ಪತ್ರಿಕೋದ್ಯಮ ಬರವಣಿಗೆಯು ಸಾಹಿತ್ಯಕ್ಕೆ ಗಂಭೀರ ಸಮಸ್ಯೆಯಾಗಿ ಪರಿರ್ವತಿಸುತ್ತಿದೆ ಎಂದು ಉರ್ದು ಕಾದಂಬರಿಕಾರ (Javed Statement on Journalism),
ಉತ್ತಮ ಸಾಹಿತ್ಯಕ್ಕಾಗಿ 2022ರ ಜೆಸಿಬಿ ಪ್ರಶಸ್ತಿ ವಿಜೇತ, ಸಾಹಿತಿ ಖಾಲಿದ್ ಜಾವೇದ್ (Khalid Javed) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಾಹಿತ್ಯದ ಕೃತಿಗಳು ಮತ್ತು ಪ್ರಸ್ತುತ ಯುಗದಲ್ಲಿ ಓದುಗರ ಮಟ್ಟವು ಕುಸಿಯುವುದಕ್ಕೆ ಮಾಧ್ಯಮ (Javed Statement on Journalism) ಬರವಣಿಗೆ ಪ್ರಮುಖ ಕಾರಣವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಮೂಲತಃ
2014 ರಲ್ಲಿ “ನೆಮತ್ ಖಾನಾ”(Nemat Khana) ಎಂದು ಪ್ರಕಟವಾದ “ದಿ ಪ್ಯಾರಡೈಸ್ ಆಫ್ ಫುಡ್” ನ ಲೇಖಕರಾದ ಖಲಿದ್ ಜಾವೇದ್ ಅವರು ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : https://vijayatimes.com/jacqueline-fernandez-seeks-permission/
ಸಾಹಿತ್ಯವು ರಾಜಕೀಯ, ಸಾಮಾಜಿಕ, ನೈತಿಕ ಕಾಳಜಿಗಳನ್ನು ಹೊಂದಿದ್ದರೂ ಅದನ್ನು ಓದುಗರಿಗೆ ಪತ್ರಿಕೆಗಳಂತ ಪ್ಲೇಟ್ನಲ್ಲಿ ಪ್ರಸ್ತುತ ಪಡಿಸಬಾರದು! ಸಾಹಿತ್ಯಕ್ಕೆ ಇರುವ ದೊಡ್ಡ ಅಪಾಯ ಎಂದರೆ ಅದು ಪತ್ರಿಕೋದ್ಯಮದ ಬರವಣಿಗೆ. ಸಾಹಿತ್ಯದ ಹೆಸರಿನಲ್ಲಿ ವರದಿ ಮಾಡಲಾಗುತ್ತಿದೆ,
ನಂತರ ಆ ವರದಿಯನ್ನು ಕಾದಂಬರಿಯನ್ನಾಗಿ ಮಾಡಲಾಗಿದೆ. ಸಾಮಾಜಿಕ ವಾಸ್ತವವನ್ನು ನಿಖರವಾಗಿ ಪ್ರಸ್ತುತಪಡಿಸಲಾಗಿದೆ.
ಇದು ಕಳೆದ 25 ವರ್ಷಗಳಿಂದ ಹೀಗೆಯೇ ನಡೆಯುತ್ತಿದೆ ಎಂದು ಜಾವೇದ್ ಅವರು ಪಿಟಿಐಗೆ (PTI) ತಿಳಿಸಿದ್ದಾರೆ.
ಜಾಮಿಯಾ ಮಿಲಿಯಾ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಜಾವೇದ್ ಅವರು,
ಇತ್ತೀಚೆಗಷ್ಟೇ ಜೆಸಿಬಿ ಬಹುಮಾನ ‘ದಿ ಪ್ಯಾರಡೈಸ್ ಆಫ್ ಫುಡ್’ ಸ್ವೀಕರಿಸಿದರು. ಟ್ರೋಫಿ ಪಡೆಯುವುದರ ಜೊತೆಗೆ 25 ಲಕ್ಷ ರೂ. ನಗದು ಬಹುಮಾನವನ್ನು ಸ್ವೀಕರಿಸಿದ್ದಾರೆ.
ಸಾಹಿತ್ಯಕ್ಕೆ ಮಾಧ್ಯಮ ಬರವಣಿಗೆ ಗಂಭೀರ ಸಮಸ್ಯೆಯಾಗಿ ಕಾಡುತ್ತಿರುವ ಒಳನೋಟವನ್ನು ಹಂಚಿಕೊಂಡಿದ್ದಾರೆ.
62 ವರ್ಷ ವಯಸ್ಸಿನ ಲೇಖಕರಾದ ಜಾವೇದ್, ಸಾಹಿತ್ಯವು ಮೂಲಭೂತವಾಗಿ ಗಂಭೀರವಾದ ಸೌಂದರ್ಯವನ್ನು ಹೊಂದಿದೆ ಮತ್ತು ಓದುಗರನ್ನು ಸರಿಯಾದ ಹಾದಿಯಲ್ಲಿ ರೂಪಿಸಿಲ್ಲ!
