• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Sports

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಸೆಮಿಫೈನಲ್‌ಗೆ ಕರ್ನಾಟಕ

Preetham Kumar P by Preetham Kumar P
in Sports
ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಸೆಮಿಫೈನಲ್‌ಗೆ ಕರ್ನಾಟಕ
0
SHARES
0
VIEWS
Share on FacebookShare on Twitter

ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕರ್ನಾಟಕ ತಂಡ ಬಂಗಾಳದ ವಿರುದ್ಧ ರೋಚಕವಾಗಿ ಗೆಲುವು ಸಾಧಿಸಿದೆ. ಸೂಪರ್ ಓವರ್‌ನಲ್ಲಿ ಮಿಂಚಿದ ಕರ್ನಾಟಕದ ಬೌಲರ್ ಕಾರಿಯಪ್ಪ ಸುಲಭ ಗುರಿ ಪಡೆಯಲು ಕಾರಣವಾದರು. ನಂತರ ಕರ್ನಾಟಕ ಈ ಗುರಿಯನ್ನು ಸುಲಭವಾಗಿ ತಲುಪುವಲ್ಲಿ ಯಶಸ್ವಿಯಾಗಿದ್ದು ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.

ಬಂಗಾಳ ತಂಡ ಈ ಪಂದ್ಯದಲ್ಲಿ ಉತ್ತಮವಾಗಿ ರನ್ ಗಳಿಸುತ್ತಾ ಸಾಗಿದರೂ ಕೂಡ ಕರ್ನಾಟಕ ವಿಕೆಟ್ ಪಡೆಯುತ್ತಾ ಸಾಗಿತ್ತು. ಪಂದ್ಯದುದ್ದಕ್ಕೂ ಒಮ್ಮೆ ಕರ್ನಾಟಕ ಮೇಲುಗೈ ಸಾಧಿಸಿದರೆ ಮತ್ತೊಮ್ಮೆ ಬಂಗಾಳ ಮೇಲುಗೈ ಸಾಧಿಸುತ್ತಾ ಸಾಗಿತ್ತು. ಕಡೆಗೆ ಅಂತಿಮ ಓವರ್‌ನಲ್ಲಿ 20 ರನ್‌ಗಳಿಸುವ ಸವಾಲು ಪಡೆಯಿತು ಬಂಗಾಳ. ಈ ಕಠಿಣ ಸವಾಲಿನಲ್ಲಿಯೂ ಬಹುತೇಕ ಯಶಸ್ಸು ಸಾಧಿಸಿದ ಬಂಗಾಳ 19.5 ಓವರ್‌ನಲ್ಲಿ ಪಂದ್ಯವನ್ನು ಟೈ ಮಾಡಿಕೊಂಡಿತ್ತು. ಅಂತಿಮ ಒಂದು ಎಸೆತದಲ್ಲಿ ಒಂದು ರನ್‌ಗಳಿಸುವ ಸವಾಲು ಬಂಗಾಳದ ಮುಂದಿತ್ತು. ಆದರೆ ಈ ಸಂದರ್ಭದಲ್ಲಿ ಮನೀಶ್ ಪಾಂಡೆಯ ಮಿಂಚಿನ ಫೀಲ್ಡಿಂಗ್‌ನಿಂದಾಗಿ ಕರ್ನಾಟಕ ತಂಡ ಪಂದ್ಯವನ್ನು ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು

