ಸ್ಯಾಂಡಲ್ ವುಡ್ ನಲ್ಲಿ ಕನಸು ಮೂಡಿಸಿದ ಸಿನಿಮಾ ಕನಸು ಮಾರಾಟಕ್ಕಿದೆ.ಸದ್ಯ ರಿಲೀಸ್ ಗೂ ಮುನ್ನವೇ ಗಾಂಧೀನಗರದ ಗಲ್ಲಿಗಲ್ಲಿಯಲ್ಲು ಬರೀ ಕನಸು ಮಾರಾಟಕ್ಕಿದೆ ಸಿನಿಮಾದ್ದೇ ಗುಲ್ಲೆಬ್ಬಿದೆ. . ಜೊತೆಗೆ ಸಿನಿಮಾನು ಸೇಲ್ ಗೆ ರೆಡಿಯಾಗ್ಬಿಟ್ಟಿದೆ. ಪಕ್ಕಾ ಕರಾವಳಿ ಸೊಗಡಿನ ಕಂಪನ್ನು ಸೂಸೋದರ ಜೊತೆಗೆ ಕರಾವಳಿ ತಂಡದ ಕೈ ಚಳಕದಿಂದ ಸಿನಿಮಾ ತಯಾರಾಗಿದ್ದು ಬೆಳ್ಳಿತೆರೆಯಲ್ಲಿ ಚಿತ್ರ ಶೈನ್ ಆಗಲೂ ಮಾತ್ರ ಬಾಕಿ ಇದೆ .ಹೊಸಬರೇ ತಮ್ಮ ಹಲವಾರು ಕನಸುಗಳನ್ನು ಹೊತ್ತು ಕಟ್ಟಿದ ಚಿತ್ರವೇ ಕನಸು ಮಾರಾಟಕ್ಕಿದೆ. ಈ ಚಿತ್ರ ಸಾಕಷ್ಟು ಸಸ್ಪೆನ್ಸ್ ಳನ್ನು ಪ್ರೇಕ್ಷಕರ ಮುಂದೆ ಪಕ್ಕಾ ತೆರೆದಿಡಲಿದೆ .
ನಿರೀಕ್ಷೆಗಳ ಮೇಲೆ ನಿರೀಕ್ಷೆಗಳನ್ನು ಹೆಚ್ಚಿಸಿರೋ ಕನಸು ಸಿನಿಮಾ ತಂಡ ಸದ್ಯ ಪುಂಡಿ ಸಾಂಗನ್ನು ರಿಲೀಸ್ ಮಾಡಿದ್ದು ಪ್ರತಿ ಸಾಂಗ್ ಪ್ರೀಯರಲ್ಲೂ ಹಾಡು ಮೋಡಿಮಾಡ್ತಿದೆ. ಹದಿ ಹರೆಯದ ಯುವಕರನ ನಿದ್ದೆಗೆಡಿಸಲು ಪುಂಡಿ ಸಾಂಗ್ ತಯಾರಾಗಿದ್ದು ; ಕಾಲೇಜು ಹುಡುಗರಿಗಾಗಿಯೇ ಈ ಹಾಡನ್ನು ರಚಿಸಿದ್ದು ಪುಂಡಿ ಅಂದ್ರೇನು ? ಪುಂಡಿಯಿಂದ ಏನೆಲ್ಲಾ ಆಗುತ್ತೆ ಅನ್ನೋದು ಈ ಸಾಂಗ್ ನಲ್ಲಿದೆ ..
ಈಗಾಗಲೇ ಕನಸು ಮಾರಾಟಕ್ಕಿದೆ ಚಿತ್ರ ತನ್ನ ವಿಭಿನ್ನ ಪ್ರಯತ್ನಗಳ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗಮನ ಸೆಳೆದಿದ್ದು ಸಿನಿಮಾದ ಟೀಸರ್ ಮತ್ತಷ್ಟು ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಚಿತ್ರಕ್ಕೆ ಮೊದಲಬಾರಿ ಸ್ಮಿತೇಶ್ ಎಸ್ ಬಾರ್ಯ ಆಕ್ಷನ್ ಕಟ್ ಹೇಳಿದ್ದು ನಿರ್ಮಾಣದ ಹೊಣೆಯನ್ನು ಮಡಿಕೇರಿಯ ಶಿವಕುಮಾರ್ ಹೊತ್ತಿದ್ದಾರೆ .ತಾರಾಂಗಣದಲ್ಲಿ ನಾಯಕ ನಾಯಕಿಯಾಗಿ ಮಿಂಚಿದ್ದು ಉಳಿದಂತೆ ಹಿರಿಯ ನಟ ಸಿದ್ಲಿಂಗು ಶ್ರೀದರ್ , ಕಾಮಿಡಿ ಕಿಲಾಡಿ ಖ್ಯಾತಿಯ ಗೋವೀಂದೇಗೌಡ , ಸೂರ್ಯ ಕುಂದಾಪುರ ಧೀರಜ್ ಮಂಗಳೂರು ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ .
ಕನಸು ಮಾರಾಟಕ್ಕಿದೆ ಸಿನಿಮಾ ದ.ಕ , ಮಡಿಕೇರಿ, ಹಾಸನ ಬೆಂಗಳೂರು ಸುತ್ತ ಮುತ್ತ ಚಿತ್ರೀಕರಣ ನಡೆದಿದ್ದು ಜನವರಿ ೧೫ ರಂದು ಚಿತ್ರ ಟಾಕೀಸ್ ಓಟಿಟಿ ಆಫ್ ಮೂಲಕ ಬಿಡುಗಡೆಯಾಗಲಿದೆ .. ಇನ್ನು ಕನಸು ಮಾರಾಟಕಿಕ್ಕಿದೆ ಸಿನಿಮಾ ತಂಡ ಸಾಮಾಜಿಕ ಕಾರ್ಯದಲ್ಲೂ ತೊಡಗಿಕೊಂಡಿದ್ದು , ಅನೇಕ ಬಡ ಜೀವಗಳಿಗೆ ಸಹಾಯ ಹಸ್ತವನ್ನು ನೀಡುತ್ತಿದೆ .. ಒಟ್ಟಾರೆ ತೆರೆಮೇಲೆ ಬರಲು ರೆಡಿಯಾಗಿರೋ ಕನಸು ಮಾರಾಟಕ್ಕಿದೆ ..ಸಿನಿಮಾ ಜನರ ಕನಸಲ್ಲು ಬಂದು ಡಿಸ್ಟಬ್ ಮಾಡಲಿದೆ ..
ದೀಪಿಕಾ ವಿಜಯ ಟೈಮ್ಸ್ ಬೆಂಗಳೂರು