ಈ ಒಂದು ಕಾರಣದಿಂದ ಮೆಚ್ಚುಗೆ ಪಡೆದ ಉತ್ತಮ ಲೇಖಕರ ಕೆಲಸವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ : https://vijayatimes.com/pregnant-care-in-winter-time/
ಇಡೀ ಸಾಹಿತ್ಯ ಕ್ಷೇತ್ರಕ್ಕೆ ಇದು ಅತ್ಯಂತ ಕೆಟ್ಟ ಸಮಯ ಎಂದು ಹೇಳಿದರು. ಉರ್ದು ಸಾಹಿತ್ಯವೂ ಅಸ್ಪೃಶ್ಯವಲ್ಲ! ಸುಲಭವಾಗಿ ಅರ್ಥವಾಗುವಂತೆ ಬರೆಯಲಾಗಿದೆ.
ಆದರೆ, ಬಹುಬೇಗ ಅರ್ಥವಾದುದನ್ನು ಯಾವಾಗಲೂ ಅನುಮಾನದಿಂದಲೇ ನೋಡಬೇಕು ಎಂದು ಎಚ್ಚರಿಕೆ ನೀಡಿದರು.
ಇಸ್ಲಾಂ (Islam) ಕುರಿತ ಬರಹಗಳ ಮಿತಿಗಳ ಬಗ್ಗೆಯೂ ಅವರು ಮಾತನಾಡಿದ್ದು, ಹಿಂದೂ ಧರ್ಮ (Hinduism)ಕ್ಕಿಂತ ಭಿನ್ನವಾಗಿ, ಇದು ನೀತಿ ಸಂಹಿತೆಯೊಂದಿಗೆ ಬರುತ್ತದೆ ಮತ್ತು ಕಥೆ-ಹೇಳಿಕೆಗೆ ಆಧಾರವಿಲ್ಲ ಎಂದು ಹೇಳಿದರು.
ಅಮಿಶ್ ತ್ರಿಪಾಠಿ ಮತ್ತು ದೇವದತ್ ಪಟ್ನಾಯಕ್ (Devdutt Pattanaik) ಎಂಬ ಅತ್ಯುತ್ತಮ ಲೇಖಕರು,
ರಾಮಾಯಣ (Ramayana) ಮತ್ತು ಮಹಾಭಾರತದ ಪಾತ್ರಗಳನ್ನು ಆಧರಿಸಿ ಕಾದಂಬರಿಗಳನ್ನು ಬರೆಯುತ್ತಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಾವೇದ್ ಅವರು,
ಇದನ್ನೂ ಓದಿ : https://vijayatimes.com/puneeth-rajkumar-biography/
“ಹಿಂದೂ ಧರ್ಮದೊಳಗೆ ಸಾಂಸ್ಕೃತಿಕ ಅಂಶಗಳೊಂದಿಗೆ ಮಾನವೀಯ ಮೌಲ್ಯಗಳು ಮುಂಚೂಣಿಗೆ ಬರುತ್ತವೆ. ಅಂತಹ ಸ್ಥಳದಲ್ಲಿ, ಕಥೆ ಹೇಳುವ ನೆಲೆ ಈಗಾಗಲೇ ಇದೆ.
ಇಸ್ಲಾಂ ತನ್ನದೇ ಆದ ವಿಶೇಷ ನಿಯಮಗಳು ಮತ್ತು ನೀತಿ ಸಂಹಿತೆಗಳನ್ನು ಹೊಂದಿದೆ. ಅವುಗಳನ್ನು ಮುರಿಯುವುದು ತುಂಬಾ ಕಷ್ಟ. ಹಾಗಾಗಿ ಇಲ್ಲಿ ಕಥೆಯನ್ನು ಹೇಳಲು ಯಾವುದೇ ಆಧಾರವಿಲ್ಲ!
ಹೊಸ ಕಾದಂಬರಿಯಲ್ಲಿ ಕೆಲಸ ಮಾಡುತ್ತಿದ್ದೀರಾ ಎಂಬ ಪ್ರಶ್ನೆಗೆ, ತಮ್ಮ ಬರಹಗಳಲ್ಲಿ ಮನುಷ್ಯನ ಅಸ್ತಿತ್ವವಾದದ ಸಂದಿಗ್ಧತೆಗಳನ್ನು ಹೆಚ್ಚಾಗಿ ಸ್ಪರ್ಶಿಸುವ ಜಾವೇದ್, “ಅಭಿ ತೋ ಕಿಸಿ ವಿಷಯ್ ನೆ ಮುಜೆ ಚುನಾ ನಹೀ ಹೈ.