವಾಗಿ ವರ್ಷಕ್ಕೊಮ್ಮೆ ಸಿಗುವ ಜಂಬುನೇರಳೆ ಹಣ್ಣು ಅಮೃತಕ್ಕೆ ಸಮಾನವಾಗಿದೆ. ಮಧುಮೇಹ, ಸಂಧಿವಾತ, ಹೃದಯಾಘಾತ, ಕ್ಯಾನ್ಸರ್ ಮುಂತಾದ ರೋಗಗಳ ನಿವಾರಣೆಗೆ ಇದು ಸಹಾಯಕಾರಿಯಾಗಿದೆ. ಈ ಹಣ್ಣು ಸಿಹಿ ಮತ್ತು ಹುಳಿ ಗುಣವನ್ನು ಹೊಂದಿದೆ. ವಿವಿಧ ರೀತಿಯ ವಿಟಮಿನ್ಗಳು ಖನಿಜಾಂಶಗಳು ಪ್ರೊಟೀನ್, ವಿಟಮಿನ್, ಆಂಟಿ-ಆಕ್ಸಿಡೆಂಟ್, ಪೊಟ್ಯಾಶಿಯಂ, ಕ್ಯಾಲ್ಸಿಯಂ ಹಾಗೂ ಖನಿಜಾಂಶಗಳ ಆಗರವಾಗಿದೆ. ರುಚಿಯಾದ ಆರೋಗ್ಯಯುತವಾದ ಈ ಹಣ್ಣಿಗೆ ಬಹಳ ಬೇಡಿಕೆಯಿದ್ದು, ಕೆ ಜಿಗೆ 100 ರಿಂದ 200 ರೂಪಾಯಿವರೆಗೂ ಇದಕ್ಕೆ ಬೆಲೆಯಿದೆ.
ಸಕ್ಕರೆ ಕಾಯಿಲೆ ನಿವಾರಣೆಗೆ ಹೇಳಿ ಮಾಡಿಸಿದ ಹಣ್ಣಾಗಿದೆ. ಈ ಮರ ಬೇರಿನಿಂದ ಹಿಡಿದು ಎಲೆ ಹಣ್ಣು ಬೀಜ ತೊಗಡೆ ಎಲ್ಲಾ ಭಾಗಗಳೂ ಆರೋಗ್ಯಕ್ಕೆ ಬೇಕಾಗುವ ಸಾರಸತ್ವವನ್ನು ಹೊಂದಿದೆ. ಈ ಹಣ್ಣಿನ ಸೇವನೆಯಿಂದ ಮೂಳೆಗಳು ಗಟ್ಟಿಯಾಗುತ್ತವೆ ಅಲ್ಲದೇ ರೋಗನಿರೋಧಕ ಶಕ್ತಿಯು ಹೆಚ್ಚುತ್ತದೆ. ರಕ್ತದ ಶದ್ದೀಕರಣ ಮಾಡುವುದರ ಜೊತೆಗೆ ರಕ್ತ ಸಂಚಾರವನ್ನು ಸುಗಮಗೊಳಿಸುವುದಲ್ಲದೇ, ನೇರಳೆಯ ಎಳತಾದ ಎಲೆಗಳನ್ನು ತಂದು ಹಾಲು ಬೆರೆಸಿ ಜ್ಯೂಸ್ ಮಾಡಿ ಸೇವಿಸಿದರೆ ಕರುಳಿನ ಅಲ್ಸರ್ ಕಡಿಮೆಯಾಗುತ್ತದೆ.