ಸೂಪರ್‌ ಓವರ್‌ನಲ್ಲಿ ಗೆದ್ದ ಕರ್ನಾಟಕ :  ಸೂಪರ್ ಓವರ್‌ನಲ್ಲಿ ಕರ್ನಾಟಕಕ್ಕೆ ಗೆಲುವು ಇನ್ನು ಈ ಕ್ವಾರ್ಟರ್‌ಫೈನಲ್ ಪಂದ್ಯ ರೋಚಕ ಟೈ ಫಲಿತಾಂಶವನ್ನು ಕಂಡ ಕಾರಣ ಸೂಪರ್ ಓವರ್‌ನಲ್ಲಿ ಪಲಿತಾಂಶವನ್ನು ಪಡೆಯಲಾಯಿತು. ಈ ಸೂಪರ್ ಓವರ್‌ನಲ್ಲಿ ಬಂಗಾಳ ಮೊದಲಿಗೆ ಬ್ಯಾಟಿಂಗ್ ನಡೆಸಿತು. ಕರ್ನಾಟಕದ ಪರವಾಗಿ ಬೌಲಿಂಗ್ ದಾಳಿಗಿಳಿದ ಕಾರಿಯಪ್ಪ ಅದ್ಭುತ ಪ್ರದರ್ಶನ ನೀಡಿ ಬಂಗಾಳವನ್ನು ಕೇವಲ 5 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಕರ್ನಾಟಕ ಸೆಮಿಫೈನಲ್‌ಗೆ ಪ್ರವೇಶಿಸಲು ಒಂದು ಓವರ್‌ನಲ್ಲಿ 6 ರನ್‌ಗಳಿಸುವ ಸವಾಲು ಪಡೆಯಿತು. ಕರ್ನಾಟಕ ಪರವಾಗಿ ಬ್ಯಾಟಿಂಗ್‌ಗೆ ನಾಯಕ ಮನೀಶ್ ಪಾಂಡೆ ಹಾಗೂ ಕರುಣ್ ನಾಯರ್ ಕಣಕ್ಕಿಳಿದರು. ಮೊದಲ ಎಸೆತದಲ್ಲಿ ಮನೀಶ್ ಪಾಂಡೆ ಎರಡು ರನ್ ಗಳಿಸಿದರು. ಮುಖೇಶ್ ಕುಮಾರ್ ಎಸೆದ ಎರಡನೇ ಎಸೆತವನ್ನು ಮನೀಶ್ ಪಾಂಡೆ ಭರ್ಜರಿಯಾಗಿ ಸಿಕ್ಸರ್‌ಗೆ ಅಟ್ಟಿದರು. ಈ ಮೂಲಕ ಕರ್ನಾಟಕ ಅದ್ಭುತವಾದ ಗೆಲುವು ಸಾಧಿಸಿದೆ. ಈ ಗೆಲುವು ಕರ್ನಾಟಕಕ್ಕೆ ಸೆಮಿಫೈನಲ್‌ನ ಟಿಕೆಟ್ ನೀಡಿದೆ. ಸೆಮಿಫೈನಲ್‌ನಲ್ಲಿ ಕರ್ನಾಟಕ ವಿದರ್ಭ ತಂಡವನ್ನು ಎದುರಿಸಲಿದೆ.

Related News

ಎಂ.ಎಸ್‌ ಧೋನಿ ಅವರಿಗೆ ನಿಜವಾದ ವಯಸ್ಸು41. ಧೋನಿ ಅವರ ಬೈಸಿಪ್ ಕಂಡು ಫಿದಾ ಆದ ನೆಟ್ಟಿಗರು
Sports

ಎಂ.ಎಸ್‌ ಧೋನಿ ಅವರಿಗೆ ನಿಜವಾದ ವಯಸ್ಸು41. ಧೋನಿ ಅವರ ಬೈಸಿಪ್ ಕಂಡು ಫಿದಾ ಆದ ನೆಟ್ಟಿಗರು

March 17, 2023
ಐಪಿಎಲ್‌ ಪಂದ್ಯಗಳಿಗೂ ಮುನ್ನವೇ ಪ್ರ್ಯಾಕ್ಟಿಸ್‌ನಲ್ಲಿ ಅಬ್ಬರಿಸಿದ ಸಿಎಸ್‌ಕೆ ನಾಯಕ ಎಂ.ಎಸ್ ಧೋನಿ ; ವೀಡಿಯೋ ವೈರಲ್
Sports

ಐಪಿಎಲ್‌ ಪಂದ್ಯಗಳಿಗೂ ಮುನ್ನವೇ ಪ್ರ್ಯಾಕ್ಟಿಸ್‌ನಲ್ಲಿ ಅಬ್ಬರಿಸಿದ ಸಿಎಸ್‌ಕೆ ನಾಯಕ ಎಂ.ಎಸ್ ಧೋನಿ ; ವೀಡಿಯೋ ವೈರಲ್

March 13, 2023
ಜಾಮೀನಿನ ಮೇಲೆ ಹೊರಬರುತ್ತಿದ್ದಂತೆ ಪೃಥ್ವಿ ಶಾ ವಿರುದ್ಧ ಕೇಸ್‌ ದಾಖಲಿಸಿದ ಸಪ್ನಾ ಗಿಲ್!
Sports

ಜಾಮೀನಿನ ಮೇಲೆ ಹೊರಬರುತ್ತಿದ್ದಂತೆ ಪೃಥ್ವಿ ಶಾ ವಿರುದ್ಧ ಕೇಸ್‌ ದಾಖಲಿಸಿದ ಸಪ್ನಾ ಗಿಲ್!

February 21, 2023
ರೋಹಿತ್‌-ಧೋನಿ ಇಬ್ಬರಲ್ಲಿ ಐಪಿಎಲ್‌ನ ಅತ್ಯುತ್ತಮ ನಾಯಕ ಯಾರು? ಎಂಬ ಪ್ರಶ್ನೆಗೆ ಸೆಹ್ವಾಗ್ ಕೊಟ್ಟ ಉತ್ತರ ಶಾಕಿಂಗ್!
Sports

ರೋಹಿತ್‌-ಧೋನಿ ಇಬ್ಬರಲ್ಲಿ ಐಪಿಎಲ್‌ನ ಅತ್ಯುತ್ತಮ ನಾಯಕ ಯಾರು? ಎಂಬ ಪ್ರಶ್ನೆಗೆ ಸೆಹ್ವಾಗ್ ಕೊಟ್ಟ ಉತ್ತರ ಶಾಕಿಂಗ್!

February 20, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.